ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಹೊಯ್ಸಳರು, ವಿಜಯನಗರದ ಅರಸರ ಕಾಲದಲ್ಲಿ ಬಸದಿಗಳು ನಿರ್ಮಾಣವಾದವು. ರಾಜ್ಯದಲ್ಲಿ ಮಹಿಳೆಯರು ನಿರ್ಮಿಸಿರುವ 1,036 ಜಿನಮಂದಿರಗಳ ಪೈಕಿ 330 ಶಿಥಿಲವಾಗಿವೆ. ಈ ಸಂಖ್ಯೆಯನ್ನು ಮೀರಿಸುವಂತೆ ಅತ್ತಿಮಬ್ಬೆ ನಾಡಿನಾದ್ಯಂತ 1,501 ಬಸದಿಗಳನ್ನು ನಿರ್ಮಿಸಿದರು. ಅಂದು ಆರಂಭವಾದ ಬಸದಿಗಳ ನಿರ್ಮಾಣ ಕಾರ್ಯ ಇಂದಿಗೂ ನಿಂತಿಲ್ಲ. ಕೆಲ ವರ್ಷಗಳ ಹಿಂದೆ ಕಾಂಚನಾಮತಿ ಮಾತಾಜಿ, ರಾಜಮತಿ ಮಾತಾಜಿ ಬಸದಿಗಳನ್ನು ನಿರ್ಮಿಸಿದ್ದಾರೆ. ವರ್ಷದ ಹಿಂದೆ ಬೆಂಗಳೂರು, ಕನಕಗಿರಿಯಲ್ಲಿ ನಿರ್ಮಾಣ ಮಾಡಲಾಗಿವೆ. ಇವು ಕೇವಲ ವಾಸ್ತುಶಿಲ್ಪ ಪ್ರದರ್ಶಿಸುವ ಕಟ್ಟಡಗಳಲ್ಲ. ಸಮಾಜ ಒಗ್ಗೂಡಿಸುವ ಧಾರ್ಮಿಕ ಶ್ರದ್ಧಾ ಕೇಂದ್ರ. ಸಂಸ್ಕೃತಿಯನ್ನು ರಕ್ಷಿಸುವ ತಾಣ ಎನ್ನಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.