ರಥಯಾತ್ರೆ: ರಾಜಕೀಯದಲ್ಲಿ ಶುದ್ಧತೆ ಇರಬೇಕು ಎಂಬ ಆಶಯದಿಂದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು `ಜನಚೇತನ ಯಾತ್ರೆ~ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಮಂಗಳೂರು, ಉಡುಪಿ, ಕಾರವಾರದ ಮೂಲಕ ಸಾಗುವ ಈ ಯಾತ್ರೆಯ ಅಂಗವಾಗಿ ಇದೇ 30ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ಅಡ್ವಾಣಿ ಅವರೂ ಹಾಜರಿರುತ್ತಾರೆ ಎಂದು ಗೌಡರು ತಿಳಿಸಿದರು.