ತನ್ನ ಪುತ್ರ ಮತ್ತು ತಾಯಿಯೊಂದಿಗೆ ಕೆನ್ನಿಂಗ್ಟನ್ನ ಒವಲ್ಕ್ರೀಡಾಂಗಣಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಿಸಿದ್ದ ವಿಜಯ್ ಮಲ್ಯ, ಕ್ರೀಡಾಂಗಣದಲ್ಲಿದ್ದುಕೊಂಡೇ ತಮ್ಮ ಪುತ್ರನೊಂದಿಗೆ ಫೋಟೋ ತೆಗೆದು ಟ್ವಿಟ್ಟರ್ಗೂ ಹಾಕಿದ್ದರು. ಪಂದ್ಯ ಮುಗಿದ ನಂತರ ಕ್ರೀಡಾಂಗಣದಿಂದಹೊರ ಬಂದಮಲ್ಯರನ್ನು ಜನ ಸುತ್ತುವರಿದು ಬ್ಯಾಂಕ್ಗಳಿಗೆ ನೀಡಬೇಕಾದ ಹಣವನ್ನು ಹಿಂದಿರುಗಿಸಬೇಕಾಗಿ ಕೂಗುತ್ತಾರೆ. ಇದನ್ನು ಅಲ್ಲಿದ್ದ ಜನರೇ ವಿಡಿಯೋ ಮಾಡಿದ್ದು,ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಮಲ್ಯರನ್ನು ತಳ್ಳಾಡುತ್ತಿರುವ ಭಾರತೀಯರು ‘ನೀನು ಕಳ್ಳ’, ‘ದುಡ್ಡೆಲ್ಲಿ ದುಡ್ಡು’, ‘ಹಣ ಕೊಡು ಮಲ್ಯ ಅಣ್ಣ,’ ಎಂದು ಕೂಗುತ್ತಾರೆ. ಈ ಕೂಗಾಟ ಮತ್ತಷ್ಟು ಜೋರಾಗುತ್ತಲೇ, ‘ಮನುಷ್ಯನಾಗಿರು. ಮೊದಲು ದೇಶದ ಕ್ಷಮೆ ಕೇಳು,’ ಎಂಬ ಕೂಗು ಕೇಳುತ್ತದೆ.