ಘಟನೆ ನಡೆದ ಎರಡು ದಿನಗಳ ನಂತರ ಚೀನಾವನ್ನು ಉದ್ದೇಶಿಸಿ ಮಾತನಾಡಿದ್ದ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್, 'ಚೀನಾದ ಪಿಎಲ್ಎ ಭಾರತೀಯ ಸೈನಿಕರ ಮೇಲೆ 'ಪೂರ್ವನಿಯೋಜಿತ' ದಾಳಿ ನಡೆಸಿದೆ,' ಎಂದು ಆರೋಪಿಸಿದ್ದರು. ಅಲ್ಲದೆ, 'ಇದು ಭಾರತ ಮತ್ತು ಚೀನಾದ ನಡುವಿನ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ,' ಎಂದು ಹೇಳಿದ್ದರು.