<p><strong>ಢಾಕಾ:</strong> 1971ರ ಬಾಂಗ್ಲದೇಶ ವಿಮೋಚನಾ ಯುದ್ಧದ ಹೋರಾಟಗಾರ ಸೇರಿದಂತೆ ಹಲವರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಬಂಧನಕ್ಕೆ ಒಳಗಾದವರು ನಡೆಸುತ್ತಿದ್ದ ಸಭೆಯಲ್ಲಿ ಗುಂಪೊಂದು ಹಿಂಸಾಚಾರ ನಡೆಸಿದ್ದು, ಸಭೆ ನಡೆಸುತ್ತಿದ್ದವರನ್ನು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ‘ಪ್ಯಾಸಿಸ್ಟ್ ಆಡಳಿತ’ದ ಸಹಚರರು ಎಂದು ಕರೆದಿದ್ದಾರೆ.</p>.<p>ಪ್ರತ್ಯಕ್ಷದರ್ಶಿಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹೊಸದಾಗಿ ರಚಿಸಲಾಗಿದ್ದ ‘ಮೊಂಚೊ 71’ ಎಂಬ ಸಂಘಟನೆಯ ಅಡಿಯಲ್ಲಿ 1971ರ ಸ್ವಾತಂತ್ಯ್ರ ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಮಾಜಿ ಅಧಿಕಾರಿಗಳು ಢಾಕಾದ ರಿಪೋರ್ಟರ್ಸ್ ಯೂನಿಟಿ ಆಡಿಯೋಟರಿಯಂನಲ್ಲಿ ಒಟ್ಟುಗೂಡಿದ್ದರು. ಈ ವೇಳೆ ಉದ್ರಿಕ್ತ ಜನರ ಗುಂಪು ಸ್ಥಳಕ್ಕೆ ನುಗ್ಗಿದೆ. </p>.<p>‘ಈ ಹಿಂದಿನ ಸರ್ಕಾರವನ್ನು ಪತನ ಮಾಡಿದ ‘ಜುಲೈ ದಂಗೆ’ ವಿರುದ್ಧ ಪಿತೂರಿ ನಡೆಸಲು ಮಾಜಿ ಪ್ರಧಾನಿ ಹಸೀನಾ ಅವರ ಸಹಚರರು ಇಲ್ಲಿ ಸೇರಿದ್ದಾರೆ’ ಎಂದು ಹಿಂಸಾಚಾರ ನಡೆಸಿದ ಪ್ರತಿಭಟನಾಕಾರರು ಆರೋಪಿಸಿದ್ದಾರೆ.</p>.<p>1971 ರ ವಿಮೋಚನಾ ಯುದ್ಧ, ಬಾಂಗ್ಲಾದೇಶದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್, 1972ರ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ’ಯನ್ನು ಎತ್ತಿಹಿಡಿಯುವುದಾಗಿ ಪ್ರತಿಪಾದಿಸಿ ಈ ತಿಂಗಳ ಆರಂಭದಲ್ಲಿ ‘ಮೊಂಚೊ 71’ ಸಂಘಟನೆಯನ್ನು ಪ್ರಾರಂಭಿಸಲಾಗಿತ್ತು.</p>.<p>ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಚಳುವಳಿಯಿಂದಾಗಿ ಹಸೀನಾ ಅವರ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು. ಅವರು ಆಗಸ್ಟ್ 5, 2024 ರಂದು ದೇಶವನ್ನು ತೊರೆದರು. ಅದಾಗಿ ಮೂರು ದಿನಗಳ ನಂತರ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> 1971ರ ಬಾಂಗ್ಲದೇಶ ವಿಮೋಚನಾ ಯುದ್ಧದ ಹೋರಾಟಗಾರ ಸೇರಿದಂತೆ ಹಲವರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಬಂಧನಕ್ಕೆ ಒಳಗಾದವರು ನಡೆಸುತ್ತಿದ್ದ ಸಭೆಯಲ್ಲಿ ಗುಂಪೊಂದು ಹಿಂಸಾಚಾರ ನಡೆಸಿದ್ದು, ಸಭೆ ನಡೆಸುತ್ತಿದ್ದವರನ್ನು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ‘ಪ್ಯಾಸಿಸ್ಟ್ ಆಡಳಿತ’ದ ಸಹಚರರು ಎಂದು ಕರೆದಿದ್ದಾರೆ.</p>.<p>ಪ್ರತ್ಯಕ್ಷದರ್ಶಿಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹೊಸದಾಗಿ ರಚಿಸಲಾಗಿದ್ದ ‘ಮೊಂಚೊ 71’ ಎಂಬ ಸಂಘಟನೆಯ ಅಡಿಯಲ್ಲಿ 1971ರ ಸ್ವಾತಂತ್ಯ್ರ ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಮಾಜಿ ಅಧಿಕಾರಿಗಳು ಢಾಕಾದ ರಿಪೋರ್ಟರ್ಸ್ ಯೂನಿಟಿ ಆಡಿಯೋಟರಿಯಂನಲ್ಲಿ ಒಟ್ಟುಗೂಡಿದ್ದರು. ಈ ವೇಳೆ ಉದ್ರಿಕ್ತ ಜನರ ಗುಂಪು ಸ್ಥಳಕ್ಕೆ ನುಗ್ಗಿದೆ. </p>.<p>‘ಈ ಹಿಂದಿನ ಸರ್ಕಾರವನ್ನು ಪತನ ಮಾಡಿದ ‘ಜುಲೈ ದಂಗೆ’ ವಿರುದ್ಧ ಪಿತೂರಿ ನಡೆಸಲು ಮಾಜಿ ಪ್ರಧಾನಿ ಹಸೀನಾ ಅವರ ಸಹಚರರು ಇಲ್ಲಿ ಸೇರಿದ್ದಾರೆ’ ಎಂದು ಹಿಂಸಾಚಾರ ನಡೆಸಿದ ಪ್ರತಿಭಟನಾಕಾರರು ಆರೋಪಿಸಿದ್ದಾರೆ.</p>.<p>1971 ರ ವಿಮೋಚನಾ ಯುದ್ಧ, ಬಾಂಗ್ಲಾದೇಶದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್, 1972ರ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ’ಯನ್ನು ಎತ್ತಿಹಿಡಿಯುವುದಾಗಿ ಪ್ರತಿಪಾದಿಸಿ ಈ ತಿಂಗಳ ಆರಂಭದಲ್ಲಿ ‘ಮೊಂಚೊ 71’ ಸಂಘಟನೆಯನ್ನು ಪ್ರಾರಂಭಿಸಲಾಗಿತ್ತು.</p>.<p>ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಚಳುವಳಿಯಿಂದಾಗಿ ಹಸೀನಾ ಅವರ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು. ಅವರು ಆಗಸ್ಟ್ 5, 2024 ರಂದು ದೇಶವನ್ನು ತೊರೆದರು. ಅದಾಗಿ ಮೂರು ದಿನಗಳ ನಂತರ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>