ಹೊನ್ನಾವರಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕ, ಶಿರಸಿಯ ಬಿಳಿಗಿರಿಕೊಪ್ಪದ ಅಬ್ದುಲ್ ಗಫೂರ್ ಅಬ್ದುಲ್ ಜಬ್ಬಾರ್ ಸುಂಠಿ ನಾಪತ್ತೆಯಾಗಿದ್ದರು. ಹೊನ್ನಾವರದಲ್ಲಿ ನಡೆಯುತ್ತಿದ್ದ ಅಹಿತಕರ ಘಟನೆಗಳಿಂದ ಗಫೂರ್ ಬದುಕಿರುವ ಕುರಿತು ಅತನ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇಂದು ಗಫೂರ್ ಪತ್ತೆಯಾಗಿದ್ದಾರೆ.