<p>ಕೊಲಂಬೊ: ನೇಪಾಳದ ಲುಂಬಿನಿಯಲ್ಲಿರುವ ಬುದ್ಧನ ಜನ್ಮಸ್ಥಳದಿಂದ ಆರಂಭಿಸಿ ಭಾರತ ಮತ್ತು ಶ್ರೀಲಂಕಾದಲ್ಲಿರುವ ಬೌದ್ಧರ ಪ್ರಾರ್ಥನಾ ಸ್ಥಳಗಳ ಸರ್ಕ್ಯೂಟ್ನಲ್ಲಿ ಬೈಕ್ ಜಾಥಾ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲು ಯೋಜಿಸಲಾಗಿದೆ.</p>.<p>ಭಾರತ, ಶ್ರೀಲಂಕಾ, ನೇಪಾಳದ ಸೇನೆಗಳ ಯೋಧರು ಜಾಥಾದಲ್ಲಿ ಭಾಗವಹಿಸುವರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.ಭಾರತದ ಕುಶಿನಗರ, ಬೋಧಗಯಾ, ಶ್ರಾವಸ್ಥಿ, ಸಾರಾನಾಥ, ಸಂಕಸ್ಸ ಮತ್ತಿತರ ಪ್ರದೇಶಗಳ ಮೂಲಕ ಈ ಜಾಥಾವು ಹಾದುಹೋಗಲಿದೆ.</p>.<p>ಮಹಾರಾಷ್ಟ್ರದಲ್ಲಿರುವ ಅಜಂತಾ, ಎಲ್ಲೋರಾ ಕಣಿವೆಗೂ ಭೇಟಿ ನೀಡಲಿದ್ದು, ರಾಮೇಶ್ವರದಿಂದ ಮನ್ನಾರ್ವರೆಗೆ ಸಮುದ್ರ ಮಾರ್ಗದಲ್ಲಿ ಹಡಗಿನಲ್ಲಿ ತೆರಳಲಿದೆ. ಆ ನಂತರ ಕೊಲಂಬೊವರೆಗೂ ರಸ್ತೆ ಮೂಲಕ ಬೈಕ್ ಜಾಥಾ ಮುಂದುವರಿಯಲಿದೆ.</p>.<p>ಒನ್ ಯೂನಿವರ್ಸ್ ಸಂಘಟನೆಯು ಈ ಜಾಥಾವನ್ನು ಆಯೋಜಿಸಿದೆ. ಸಂಘಟನೆಯ ಪ್ರತಿನಿಧಿಗಳು ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಪ ಅಬೆಯವರ್ಧೆನಾ, ಸಚಿವ ಬುದ್ಧಸಾಸನಾ, ಸಂಸ್ಕೃತಿ ವ್ಯವಹಾರಗಳ ಸಚಿವ ವಿದುರ ವಿಕ್ರಮನಾಯಕೆ, ಯುವಜನ ಮತ್ತು ಕ್ರೀಡಾ ಸಚಿವ ರೋಹನ ಡಿಸ್ಸನಾಯಕ ಅವರೊಂದಿಗೆ ಚರ್ಚಿಸಿದ್ದರು.</p>.<p>ಜಾಥಾ ಕುರಿತು ಇತ್ತೀಚೆಗೆ ಭಾರತದಲ್ಲಿ ನಡೆದ ಚರ್ಚೆಯಲ್ಲಿಯೂ ಸಂಘಟನೆಯ ಪ್ರತಿನಿಧಿಗಳಾದ ರಾಹುಲ್ ಪಟೇಲ್, ರಿತೇಶ್ ವಸಂತ ಚಂದನ್, ಪ್ರಶಾಂತ್ ಕರುಳ್ಕರ್ ಅವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಲಂಬೊ: ನೇಪಾಳದ ಲುಂಬಿನಿಯಲ್ಲಿರುವ ಬುದ್ಧನ ಜನ್ಮಸ್ಥಳದಿಂದ ಆರಂಭಿಸಿ ಭಾರತ ಮತ್ತು ಶ್ರೀಲಂಕಾದಲ್ಲಿರುವ ಬೌದ್ಧರ ಪ್ರಾರ್ಥನಾ ಸ್ಥಳಗಳ ಸರ್ಕ್ಯೂಟ್ನಲ್ಲಿ ಬೈಕ್ ಜಾಥಾ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲು ಯೋಜಿಸಲಾಗಿದೆ.</p>.<p>ಭಾರತ, ಶ್ರೀಲಂಕಾ, ನೇಪಾಳದ ಸೇನೆಗಳ ಯೋಧರು ಜಾಥಾದಲ್ಲಿ ಭಾಗವಹಿಸುವರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.ಭಾರತದ ಕುಶಿನಗರ, ಬೋಧಗಯಾ, ಶ್ರಾವಸ್ಥಿ, ಸಾರಾನಾಥ, ಸಂಕಸ್ಸ ಮತ್ತಿತರ ಪ್ರದೇಶಗಳ ಮೂಲಕ ಈ ಜಾಥಾವು ಹಾದುಹೋಗಲಿದೆ.</p>.<p>ಮಹಾರಾಷ್ಟ್ರದಲ್ಲಿರುವ ಅಜಂತಾ, ಎಲ್ಲೋರಾ ಕಣಿವೆಗೂ ಭೇಟಿ ನೀಡಲಿದ್ದು, ರಾಮೇಶ್ವರದಿಂದ ಮನ್ನಾರ್ವರೆಗೆ ಸಮುದ್ರ ಮಾರ್ಗದಲ್ಲಿ ಹಡಗಿನಲ್ಲಿ ತೆರಳಲಿದೆ. ಆ ನಂತರ ಕೊಲಂಬೊವರೆಗೂ ರಸ್ತೆ ಮೂಲಕ ಬೈಕ್ ಜಾಥಾ ಮುಂದುವರಿಯಲಿದೆ.</p>.<p>ಒನ್ ಯೂನಿವರ್ಸ್ ಸಂಘಟನೆಯು ಈ ಜಾಥಾವನ್ನು ಆಯೋಜಿಸಿದೆ. ಸಂಘಟನೆಯ ಪ್ರತಿನಿಧಿಗಳು ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಪ ಅಬೆಯವರ್ಧೆನಾ, ಸಚಿವ ಬುದ್ಧಸಾಸನಾ, ಸಂಸ್ಕೃತಿ ವ್ಯವಹಾರಗಳ ಸಚಿವ ವಿದುರ ವಿಕ್ರಮನಾಯಕೆ, ಯುವಜನ ಮತ್ತು ಕ್ರೀಡಾ ಸಚಿವ ರೋಹನ ಡಿಸ್ಸನಾಯಕ ಅವರೊಂದಿಗೆ ಚರ್ಚಿಸಿದ್ದರು.</p>.<p>ಜಾಥಾ ಕುರಿತು ಇತ್ತೀಚೆಗೆ ಭಾರತದಲ್ಲಿ ನಡೆದ ಚರ್ಚೆಯಲ್ಲಿಯೂ ಸಂಘಟನೆಯ ಪ್ರತಿನಿಧಿಗಳಾದ ರಾಹುಲ್ ಪಟೇಲ್, ರಿತೇಶ್ ವಸಂತ ಚಂದನ್, ಪ್ರಶಾಂತ್ ಕರುಳ್ಕರ್ ಅವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>