<p><strong>ರಾಜಧನ ರದ್ದು: ಸಂವಿಧಾನಕ್ಕೆ ತಿದ್ದುಪಡಿ</strong></p>.<p><strong>ನವದೆಹಲಿ, ಸೆ. 2–</strong> ರಾಜಧನ ಮತ್ತು ಮಾಜಿ ಅರಸರ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ರದ್ದುಪಡಿಸುವ ಮಸೂದೆಗೆ ಲೋಕಸಭೆ ಇಂದು ಒಪ್ಪಿಗೆ ನೀಡಿ, ರಾಷ್ಟ್ರದಿಂದ ಅರಸೊತ್ತಿಗೆಯ ಉಳಿಕೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಿತು.</p>.<p>ಇದಕ್ಕೆ ಸಂಬಂಧಿಸಿದ ಐತಿಹಾಸಿಕ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಗತ್ಯ ಬಹುಮತದಿಂದ ಅಂಗೀಕರಿಸಲಾಯಿತು.</p>.<p><strong>ಮಾಜಿ ಅರಸರಿಂದ ಸಂಸತ್ ಸದಸ್ಯರಿಗೆ ಲಂಚದ ಆಮಿಷ</strong></p>.<p><strong>ನವದೆಹಲಿ, ಸೆ. 2–</strong> ರಾಜಧನ ರದ್ದು ಮಸೂದೆ ವಿರುದ್ಧ ಮತ ನೀಡುವುದಕ್ಕಾಗಿ ಸಂಸತ್ ಸದಸ್ಯರಿಗೆ ಲಂಚ ಕೊಡಲು ಮಾಜಿ ಅರಸರು ಪ್ರಯತ್ನಿಸುತ್ತಿದ್ದಾರೆಂದು ಬಲ ಕಮ್ಯುನಿಸ್ಟ್ ಪಕ್ಷದ ಭೂಪೇಶ ಗುಪ್ತ ಅವರು ಇಂದು ರಾಜ್ಯಸಭೆಯಲ್ಲಿ ಆಪಾದಿಸಿದರು.</p>.<p>ಈ ಬಗ್ಗೆ ತಮ್ಮಲ್ಲಿ ನಿರ್ದಿಷ್ಟ ಸಮಾಚಾರವಿದೆಯಂದು ನುಡಿದ ಅವರು ಇದನ್ನು ಸಾಕ್ಷ್ಯ ನೀಡಿ ಋಜುವಾತು ಪಡಿಸುವುದಾಗಿ ಹೇಳಿದರು.</p>.<p>ಮಂಗಳವಾರ ಇಡೀ ರಾತ್ರಿ ಮಾಜಿ ಅರಸರು ಸಂಸತ್ ಸದಸ್ಯರುಗಳನ್ನು ತಮ್ಮ ನಿವಾಸಕ್ಕೆ ಕರೆದೊಯ್ದು ಹಣ ಕೊಡುವುದರಲ್ಲಿ ನಿರತರಾಗಿದ್ದರು ಎಂದು ನುಡಿದ ಅವರು, ಈ ಸಂಬಂಧದಲ್ಲಿ ಸಂಸತ್ತಿನ ನಾಲ್ವರು ಆದಿವಾಸಿ ಸದಸ್ಯರನ್ನು ಹೆಸರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜಧನ ರದ್ದು: ಸಂವಿಧಾನಕ್ಕೆ ತಿದ್ದುಪಡಿ</strong></p>.<p><strong>ನವದೆಹಲಿ, ಸೆ. 2–</strong> ರಾಜಧನ ಮತ್ತು ಮಾಜಿ ಅರಸರ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ರದ್ದುಪಡಿಸುವ ಮಸೂದೆಗೆ ಲೋಕಸಭೆ ಇಂದು ಒಪ್ಪಿಗೆ ನೀಡಿ, ರಾಷ್ಟ್ರದಿಂದ ಅರಸೊತ್ತಿಗೆಯ ಉಳಿಕೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಿತು.</p>.<p>ಇದಕ್ಕೆ ಸಂಬಂಧಿಸಿದ ಐತಿಹಾಸಿಕ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಗತ್ಯ ಬಹುಮತದಿಂದ ಅಂಗೀಕರಿಸಲಾಯಿತು.</p>.<p><strong>ಮಾಜಿ ಅರಸರಿಂದ ಸಂಸತ್ ಸದಸ್ಯರಿಗೆ ಲಂಚದ ಆಮಿಷ</strong></p>.<p><strong>ನವದೆಹಲಿ, ಸೆ. 2–</strong> ರಾಜಧನ ರದ್ದು ಮಸೂದೆ ವಿರುದ್ಧ ಮತ ನೀಡುವುದಕ್ಕಾಗಿ ಸಂಸತ್ ಸದಸ್ಯರಿಗೆ ಲಂಚ ಕೊಡಲು ಮಾಜಿ ಅರಸರು ಪ್ರಯತ್ನಿಸುತ್ತಿದ್ದಾರೆಂದು ಬಲ ಕಮ್ಯುನಿಸ್ಟ್ ಪಕ್ಷದ ಭೂಪೇಶ ಗುಪ್ತ ಅವರು ಇಂದು ರಾಜ್ಯಸಭೆಯಲ್ಲಿ ಆಪಾದಿಸಿದರು.</p>.<p>ಈ ಬಗ್ಗೆ ತಮ್ಮಲ್ಲಿ ನಿರ್ದಿಷ್ಟ ಸಮಾಚಾರವಿದೆಯಂದು ನುಡಿದ ಅವರು ಇದನ್ನು ಸಾಕ್ಷ್ಯ ನೀಡಿ ಋಜುವಾತು ಪಡಿಸುವುದಾಗಿ ಹೇಳಿದರು.</p>.<p>ಮಂಗಳವಾರ ಇಡೀ ರಾತ್ರಿ ಮಾಜಿ ಅರಸರು ಸಂಸತ್ ಸದಸ್ಯರುಗಳನ್ನು ತಮ್ಮ ನಿವಾಸಕ್ಕೆ ಕರೆದೊಯ್ದು ಹಣ ಕೊಡುವುದರಲ್ಲಿ ನಿರತರಾಗಿದ್ದರು ಎಂದು ನುಡಿದ ಅವರು, ಈ ಸಂಬಂಧದಲ್ಲಿ ಸಂಸತ್ತಿನ ನಾಲ್ವರು ಆದಿವಾಸಿ ಸದಸ್ಯರನ್ನು ಹೆಸರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>