<p><strong>ಬೆಂಗಳೂರು (ಐಎಎನ್ಎಸ್):</strong> ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಈ ವಾರಾಂತ್ಯದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಸ್ಪೇನ್ ಮೂಲದ ಪರಸ್ಪರ ಟೊಮ್ಯಾಟೊಗಳಲ್ಲಿ ಹೊಡೆದಾಡುವ `ಟೊಮ್ಯಾಟೊ~ ಹಬ್ಬವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. <br /> <br /> ಈ ಕುರಿತು ಬೆಂಗಳೂರು ಹಾಗೂ ಮೈಸೂರಿನ ಪೊಲೀಸರಿಗೆ ನಿರ್ದೇಶನ ನೀಡಿರುವ ಮುಖ್ಯಮಂತ್ರಿ ಸದಾನಂದಗೌಡರು ಟೊಮ್ಯಾಟೊ ಹಬ್ಬಕ್ಕೆ ಅನುಮತಿ ನೀಡಬಾರದೆಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಪರಸ್ಪರ ಟೊಮ್ಯಾಟೊಗಳ ಮೂಲಕ ಹೊಡೆದಾಡುವ ಟೊಮ್ಯಾಟೊ ಹಬ್ಬ ನಮ್ಮ ಸಂಸ್ಕೃತಿಗೆ ವಿರುದ್ದ ಹಾಗೂ ಇದರಿಂದ ಪೌಷ್ಠಿಕಾಂಶಯುಕ್ತ ಟೊಮ್ಯಾಟೊಗಳನ್ನು ವ್ಯರ್ಥವಾಗಿ ನಾಶಪಡಿಸಿದಂತಾಗುತ್ತದೆ ಎಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. <br /> <br /> ಪ್ರವಾಸಿ ಸಂಸ್ಥೆ ಗೊಇಬಿಬೊ ಹಾಗೂ ಉಡುಪು ಉದ್ಯಮ ಕಿಲ್ಲರ್ ಜೀನ್ಸ್ ಸಂಸ್ಥೆಗಳು ಏರ್ಪಡಿಸಲು ಉದ್ದೇಶಿಸಿದ್ದ ಟೊಮ್ಯಾಟೊ ಹಬ್ಬಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ನಿರ್ದೇಶಕರಾದ ಸುನೀಲ್ ಕುಮಾರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು (ಐಎಎನ್ಎಸ್):</strong> ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಈ ವಾರಾಂತ್ಯದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಸ್ಪೇನ್ ಮೂಲದ ಪರಸ್ಪರ ಟೊಮ್ಯಾಟೊಗಳಲ್ಲಿ ಹೊಡೆದಾಡುವ `ಟೊಮ್ಯಾಟೊ~ ಹಬ್ಬವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. <br /> <br /> ಈ ಕುರಿತು ಬೆಂಗಳೂರು ಹಾಗೂ ಮೈಸೂರಿನ ಪೊಲೀಸರಿಗೆ ನಿರ್ದೇಶನ ನೀಡಿರುವ ಮುಖ್ಯಮಂತ್ರಿ ಸದಾನಂದಗೌಡರು ಟೊಮ್ಯಾಟೊ ಹಬ್ಬಕ್ಕೆ ಅನುಮತಿ ನೀಡಬಾರದೆಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಪರಸ್ಪರ ಟೊಮ್ಯಾಟೊಗಳ ಮೂಲಕ ಹೊಡೆದಾಡುವ ಟೊಮ್ಯಾಟೊ ಹಬ್ಬ ನಮ್ಮ ಸಂಸ್ಕೃತಿಗೆ ವಿರುದ್ದ ಹಾಗೂ ಇದರಿಂದ ಪೌಷ್ಠಿಕಾಂಶಯುಕ್ತ ಟೊಮ್ಯಾಟೊಗಳನ್ನು ವ್ಯರ್ಥವಾಗಿ ನಾಶಪಡಿಸಿದಂತಾಗುತ್ತದೆ ಎಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. <br /> <br /> ಪ್ರವಾಸಿ ಸಂಸ್ಥೆ ಗೊಇಬಿಬೊ ಹಾಗೂ ಉಡುಪು ಉದ್ಯಮ ಕಿಲ್ಲರ್ ಜೀನ್ಸ್ ಸಂಸ್ಥೆಗಳು ಏರ್ಪಡಿಸಲು ಉದ್ದೇಶಿಸಿದ್ದ ಟೊಮ್ಯಾಟೊ ಹಬ್ಬಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ನಿರ್ದೇಶಕರಾದ ಸುನೀಲ್ ಕುಮಾರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>