<p>ಲಾಗೋಸ್ (ಎಪಿ): ದೋಣಿ ದುರಂತದಲ್ಲಿ ಮುಳುಗಿದ್ದ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ಅಟ್ಲಾಂಟಿಕ್ ಸಾಗರದ ತಳದಲ್ಲಿ ಬದುಕಿದ್ದು, ನಂತರ ಪರಿಹಾರ ಕಾರ್ಯಾಚರಣೆಯಿಂದ ಪಾರಾದ ಅಚ್ಚರಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ಇದು ನಡೆದದ್ದು ಸುಮಾರು ಆರು ತಿಂಗಳ ಹಿಂದೆ. ಆ ದುರ್ದಿನ 12 ಜನರಿದ್ದ ದೋಣಿ ‘ಜಾಸ್ಕನ್’ ದುರಂತದಿಂದಾಗಿ ಅಟ್ಲಾಂಟಿಕ್ ತಳ ಸೇರಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಪರಿಹಾರ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.<br /> <br /> ಅದಾಗಲೇ ನಾಲ್ಕು ಶವಗಳನ್ನು ಹೊರತೆಗೆಯಲಾಗಿತ್ತು. ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಬಳಸಲಾಗುತ್ತಿದ್ದ ಟಿ.ವಿ. ಪರದೆಯ ಮೇಲೆ ಕೈ ಒಂದು ಕಾಣಿಸಿತು. ತಕ್ಷಣವೇ ಕಾರ್ಯಕರ್ತರು ಅತ್ತ ಹೋಗುತ್ತಿದ್ದಂತೆ ಆ ಕೈಯಿಯೇ ಸಮೀಪದ ಕಾರ್ಯಕರ್ತನನ್ನು ಬಿಗಿಯಾಗಿ ಅಪ್ಪಿಕೊಂಡುಬಿಟ್ಟಿತು!<br /> <br /> ದೋಣಿಯ ಬಾಣಸಿಗ ನೈಜೀರಿಯಾದ ಹ್ಯಾರಿಸನ್ ಒಡ್ಜೆಗ್ಬಾ ಒಕೀನ್ ಎಂಬಾತನೇ ಹೀಗೆ ಬದುಕಿದ ಪುಣ್ಯಶಾಲಿ !<br /> ಈತ ತನ್ನ ಬಳಿ ಇದ್ದ, ಆಗಲೋ ಈಗಲೋ ಮುಗಿಯುವುದರಲ್ಲಿದ್ದ ಗಾಳಿಯ ಚೀಲದ ನೆರವಿನಿಂದ ಸಮುದ್ರ ತಳದ ಕಗ್ಗತ್ತಲಲ್ಲೂ ಉಸಿರಾಡುತ್ತಾ ಮೂರು ದಿನ ಜೀವ ಹಿಡಿದುಕೊಂಡು ಬದುಕಿದ್ದ.<br /> <br /> ಅವಘಡ ಸಂಭವಿಸಿದಾಗ ಬಾಕ್ಸರ್ಗಳು ಬಳಸುವ ಒಳಉಡುಪು ಮಾತ್ರ ಧರಿಸಿದ್ದ ಒಕೀನ್, ಸಾಗರದಾಳದ ಚಳಿಯಿಂದ ಮೈ ಮರಗಟ್ಟಲು ಆರಂಭವಾಗುತ್ತಿದ್ದಂತೆಯೇ ಹೆಂಡತಿ ಹೇಳಿಕೊಟ್ಟಿದ್ದ ಬೈಬಲ್ನ ಸ್ತುತಿ ಚರಣವೊಂದನ್ನು ಪಠಿಸಲು ಮೊದಲಾದನಂತೆ.<br /> <br /> ಇವತ್ತಿಗೂ ಒಕೀನ್, 72 ಗಂಟೆಗಳ ಜೀವನ್ಮರಣ ಹೋರಾಟದ ಬಳಿಕ ತಾನು ಬದುಕಿರುವುದಕ್ಕೆ ದಿವ್ಯಶಕ್ತಿಯೇ ಕಾರಣ ಎಂದು ನಂಬಿದ್ದಾನೆ. ಈ ದುರಂತದಲ್ಲಿ 11 ನಾವಿಕರು ಸಾವಿಗೀಡಾಗಿದ್ದರು.<br /> <br /> ಡಿಸಿಎನ್ ಡೈವಿಂಗ್ ಎಂಬ ಡಚ್ ಕಂಪೆನಿ ಈ ಕಾರ್ಯಾಚರಣೆ ನಡೆಸಿತ್ತು. ಇದೀಗ ಆರು ತಿಂಗಳ ನಂತರ ಈ ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿಯನ್ನು ಕಂಪೆನಿ ಅಂತರ್ಜಾಲ ದಲ್ಲಿ ಹರಿಬಿಟ್ಟ ನಂತರ ಈ ಘಟನೆ ಬೆಳಕಿಗೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಾಗೋಸ್ (ಎಪಿ): ದೋಣಿ ದುರಂತದಲ್ಲಿ ಮುಳುಗಿದ್ದ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ಅಟ್ಲಾಂಟಿಕ್ ಸಾಗರದ ತಳದಲ್ಲಿ ಬದುಕಿದ್ದು, ನಂತರ ಪರಿಹಾರ ಕಾರ್ಯಾಚರಣೆಯಿಂದ ಪಾರಾದ ಅಚ್ಚರಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ಇದು ನಡೆದದ್ದು ಸುಮಾರು ಆರು ತಿಂಗಳ ಹಿಂದೆ. ಆ ದುರ್ದಿನ 12 ಜನರಿದ್ದ ದೋಣಿ ‘ಜಾಸ್ಕನ್’ ದುರಂತದಿಂದಾಗಿ ಅಟ್ಲಾಂಟಿಕ್ ತಳ ಸೇರಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಪರಿಹಾರ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.<br /> <br /> ಅದಾಗಲೇ ನಾಲ್ಕು ಶವಗಳನ್ನು ಹೊರತೆಗೆಯಲಾಗಿತ್ತು. ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಬಳಸಲಾಗುತ್ತಿದ್ದ ಟಿ.ವಿ. ಪರದೆಯ ಮೇಲೆ ಕೈ ಒಂದು ಕಾಣಿಸಿತು. ತಕ್ಷಣವೇ ಕಾರ್ಯಕರ್ತರು ಅತ್ತ ಹೋಗುತ್ತಿದ್ದಂತೆ ಆ ಕೈಯಿಯೇ ಸಮೀಪದ ಕಾರ್ಯಕರ್ತನನ್ನು ಬಿಗಿಯಾಗಿ ಅಪ್ಪಿಕೊಂಡುಬಿಟ್ಟಿತು!<br /> <br /> ದೋಣಿಯ ಬಾಣಸಿಗ ನೈಜೀರಿಯಾದ ಹ್ಯಾರಿಸನ್ ಒಡ್ಜೆಗ್ಬಾ ಒಕೀನ್ ಎಂಬಾತನೇ ಹೀಗೆ ಬದುಕಿದ ಪುಣ್ಯಶಾಲಿ !<br /> ಈತ ತನ್ನ ಬಳಿ ಇದ್ದ, ಆಗಲೋ ಈಗಲೋ ಮುಗಿಯುವುದರಲ್ಲಿದ್ದ ಗಾಳಿಯ ಚೀಲದ ನೆರವಿನಿಂದ ಸಮುದ್ರ ತಳದ ಕಗ್ಗತ್ತಲಲ್ಲೂ ಉಸಿರಾಡುತ್ತಾ ಮೂರು ದಿನ ಜೀವ ಹಿಡಿದುಕೊಂಡು ಬದುಕಿದ್ದ.<br /> <br /> ಅವಘಡ ಸಂಭವಿಸಿದಾಗ ಬಾಕ್ಸರ್ಗಳು ಬಳಸುವ ಒಳಉಡುಪು ಮಾತ್ರ ಧರಿಸಿದ್ದ ಒಕೀನ್, ಸಾಗರದಾಳದ ಚಳಿಯಿಂದ ಮೈ ಮರಗಟ್ಟಲು ಆರಂಭವಾಗುತ್ತಿದ್ದಂತೆಯೇ ಹೆಂಡತಿ ಹೇಳಿಕೊಟ್ಟಿದ್ದ ಬೈಬಲ್ನ ಸ್ತುತಿ ಚರಣವೊಂದನ್ನು ಪಠಿಸಲು ಮೊದಲಾದನಂತೆ.<br /> <br /> ಇವತ್ತಿಗೂ ಒಕೀನ್, 72 ಗಂಟೆಗಳ ಜೀವನ್ಮರಣ ಹೋರಾಟದ ಬಳಿಕ ತಾನು ಬದುಕಿರುವುದಕ್ಕೆ ದಿವ್ಯಶಕ್ತಿಯೇ ಕಾರಣ ಎಂದು ನಂಬಿದ್ದಾನೆ. ಈ ದುರಂತದಲ್ಲಿ 11 ನಾವಿಕರು ಸಾವಿಗೀಡಾಗಿದ್ದರು.<br /> <br /> ಡಿಸಿಎನ್ ಡೈವಿಂಗ್ ಎಂಬ ಡಚ್ ಕಂಪೆನಿ ಈ ಕಾರ್ಯಾಚರಣೆ ನಡೆಸಿತ್ತು. ಇದೀಗ ಆರು ತಿಂಗಳ ನಂತರ ಈ ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿಯನ್ನು ಕಂಪೆನಿ ಅಂತರ್ಜಾಲ ದಲ್ಲಿ ಹರಿಬಿಟ್ಟ ನಂತರ ಈ ಘಟನೆ ಬೆಳಕಿಗೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>