ಬೆಂಗಳೂರು: ಗೋಕಾಕ್ನ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಯಂತ್ರೋಪಕರಣ ಮತ್ತು ಸಕ್ಕರೆ ಅಡವಿಟ್ಟು ಸಾಲ ಪಡೆದು ಯೂನಿಯನ್ ಬ್ಯಾಂಕ್ಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಆರ್.ಪಾಟೀಲ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಉಪಾಧ್ಯೆ ಮತ್ತು ಮಾರಾಟ ವಿಭಾಗದ ಉಸ್ತುವಾರಿ ನೌಕರ ಎಸ್.ಎಂ.ಹಿತ್ತಲಮನಿ ಅವರನ್ನು ಸಿಬಿಐ ಪೊಲೀಸರು ಬುಧವಾರ ಬಂಧಿಸಿದ್ದಾರೆ.