<p><strong>ಗೋಮಾ (ಕಾಂಗೊ)</strong>: ಕಾಂಗೊದ ಕೊಲ್ಟನ್ ಗಣಿಗಾರಿಕೆ ಪ್ರದೇಶದಲ್ಲಿ ಭೂಕಂಪ ಸಂಭವಿಸಿ, ಹಲವು ಗಣಿಗಳು ಕುಸಿದು 200 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. </p>.<p>ಎಂ23 ಬಂಡುಕೋರರ ನಿಯಂತ್ರಣದಲ್ಲಿರುವ ರುಬಾಯಾದಲ್ಲಿ ಬುಧವಾರ ಅವಘಡ ಸಂಭವಿಸಿದೆ. ‘ಅತಿಯಾದ ಮಳೆಯಿಂದ ಭೂಕುಸಿತ ಸಂಭವಿಸಿದೆ’ ಎಂದು ಬಂಡುಕೋರರ ವಕ್ತಾರ ಲುಮುಂಬಾ ಕಾಂಬೆರೆ ಮುಯಿಷಾ ಅವರು ತಿಳಿಸಿದರು. </p>.<p>‘ಇಲ್ಲಿಯವರೆಗೆ 200 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಇನ್ನೂ ಹಲವರ ಶವಗಳನ್ನು ಹೊರತೆಗೆಯಲಾಗಿಲ್ಲ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸ್ಥಳದಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಅಲ್ಲಿ ಗುಡಿಸಲಿನಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ’ ಎಂದರು.</p>.<p>‘ಕೈಗಳಿಂದಲೇ ಸುರಂಗಗಳನ್ನು ಕೊರೆಯಲಾಗಿದ್ದು, ಅವುಗಳ ನಿರ್ಮಾಣ ಕಳಪೆಯಾಗಿದೆ. ಸುರಂಗಗಳನ್ನು ನಿರ್ವಹಣೆ ಮಾಡಲಾಗಿಲ್ಲ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆಯೇ ಜನರು ಎಲ್ಲೆಂದರಲ್ಲಿ ಅಗೆಯುತ್ತಾರೆ. ಗಣಿಗಾರಿಕೆಗಾಗಿ ಕೊರೆದ ಒಂದೇ ಸುರಂಗದಲ್ಲಿ ಸುಮಾರು 500ರಷ್ಟು ಕಾರ್ಮಿಕರೂ ಇರುತ್ತಾರೆ’ ಎಂದು ಈ ಗಣಿಗಾರಿಕೆಯಲ್ಲಿ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿರುವ ಕ್ಲೊವಿಸ್ ಮಾಫೇರ್ ಹೇಳಿದರು. </p>.<p>‘ಎಲ್ಲಾ ಸುರಂಗಗಳೂ ಸಮಾನಾಂತರವಾಗಿರುವುದರಿಂದ ಒಂದು ಕುಸಿದರೂ ಅದು ಉಳಿದ ಸುರಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದುರಂತ ಸಂಭವಿಸಿದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಮಾ (ಕಾಂಗೊ)</strong>: ಕಾಂಗೊದ ಕೊಲ್ಟನ್ ಗಣಿಗಾರಿಕೆ ಪ್ರದೇಶದಲ್ಲಿ ಭೂಕಂಪ ಸಂಭವಿಸಿ, ಹಲವು ಗಣಿಗಳು ಕುಸಿದು 200 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. </p>.<p>ಎಂ23 ಬಂಡುಕೋರರ ನಿಯಂತ್ರಣದಲ್ಲಿರುವ ರುಬಾಯಾದಲ್ಲಿ ಬುಧವಾರ ಅವಘಡ ಸಂಭವಿಸಿದೆ. ‘ಅತಿಯಾದ ಮಳೆಯಿಂದ ಭೂಕುಸಿತ ಸಂಭವಿಸಿದೆ’ ಎಂದು ಬಂಡುಕೋರರ ವಕ್ತಾರ ಲುಮುಂಬಾ ಕಾಂಬೆರೆ ಮುಯಿಷಾ ಅವರು ತಿಳಿಸಿದರು. </p>.<p>‘ಇಲ್ಲಿಯವರೆಗೆ 200 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಇನ್ನೂ ಹಲವರ ಶವಗಳನ್ನು ಹೊರತೆಗೆಯಲಾಗಿಲ್ಲ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸ್ಥಳದಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಅಲ್ಲಿ ಗುಡಿಸಲಿನಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ’ ಎಂದರು.</p>.<p>‘ಕೈಗಳಿಂದಲೇ ಸುರಂಗಗಳನ್ನು ಕೊರೆಯಲಾಗಿದ್ದು, ಅವುಗಳ ನಿರ್ಮಾಣ ಕಳಪೆಯಾಗಿದೆ. ಸುರಂಗಗಳನ್ನು ನಿರ್ವಹಣೆ ಮಾಡಲಾಗಿಲ್ಲ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆಯೇ ಜನರು ಎಲ್ಲೆಂದರಲ್ಲಿ ಅಗೆಯುತ್ತಾರೆ. ಗಣಿಗಾರಿಕೆಗಾಗಿ ಕೊರೆದ ಒಂದೇ ಸುರಂಗದಲ್ಲಿ ಸುಮಾರು 500ರಷ್ಟು ಕಾರ್ಮಿಕರೂ ಇರುತ್ತಾರೆ’ ಎಂದು ಈ ಗಣಿಗಾರಿಕೆಯಲ್ಲಿ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿರುವ ಕ್ಲೊವಿಸ್ ಮಾಫೇರ್ ಹೇಳಿದರು. </p>.<p>‘ಎಲ್ಲಾ ಸುರಂಗಗಳೂ ಸಮಾನಾಂತರವಾಗಿರುವುದರಿಂದ ಒಂದು ಕುಸಿದರೂ ಅದು ಉಳಿದ ಸುರಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದುರಂತ ಸಂಭವಿಸಿದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>