ಹಳೇಬೀಡು: ಸಾಲ ಬಾಧೆಯಿಂದ ಬೇಸತ್ತ ರೈತ ಶಂಕರಾಚಾರ್ (57) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜನಶಿರಿಯೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೂರು ಎಕರೆ ಜಮೀನಿಲ್ಲಿ ಕೃಷಿ ಮಾಡಿಕೊಂಡು ಶಂಕರಾಚಾರ್ ಕುಟುಂಬ ನಿರ್ವಹಿಸುತ್ತಿದ್ದರು. ‘ಮೂರು ವರ್ಷಗಳಿಂದ ತೀವ್ರ ಬರಗಾಲ ಬಂದಿದ್ದರಿಂದ ಕೊಳವೆ ಬಾವಿ ಬತ್ತಿ ಹೋಗಿದ್ದಲ್ಲದೆ, ಹೊಸದಾಗಿ 3 ಬಾವಿ ತೋಡಿಸಿದರೂ ಹನಿ ನೀರೂ ಬರಲಿಲ್ಲ. ಬ್ಯಾಂಕ್ ಸಾಲ ರೂ.85,000 ಹಾಗೂ ಕೈಸಾಲ ರೂ.1.5 ಲಕ್ಷ ಮಾಡಿಕೊಂಡಿದ್ದರು. ಇದರಿಂದ ಅವರು ಆಘಾತಕ್ಕೊಳಗಾಗಿದ್ದರು’ ಎಂದು ಕುಟುಂಬದವರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.