<p><strong>ಬೆಂಗಳೂರು: </strong>`ಪ್ರಶಸ್ತಿಗಳನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಇರುವವರಿಗೆ ಒಳ್ಳೆಯ ಮನಸ್ಸು ಇರಬೇಕು. ಕನಿಷ್ಠ ಮಟ್ಟದ ಸಾಮಾಜಿಕ ಜವಾಬ್ದಾರಿ ಇರಬೇಕು. ಸಮಾಜದಿಂದ ದೂರ ಇರುವವರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರೆ ಒಳ್ಳೆಯ ಆಯ್ಕೆ ನಿರೀಕ್ಷಿಸುವುದು ಸಾಧ್ಯವಿಲ್ಲ~. ಪ್ರಸಕ್ತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ನಿರ್ಮಾಪಕ - ನಿರ್ದೇಶಕ ಬಿ. ಸುರೇಶ್ ಅವರ ಪ್ರತಿಕ್ರಿಯೆ ಇದು. <br /> <br /> ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ದೊರೆತ ಚಿತ್ರಗಳನ್ನು ರಾಜ್ಯ ಚಲನಚಿತ್ರ ಆಯ್ಕೆ ಸಮಿತಿಗಳು ಉದ್ದೇಶಪೂರ್ವಕವಾಗಿ ಹೊರಗಿಡುತ್ತಿವೆಯಾ? ಸದಭಿರುಚಿ ಚಿತ್ರಗಳನ್ನು ಗುರ್ತಿಸುವಲ್ಲಿ ರಾಜ್ಯ ಸರ್ಕಾರ ಎಡವುತ್ತಿದೆಯಾ? ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಹೊರಬಿದ್ದಾಗಲೆಲ್ಲ ಮತ್ತೆ ಮತ್ತೆ ಚರ್ಚೆಗೆ ಬರುತ್ತಿರುವ ಪ್ರಶ್ನೆಗಳಿವು. ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತ ನಾಡಿದ ಸುರೇಶ್, ರಾಜ್ಯ ಪ್ರಶಸ್ತಿಗಳ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.<br /> <br /> `ನೈಸ್ ಕಾರಿಡಾರ್ಗೆ ಅನುಮತಿ ಕೊಟ್ಟವರು ಸರ್ಕಾರದಲ್ಲಿ ಇರುವು ದರಿಂದ ನನ್ನ ಪುಟ್ಟಕ್ಕನ ಹೈವೇ ಚಿತ್ರಕ್ಕೆ ಪ್ರಶಸ್ತಿ ನಿರಾಕರಿಸಿರುವುದು ಸಹಜವೇ ಆಗಿದೆ. ಆದರೆ, ಈ ಕಾಲದ ಸಮಸ್ಯೆ ಯಾದ ಹಿರಿಯ ತಲೆಮಾರಿನವರ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ, ಶಿವರಾಮ ಕಾರಂತರ ಕಾದಂಬರಿ ಆಧರಿಸಿದ `ಬೆಟ್ಟದ ಜೀವ~ ಚಿತ್ರವನ್ನು ಪ್ರಶಸ್ತಿ ಪಟ್ಟಿಯಿಂದ ಹೊರಗಿಟ್ಟಿ ರುವುದು ತಪ್ಪು. <br /> <br /> ಶೇಖರ್ ನಿರ್ದೇಶನದ `ಐದೊಂದ್ಲ ಐದು~ ರೀತಿಯ ಪ್ರಯೋಗಶೀಲ ಚಿತ್ರವನ್ನು ಕೂಡ ಆಯ್ಕೆ ಸಮಿತಿ ಗುರ್ತಿಸಬೇಕಿತ್ತು. ಕಮರ್ಷಿಯಲ್ ಚಿತ್ರಗಳಿಗೆ ಪ್ರಶಸ್ತಿ ನೀಡಬೇಕು ಎನ್ನುವುದಾದರೆ `ಸೂಪರ್~ ಚಿತ್ರಕ್ಕಿಂತಲೂ ಒಳ್ಳೆಯ ಚಿತ್ರಗಳಿದ್ದವು~ ಎಂದರು.<br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಗೆ ಕೂಡ, ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳನ್ನು ಸಾರಾಸಾಗಟಾಗಿ ಪಕ್ಕಕ್ಕೆ ಇಟ್ಟಿರುವುದು ಸಮ್ಮತವಲ್ಲ. `ತಾತ್ವಿಕ ನಿಲು ವಿಲ್ಲದೆ ಕೇವಲ ಗ್ಲಾಮರ್ ವಿಜೃಂಭ ಣೆಯ ಚಿತ್ರಕ್ಕೆ ಮಣೆ ಹಾಕುವುದು ಸರಿಯಲ್ಲ~ ಎನ್ನುವ ಅನಿಸಿಕೆ ಅವರದು.<br /> <br /> 2010ರ ಯಶಸ್ವೀ ಚಿತ್ರಗಳಲ್ಲಿ ಒಂದಾದ `ಒಲವೇ ಮಂದಾರ~ ಚಿತ್ರದ ನಿರ್ದೇಶಕ ಜಯತೀರ್ಥ ಅವರಿಗೂ ತಮ್ಮ ಚಿತ್ರಕ್ಕೆ ಪ್ರಶಸ್ತಿ ಬಾರದೇ ಹೋದ ಬಗ್ಗೆ ನಿರಾಶೆಯಿದೆ. `ಪ್ರಶಸ್ತಿ ಪಟ್ಟಿ ಪ್ರಕಟವಾದ ತಕ್ಷಣ ನಿರ್ಮಾಪಕರಿಗೆ ಫೋನ್ ಮಾಡಿ ಪ್ರಾಮಾಣಿಕವಾಗಿ ಕ್ಷಮೆ ಕೋರಿದೆ. ಒಳ್ಳೆಯ ಸಿನಿಮಾ ರೂಪಿಸುವ ಹಿನ್ನೆಲೆಯಲ್ಲಿ ಅವರಿಗೆ ಅನೇಕ ಆಸೆಗಳನ್ನು ತೋರಿಸಿದ್ದೆ. <br /> <br /> ಆದರೆ, ನಮ್ಮ ಆಸೆಗಳೆಲ್ಲ ಹುಸಿಯಾದವು. ಭ್ರಷ್ಟಾಚಾರ ಮಾಡುವುದು ನಮಗೆ ಗೊತ್ತಿಲ್ಲ. ಯಾರನ್ನೂ ನಾನು ಪರಿಚಯ ಮಾಡಿಕೊಂಡಿಲ್ಲ~ ಎಂದ ಅವರು, `ಯಾತಕ್ಕಾಗಿ ಒಳ್ಳೆಯ ಸಿನಿಮಾ ಮಾಡಬೇಕು ಅನ್ನಿಸುತ್ತಿದೆ~ ಎಂದು ತಮ್ಮ ನಿರಾಶೆ ತೋಡಿಕೊಂಡರು. <br /> <br /> `ಬೆಟ್ಟದ ಜೀವ~ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ದೇಶಕ ಪಿ.ಶೇಷಾದ್ರಿ ಅವರು ತಮ್ಮ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯದೇ ಹೋದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ, ಒಳ್ಳೆಯ ಚಿತ್ರಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎನ್ನುವ ಅಸಮಾಧಾನ ಅವರ ಮಾತುಗಳಲ್ಲಿತ್ತು.<br /> <br /> `ಕಳೆದ ಏಳೆಂಟು ವರ್ಷಗಳಿಂದಲೂ ಒಳ್ಳೆಯ ಚಿತ್ರಗಳನ್ನು ಕಡೆಗಣಿಸಲಾಗುತ್ತಿದೆ. ಅದರಲ್ಲೂ, ಕಳೆದ ಮೂರು ವರ್ಷಗಳಿಂದ ಸದಭಿರುಚಿಯ ಚಿತ್ರಗಳಿಗೆ ಸರ್ಕಾರ ಸತತವಾಗಿ ಪೆಟ್ಟು ಕೊಟ್ಟಿದೆ. ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನಮ್ಮ ಸರ್ಕಾರ ಹಲವು ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಈ ಬಗ್ಗೆ ನಾವು ಹೋದಲ್ಲೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಇದೇ ಸರ್ಕಾರ ಪ್ರಶಸ್ತಿಗಳನ್ನು ನೀಡುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ~.<br /> <br /> `ಸೂಪರ್ ಚಿತ್ರಕ್ಕೆ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ಸಿನಿಮಾದ ಗುಣಮಟ್ಟದ ಬಗ್ಗೆ ನಾನು ಮಾತನಾಡಲಾರೆ. ಆದರೆ, ಚಿತ್ರದ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್ ಅವರೇ ಆಯ್ಕೆ ಸಮಿತಿಯಲ್ಲಿದ್ದಾರೆ. ನೈತಿಕವಾಗಿ ಇದು ಸರಿಯಾದುದಲ್ಲ~ ಎಂದು ಶೇಷಾದ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಪ್ರಶಸ್ತಿಗಳನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಇರುವವರಿಗೆ ಒಳ್ಳೆಯ ಮನಸ್ಸು ಇರಬೇಕು. ಕನಿಷ್ಠ ಮಟ್ಟದ ಸಾಮಾಜಿಕ ಜವಾಬ್ದಾರಿ ಇರಬೇಕು. ಸಮಾಜದಿಂದ ದೂರ ಇರುವವರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರೆ ಒಳ್ಳೆಯ ಆಯ್ಕೆ ನಿರೀಕ್ಷಿಸುವುದು ಸಾಧ್ಯವಿಲ್ಲ~. ಪ್ರಸಕ್ತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ನಿರ್ಮಾಪಕ - ನಿರ್ದೇಶಕ ಬಿ. ಸುರೇಶ್ ಅವರ ಪ್ರತಿಕ್ರಿಯೆ ಇದು. <br /> <br /> ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ದೊರೆತ ಚಿತ್ರಗಳನ್ನು ರಾಜ್ಯ ಚಲನಚಿತ್ರ ಆಯ್ಕೆ ಸಮಿತಿಗಳು ಉದ್ದೇಶಪೂರ್ವಕವಾಗಿ ಹೊರಗಿಡುತ್ತಿವೆಯಾ? ಸದಭಿರುಚಿ ಚಿತ್ರಗಳನ್ನು ಗುರ್ತಿಸುವಲ್ಲಿ ರಾಜ್ಯ ಸರ್ಕಾರ ಎಡವುತ್ತಿದೆಯಾ? ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಹೊರಬಿದ್ದಾಗಲೆಲ್ಲ ಮತ್ತೆ ಮತ್ತೆ ಚರ್ಚೆಗೆ ಬರುತ್ತಿರುವ ಪ್ರಶ್ನೆಗಳಿವು. ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತ ನಾಡಿದ ಸುರೇಶ್, ರಾಜ್ಯ ಪ್ರಶಸ್ತಿಗಳ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.<br /> <br /> `ನೈಸ್ ಕಾರಿಡಾರ್ಗೆ ಅನುಮತಿ ಕೊಟ್ಟವರು ಸರ್ಕಾರದಲ್ಲಿ ಇರುವು ದರಿಂದ ನನ್ನ ಪುಟ್ಟಕ್ಕನ ಹೈವೇ ಚಿತ್ರಕ್ಕೆ ಪ್ರಶಸ್ತಿ ನಿರಾಕರಿಸಿರುವುದು ಸಹಜವೇ ಆಗಿದೆ. ಆದರೆ, ಈ ಕಾಲದ ಸಮಸ್ಯೆ ಯಾದ ಹಿರಿಯ ತಲೆಮಾರಿನವರ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ, ಶಿವರಾಮ ಕಾರಂತರ ಕಾದಂಬರಿ ಆಧರಿಸಿದ `ಬೆಟ್ಟದ ಜೀವ~ ಚಿತ್ರವನ್ನು ಪ್ರಶಸ್ತಿ ಪಟ್ಟಿಯಿಂದ ಹೊರಗಿಟ್ಟಿ ರುವುದು ತಪ್ಪು. <br /> <br /> ಶೇಖರ್ ನಿರ್ದೇಶನದ `ಐದೊಂದ್ಲ ಐದು~ ರೀತಿಯ ಪ್ರಯೋಗಶೀಲ ಚಿತ್ರವನ್ನು ಕೂಡ ಆಯ್ಕೆ ಸಮಿತಿ ಗುರ್ತಿಸಬೇಕಿತ್ತು. ಕಮರ್ಷಿಯಲ್ ಚಿತ್ರಗಳಿಗೆ ಪ್ರಶಸ್ತಿ ನೀಡಬೇಕು ಎನ್ನುವುದಾದರೆ `ಸೂಪರ್~ ಚಿತ್ರಕ್ಕಿಂತಲೂ ಒಳ್ಳೆಯ ಚಿತ್ರಗಳಿದ್ದವು~ ಎಂದರು.<br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಗೆ ಕೂಡ, ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳನ್ನು ಸಾರಾಸಾಗಟಾಗಿ ಪಕ್ಕಕ್ಕೆ ಇಟ್ಟಿರುವುದು ಸಮ್ಮತವಲ್ಲ. `ತಾತ್ವಿಕ ನಿಲು ವಿಲ್ಲದೆ ಕೇವಲ ಗ್ಲಾಮರ್ ವಿಜೃಂಭ ಣೆಯ ಚಿತ್ರಕ್ಕೆ ಮಣೆ ಹಾಕುವುದು ಸರಿಯಲ್ಲ~ ಎನ್ನುವ ಅನಿಸಿಕೆ ಅವರದು.<br /> <br /> 2010ರ ಯಶಸ್ವೀ ಚಿತ್ರಗಳಲ್ಲಿ ಒಂದಾದ `ಒಲವೇ ಮಂದಾರ~ ಚಿತ್ರದ ನಿರ್ದೇಶಕ ಜಯತೀರ್ಥ ಅವರಿಗೂ ತಮ್ಮ ಚಿತ್ರಕ್ಕೆ ಪ್ರಶಸ್ತಿ ಬಾರದೇ ಹೋದ ಬಗ್ಗೆ ನಿರಾಶೆಯಿದೆ. `ಪ್ರಶಸ್ತಿ ಪಟ್ಟಿ ಪ್ರಕಟವಾದ ತಕ್ಷಣ ನಿರ್ಮಾಪಕರಿಗೆ ಫೋನ್ ಮಾಡಿ ಪ್ರಾಮಾಣಿಕವಾಗಿ ಕ್ಷಮೆ ಕೋರಿದೆ. ಒಳ್ಳೆಯ ಸಿನಿಮಾ ರೂಪಿಸುವ ಹಿನ್ನೆಲೆಯಲ್ಲಿ ಅವರಿಗೆ ಅನೇಕ ಆಸೆಗಳನ್ನು ತೋರಿಸಿದ್ದೆ. <br /> <br /> ಆದರೆ, ನಮ್ಮ ಆಸೆಗಳೆಲ್ಲ ಹುಸಿಯಾದವು. ಭ್ರಷ್ಟಾಚಾರ ಮಾಡುವುದು ನಮಗೆ ಗೊತ್ತಿಲ್ಲ. ಯಾರನ್ನೂ ನಾನು ಪರಿಚಯ ಮಾಡಿಕೊಂಡಿಲ್ಲ~ ಎಂದ ಅವರು, `ಯಾತಕ್ಕಾಗಿ ಒಳ್ಳೆಯ ಸಿನಿಮಾ ಮಾಡಬೇಕು ಅನ್ನಿಸುತ್ತಿದೆ~ ಎಂದು ತಮ್ಮ ನಿರಾಶೆ ತೋಡಿಕೊಂಡರು. <br /> <br /> `ಬೆಟ್ಟದ ಜೀವ~ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ದೇಶಕ ಪಿ.ಶೇಷಾದ್ರಿ ಅವರು ತಮ್ಮ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯದೇ ಹೋದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ, ಒಳ್ಳೆಯ ಚಿತ್ರಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎನ್ನುವ ಅಸಮಾಧಾನ ಅವರ ಮಾತುಗಳಲ್ಲಿತ್ತು.<br /> <br /> `ಕಳೆದ ಏಳೆಂಟು ವರ್ಷಗಳಿಂದಲೂ ಒಳ್ಳೆಯ ಚಿತ್ರಗಳನ್ನು ಕಡೆಗಣಿಸಲಾಗುತ್ತಿದೆ. ಅದರಲ್ಲೂ, ಕಳೆದ ಮೂರು ವರ್ಷಗಳಿಂದ ಸದಭಿರುಚಿಯ ಚಿತ್ರಗಳಿಗೆ ಸರ್ಕಾರ ಸತತವಾಗಿ ಪೆಟ್ಟು ಕೊಟ್ಟಿದೆ. ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನಮ್ಮ ಸರ್ಕಾರ ಹಲವು ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಈ ಬಗ್ಗೆ ನಾವು ಹೋದಲ್ಲೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಇದೇ ಸರ್ಕಾರ ಪ್ರಶಸ್ತಿಗಳನ್ನು ನೀಡುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ~.<br /> <br /> `ಸೂಪರ್ ಚಿತ್ರಕ್ಕೆ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ಸಿನಿಮಾದ ಗುಣಮಟ್ಟದ ಬಗ್ಗೆ ನಾನು ಮಾತನಾಡಲಾರೆ. ಆದರೆ, ಚಿತ್ರದ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್ ಅವರೇ ಆಯ್ಕೆ ಸಮಿತಿಯಲ್ಲಿದ್ದಾರೆ. ನೈತಿಕವಾಗಿ ಇದು ಸರಿಯಾದುದಲ್ಲ~ ಎಂದು ಶೇಷಾದ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>