2008ರ ಮುಂಬೈ ದಾಳಿ ಸೇರಿದಂತೆ, ಭಾರತದಲ್ಲಿ ದಾಳಿ ನಡೆಸುವ ಉಗ್ರಗಾಮಿಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಭಾರತ ಈ ವರೆಗೆ ಆರೋಪಿಸುತ್ತಲೇ ಬಂದಿದೆ. ಇದೇ ವಿಚಾರವನ್ನೇ ವಿಶ್ವಸಂಸ್ಥೆ ಸಭೆಗೂ ಮುನ್ನ ಗುರುವಾರ ಪುನರುಚ್ಚರಿಸಿದ್ದ ಎಸ್ ಜೈಶಂಕರ್, ಪಾಕಿಸ್ತಾನವನ್ನು 'ಭಯೋತ್ಪಾದನೆಯ ಕೇಂದ್ರ' ಎಂದು ಕರೆದಿದ್ದರು.