<p><strong>ಬ್ಯಾಂಕಾಕ್ (ಪಿಟಿಐ</strong>): ‘ಕಮ್ಯುನಿಸಂ, ಬಂಡವಾಳಶಾಹಿಯ ಪ್ರಯೋಗದಿಂದ ಎಡವುತ್ತಿರುವ ಜಗತ್ತಿಗೆ, ಭಾರತವು ಸಂತೋಷ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.</p>.<p>ಶುಕ್ರವಾರ ಇಲ್ಲಿ ನಡೆದ ಮೂರನೇ ಹಿಂದೂ ಕಾಂಗ್ರೆಸ್ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಪಂಚದಾದ್ಯಂತ ಇರುವ ಹಿಂದೂಗಳು ಪರಸ್ಪರ ಸಂಪರ್ಕದಿಂದಿರಬೇಕು‘ ಎಂದರು.</p>.<p>’ಪ್ರತಿಯೊಬ್ಬ ಹಿಂದೂವಿನ ಜೊತೆಗೆ ಸಂಪರ್ಕ ಸಾಧಿಸಬೇಕು. ಈ ಸಂಪರ್ಕವನ್ನು ಬಲಪಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಮೂಲಕ ಜಗತ್ತಿನಲ್ಲಿರುವ ಪ್ರತಿಯೊಬ್ಬರ ಜತೆ ಸಂಪರ್ಕ ಸಾಧಿಸಿ ಎಲ್ಲರ ಹೃದಯ ಗೆಲ್ಲಬೇಕು’ ಎಂದು ಅವರು ವಿಶ್ವದ ವಿವಿಧೆಡೆಯ ಚಿಂತಕರು, ಹೋರಾಟಗಾರರು, ನಾಯಕರು ಮತ್ತು ಉದ್ಯಮಿಗಳ ಸಭೆಯನ್ನುದ್ದೇಶಿಸಿ ಹೇಳಿದರು.</p>.<p>‘ಎಲ್ಲರನ್ನೂ ನಾವು ಸಂಪರ್ಕಿಸಬೇಕು. ಸೇವೆಯಿಂದಲೇ ನಮ್ಮೊಟ್ಟಿಗೆ ಕರೆದೊಯ್ಯಬೇಕು. ನಮ್ಮೊಳಗೆ ಆ ಶಕ್ತಿಯಿದೆ. ನಿಸ್ವಾರ್ಥ ಸೇವೆಯ ವಿಷಯದಲ್ಲಿ ಪ್ರಪಂಚದಲ್ಲೇ ಛಾಪು ಮೂಡಿಸಿದ್ದೇವೆ. ಇದು ನಮ್ಮ ಸಂಪ್ರದಾಯ, ಮೌಲ್ಯಗಳಲ್ಲೂ ಇದೆ. ಆದ್ದರಿಂದಲೇ ಜನರನ್ನು ತಲುಪಿ, ಅವರ ಹೃದಯ ಬಿಟ್ಟು ಬೇರೆ ಇನ್ನೇನನ್ನು ಗೆಲ್ಲಲ್ಲ’ ಎಂದರು.</p>.<p>‘ಭಾರತವು ಸಂತೋಷ ಮತ್ತು ತೃಪ್ತಿಗೆ ದಾರಿ ಮಾಡಿಕೊಡುತ್ತಿದೆ ಎಂಬುದನ್ನು ಕೋವಿಡ್ ಸಾಂಕ್ರಾಮಿಕದ ನಂತರ ಅರಿತಿರುವ ಜಗತ್ತು, ಇದೀಗ ಅವಿರೋಧವಾಗಿ ಈ ಬಗ್ಗೆಯೇ ಯೋಚಿಸುತ್ತಿದ್ದು, ಹಿಂದೂ ಧರ್ಮದ ಕಡೆಗೆ ತಿರುಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಂಕಾಕ್ (ಪಿಟಿಐ</strong>): ‘ಕಮ್ಯುನಿಸಂ, ಬಂಡವಾಳಶಾಹಿಯ ಪ್ರಯೋಗದಿಂದ ಎಡವುತ್ತಿರುವ ಜಗತ್ತಿಗೆ, ಭಾರತವು ಸಂತೋಷ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.</p>.<p>ಶುಕ್ರವಾರ ಇಲ್ಲಿ ನಡೆದ ಮೂರನೇ ಹಿಂದೂ ಕಾಂಗ್ರೆಸ್ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಪಂಚದಾದ್ಯಂತ ಇರುವ ಹಿಂದೂಗಳು ಪರಸ್ಪರ ಸಂಪರ್ಕದಿಂದಿರಬೇಕು‘ ಎಂದರು.</p>.<p>’ಪ್ರತಿಯೊಬ್ಬ ಹಿಂದೂವಿನ ಜೊತೆಗೆ ಸಂಪರ್ಕ ಸಾಧಿಸಬೇಕು. ಈ ಸಂಪರ್ಕವನ್ನು ಬಲಪಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಮೂಲಕ ಜಗತ್ತಿನಲ್ಲಿರುವ ಪ್ರತಿಯೊಬ್ಬರ ಜತೆ ಸಂಪರ್ಕ ಸಾಧಿಸಿ ಎಲ್ಲರ ಹೃದಯ ಗೆಲ್ಲಬೇಕು’ ಎಂದು ಅವರು ವಿಶ್ವದ ವಿವಿಧೆಡೆಯ ಚಿಂತಕರು, ಹೋರಾಟಗಾರರು, ನಾಯಕರು ಮತ್ತು ಉದ್ಯಮಿಗಳ ಸಭೆಯನ್ನುದ್ದೇಶಿಸಿ ಹೇಳಿದರು.</p>.<p>‘ಎಲ್ಲರನ್ನೂ ನಾವು ಸಂಪರ್ಕಿಸಬೇಕು. ಸೇವೆಯಿಂದಲೇ ನಮ್ಮೊಟ್ಟಿಗೆ ಕರೆದೊಯ್ಯಬೇಕು. ನಮ್ಮೊಳಗೆ ಆ ಶಕ್ತಿಯಿದೆ. ನಿಸ್ವಾರ್ಥ ಸೇವೆಯ ವಿಷಯದಲ್ಲಿ ಪ್ರಪಂಚದಲ್ಲೇ ಛಾಪು ಮೂಡಿಸಿದ್ದೇವೆ. ಇದು ನಮ್ಮ ಸಂಪ್ರದಾಯ, ಮೌಲ್ಯಗಳಲ್ಲೂ ಇದೆ. ಆದ್ದರಿಂದಲೇ ಜನರನ್ನು ತಲುಪಿ, ಅವರ ಹೃದಯ ಬಿಟ್ಟು ಬೇರೆ ಇನ್ನೇನನ್ನು ಗೆಲ್ಲಲ್ಲ’ ಎಂದರು.</p>.<p>‘ಭಾರತವು ಸಂತೋಷ ಮತ್ತು ತೃಪ್ತಿಗೆ ದಾರಿ ಮಾಡಿಕೊಡುತ್ತಿದೆ ಎಂಬುದನ್ನು ಕೋವಿಡ್ ಸಾಂಕ್ರಾಮಿಕದ ನಂತರ ಅರಿತಿರುವ ಜಗತ್ತು, ಇದೀಗ ಅವಿರೋಧವಾಗಿ ಈ ಬಗ್ಗೆಯೇ ಯೋಚಿಸುತ್ತಿದ್ದು, ಹಿಂದೂ ಧರ್ಮದ ಕಡೆಗೆ ತಿರುಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>