<p><strong>ರಿಯೊ ಡಿ ಜನೈರೊ/ಬ್ರುಮಡಿನ್ಹೋ/ಸಾಹೊಪೌಲೊ</strong>: ಆಗ್ನೇಯ ಬ್ರೆಜಿಲ್ನ ಬೆಲೊ ಹೊರಿಜಾಂಟೆ ನಗರದ ಬಳಿ ಕಬ್ಬಿಣ ಅದಿರು ಗಣಿಗಾರಿಕೆಯ ಹೂಳು ಸಂಗ್ರಹಿಸಿದ್ದ ಅಣೆಕಟ್ಟು ಒಡೆದು ಉಂಟಾದ ಕೆಸರಿನ ಪ್ರವಾಹದಿಂದ 9 ಮಂದಿ ಮೃತಪಟ್ಟು, ಸುಮಾರು 300 ಜನರು ಕಣ್ಮರೆಯಾಗಿದ್ದಾರೆ.</p>.<p>ಕೆಸರಿನ ನಡುವೆ ಮನೆ, ಕಾರು, ಬಸ್ಗಳು ಹೂತುಹೋಗಿವೆ. ಕಣ್ಮರೆಯಾದವರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಶನಿವಾರ ಅಗ್ನಿಶಾಮಕ ದಳ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಬ್ರೆಜಿಲ್ನ ಮೈನಸ್ ಗೆರಿಯಾಸ್ ರಾಜ್ಯದ ಅದಿರು ಗಣಿಗಾರಿಕೆಯ ದೈತ್ಯ ಕಂಪನಿ ವೇಲ್ ಎಸ್ಎ ಕಂಪನಿ ಒಡೆತನದ ಈ ನಿರುಪಯುಕ್ತ ಅಣೆಕಟ್ಟು ಶುಕ್ರವಾರ ಮಧ್ಯಾಹ್ನ ಒಡೆದಾಗ ಬ್ರುಮಡಿನ್ಹೋ ಪಟ್ಟಣದ ಕಡೆಗೆ ನುಗ್ಗಿ ಬಂದ ಕೆಸರಿನ ಪ್ರವಾಹದಿಂದ ಈ ದುರಂತ ಸಂಭವಿಸಿದೆ.</p>.<p>ಗಣಿ ಕಂಪನಿಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದ ಪ್ರದೇಶ ಮತ್ತು ಅವರು ವಾಸಿಸುತ್ತಿದ್ದ ನೆರೆಹೊರೆಯ ಪ್ರದೇಶ ಗಣಿ ತ್ಯಾಜ್ಯ ಮತ್ತು ಕೆಸರು ನೀರಿನಿಂದ ಮುಳುಗಿ ಹೋಗಿದೆ.</p>.<p>ಬದುಕುಳಿದವರ ರಕ್ಷಣೆಗಾಗಿ 6 ಹೆಲಿಕಾಪ್ಟರ್ಗಳು ಶೋಧಕಾರ್ಯ ನಡೆಸುತ್ತಿದ್ದು, 51 ಮಂದಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಪ್ರಾದೇಶಿಕ ನಾಗರಿಕ ರಕ್ಷಣಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p>ಬ್ರುಮಡಿನ್ಹೋ ನಗರಕ್ಕೆ 75 ಕಿ.ಮೀ. ದೂರದ ಮರಿಯಾನದಲ್ಲಿ ಇದೇ ರೀತಿ ಮೂರು ವರ್ಷಗಳ ಹಿಂದೆ ಅಣೆಕಟ್ಟು ಒಡೆದು 19 ಜನರು ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಯೊ ಡಿ ಜನೈರೊ/ಬ್ರುಮಡಿನ್ಹೋ/ಸಾಹೊಪೌಲೊ</strong>: ಆಗ್ನೇಯ ಬ್ರೆಜಿಲ್ನ ಬೆಲೊ ಹೊರಿಜಾಂಟೆ ನಗರದ ಬಳಿ ಕಬ್ಬಿಣ ಅದಿರು ಗಣಿಗಾರಿಕೆಯ ಹೂಳು ಸಂಗ್ರಹಿಸಿದ್ದ ಅಣೆಕಟ್ಟು ಒಡೆದು ಉಂಟಾದ ಕೆಸರಿನ ಪ್ರವಾಹದಿಂದ 9 ಮಂದಿ ಮೃತಪಟ್ಟು, ಸುಮಾರು 300 ಜನರು ಕಣ್ಮರೆಯಾಗಿದ್ದಾರೆ.</p>.<p>ಕೆಸರಿನ ನಡುವೆ ಮನೆ, ಕಾರು, ಬಸ್ಗಳು ಹೂತುಹೋಗಿವೆ. ಕಣ್ಮರೆಯಾದವರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಶನಿವಾರ ಅಗ್ನಿಶಾಮಕ ದಳ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಬ್ರೆಜಿಲ್ನ ಮೈನಸ್ ಗೆರಿಯಾಸ್ ರಾಜ್ಯದ ಅದಿರು ಗಣಿಗಾರಿಕೆಯ ದೈತ್ಯ ಕಂಪನಿ ವೇಲ್ ಎಸ್ಎ ಕಂಪನಿ ಒಡೆತನದ ಈ ನಿರುಪಯುಕ್ತ ಅಣೆಕಟ್ಟು ಶುಕ್ರವಾರ ಮಧ್ಯಾಹ್ನ ಒಡೆದಾಗ ಬ್ರುಮಡಿನ್ಹೋ ಪಟ್ಟಣದ ಕಡೆಗೆ ನುಗ್ಗಿ ಬಂದ ಕೆಸರಿನ ಪ್ರವಾಹದಿಂದ ಈ ದುರಂತ ಸಂಭವಿಸಿದೆ.</p>.<p>ಗಣಿ ಕಂಪನಿಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದ ಪ್ರದೇಶ ಮತ್ತು ಅವರು ವಾಸಿಸುತ್ತಿದ್ದ ನೆರೆಹೊರೆಯ ಪ್ರದೇಶ ಗಣಿ ತ್ಯಾಜ್ಯ ಮತ್ತು ಕೆಸರು ನೀರಿನಿಂದ ಮುಳುಗಿ ಹೋಗಿದೆ.</p>.<p>ಬದುಕುಳಿದವರ ರಕ್ಷಣೆಗಾಗಿ 6 ಹೆಲಿಕಾಪ್ಟರ್ಗಳು ಶೋಧಕಾರ್ಯ ನಡೆಸುತ್ತಿದ್ದು, 51 ಮಂದಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಪ್ರಾದೇಶಿಕ ನಾಗರಿಕ ರಕ್ಷಣಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p>ಬ್ರುಮಡಿನ್ಹೋ ನಗರಕ್ಕೆ 75 ಕಿ.ಮೀ. ದೂರದ ಮರಿಯಾನದಲ್ಲಿ ಇದೇ ರೀತಿ ಮೂರು ವರ್ಷಗಳ ಹಿಂದೆ ಅಣೆಕಟ್ಟು ಒಡೆದು 19 ಜನರು ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>