<p><strong>ನಿಕೋಸಿಯಾ:</strong> ಟರ್ಕಿಯ ಭೂಕಂಪದ ಕೇಂದ್ರ ಬಿಂದುವಿಗೆ ಹತ್ತಿರದಲ್ಲಿರುವ ಉತ್ತರ ಸೈಪ್ರಸ್ನ ಕಡಲ ಕಿನಾರೆಗೆ ಕಳೆದ ಕೆಲವು ದಿನಗಳಿಂದ ಮೃತ ತಿಮಿಂಗಿಲಗಳು ತೇಲಿ ಬರುತ್ತಿವೆ. ಭೂಕಂಪದ ಪರಿಣಾಮವಾಗಿ ತಿಮಿಂಗಿಲಗಳು ಸಾವಿಗೀಡಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>ಅಪರೂಪದ ಕ್ಯುವಿಯರ್–ಕೊಕ್ಕಿನ ತಿಮಿಂಗಿಲಗಳು ಪೋಲಿಸ್ ಕ್ರಿಸೋಚಸ್ ನಗರದ ಪೂರ್ವ ತೀರಕ್ಕೆ ಬಂದು ಬೀಳುತ್ತಿವೆ ಎಂದು ಸೈಪ್ರಸ್ ಮೀನುಗಾರಿಕೆ ಇಲಾಖೆಯ ಅಧಿಕಾರಿ ಯಿಯಾನೋಸ್ ಐಯೊನೌ ಹೇಳಿದ್ದಾರೆ.</p>.<p>ಗುರುವಾರ ಪತ್ತೆಯಾದ ನಾಲ್ಕು ತಿಮಿಂಗಿಲಗಳಲ್ಲಿ ಎರಡು ಇನ್ನೂ ಜೀವಂತವಾಗಿದ್ದವು. ಅವುಗಳಿಗೆ ಹಾನಿಯೂ ಆಗಿರಲ್ಲಿಲ್ಲ. ಸ್ಥಳೀಯ ಯುವ ಕೇಂದ್ರದ ಸ್ವಯಂಸೇವಕರು ಅವುಗಳನ್ನು ಮತ್ತೆ ಸಮುದ್ರಕ್ಕೆ ತಳ್ಳಿದರು ಎಂದು ಐಯೊನೌ ಹೇಳಿದರು.</p>.<p>ಟರ್ಕಿಯ ಸೇನೆಯಿಂದ ನಿಯಂತ್ರಿಸಲ್ಪಡುವ ಉತ್ತರದ ಕಡಲತೀರಗಳಲ್ಲಿ ಶುಕ್ರವಾರ ಮತ್ತೆ ಮೂರು ತಿಮಿಂಗಿಲಗಳು ಪತ್ತೆಯಾಗಿದ್ದವು ಎಂದು ಸುದ್ದಿ ಮಾಧ್ಯಮ ‘ಕ್ಸಿನ್ಹುವಾ’ ವರದಿ ಮಾಡಿದೆ.</p>.<p>‘ಟರ್ಕಿ ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಸೈಪ್ರಸ್ ಕರಾವಳಿಯಲ್ಲಿ ತಿಮಿಂಗಿಲಗಳು ಹೀಗೆ ಸಾಮೂಹಿಕವಾಗಿ ಬಂದು ಬೀಳುತ್ತಿರುವುದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಅವುಗಳ ಸಾವಿಗೆ ಭೂಕಂಪವೂ ಕಾರಣವಾಗಿರಬಹುದು’ ಎಂದು ರಾಷ್ಟ್ರೀಯ ರೇಡಿಯೊ ಸಿಬಿಸಿಗೆ ಐಯೊನೌ ಹೇಳಿದ್ದಾರೆ.</p>.<p>ತೀರಕ್ಕೆ ಬಂದು ಬಿದ್ದಿದ್ದ ಕೆಲವು ತಿಮಿಂಗಿಲಗಳನ್ನು ಗುರುವಾರ ಮತ್ತೆ ಸಮುದ್ರಕ್ಕೆ ತಳ್ಳಲಾಗಿತ್ತು. ಇದೇ ತಿಮಿಂಗಿಲಗಳು ಶುಕ್ರವಾರವೂ ತೀರಕ್ಕೆ ಬಂದು ಬಿದ್ದಿರುವ ಸಾಧ್ಯತೆಗಳೂ ಇವೆ ಎಂದು ಅವರು ತಿಳಿಸಿದ್ದಾರೆ.</p>.<p>ಈ ಪ್ರದೇಶದ ಪರಿಸರ ವ್ಯವಸ್ಥೆಯ ಮೇಲೆ ಆಗಿರುವ ಭೂಕಂಪದ ಪರಿಣಾಮಗಳಿಂದ ಅವು ಸತ್ತಿವೆಯೇ ಎಂಬುದನ್ನು ಪತ್ತೆಹಚ್ಚಲು ಮೀನುಗಾರಿಕಾ ಇಲಾಖೆಯ ತಜ್ಞರು ಈಗ ತಿಮಿಂಗಿಲಗಳ ಮೃತದೇಹಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಐಯೊನೌ ಹೇಳಿದರು.</p>.<p>ಯುದ್ಧನೌಕೆಗಳ ಸಮರಭ್ಯಾಸ, ಹೈಡ್ರೋಕಾರ್ಬನ್ಗಳ ಪತ್ತೆಗಾಗಿ ನಡೆಯುವ ಕಾರ್ಯಾಚರಣೆಯೂ ತಿಮಿಂಗಿಲಗಳ ಸಾಮೂಹಿಕ ಸಾವಿಗೆ ಕಾರಣವಾಗಬಹುದು. ಆದರೆ, ಇತ್ತೀಚೆಗೆ ಇಂಥ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿದರು.</p>.<p>ಟರ್ಕಿಯಲ್ಲಿ ಫೆ.6ರಂದು ಸಂಭವಿಸಿದ ಎರಡು ಪ್ರಬಲ ಭೂಕಂಪಗಳ ಪರಿಣಾಮವಾಗಿ ಟರ್ಕಿ ಮತ್ತು ಸಿರಿಯಾಗಳಲ್ಲಿ ಹಲವು ಕಟ್ಟಡಗಳು ಕುಸಿದಿದ್ದು, ಈ ವರೆಗೆ 23 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪ್ರಬಲ ಭೂಕಂಪಗಳ ನಂತರವೂ ಅಲ್ಲಿ ನಿರಂತರವಾಗಿ ಭೂಮಿ ಕಂಪಿಸಿದೆ.</p>.<p>ಇದನ್ನೂ ಓದಿ </p>.<p><a href="https://www.prajavani.net/world-news/children-found-alive-as-turkey-syria-quake-toll-tops-22000-1014362.html" itemprop="url">ಭೂಕಂಪ: ಟರ್ಕಿ, ಸಿರಿಯಾದಲ್ಲಿ 23 ಸಾವಿರ ಮಂದಿ ಸಾವು- ಪವಾಡದಂತೆ ಬದುಕಿ ಬಂದವರಿವರು </a></p>.<p><a href="https://www.prajavani.net/cyprus-between-ocean-592037.html" itemprop="url">ಸಾಗರದ ನಡುವಿನ ಸೈಪ್ರಸ್ </a></p>.<p><a href="https://www.prajavani.net/world-news/turkey-earthquake-bengaluru-techie-missing-case-details-1014098.html" itemprop="url">Turkey Earthquake | ಬೆಂಗಳೂರಿನ ಟೆಕಿ ನಾಪತ್ತೆ: ಕುಟುಂಬದವರಲ್ಲಿ ಆತಂಕ </a></p>.<p><a href="https://www.prajavani.net/op-ed/editorial/prajavani-editorial-on-turkey-and-syria-earthquake-1014324.html" itemprop="url">ಸಂಪಾದಕೀಯ: ಭೂಕಂಪ– ಟರ್ಕಿ, ಸಿರಿಯಾಕ್ಕೆ ಎಲ್ಲ ದೇಶಗಳು ನೆರವಾಗಬೇಕು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಕೋಸಿಯಾ:</strong> ಟರ್ಕಿಯ ಭೂಕಂಪದ ಕೇಂದ್ರ ಬಿಂದುವಿಗೆ ಹತ್ತಿರದಲ್ಲಿರುವ ಉತ್ತರ ಸೈಪ್ರಸ್ನ ಕಡಲ ಕಿನಾರೆಗೆ ಕಳೆದ ಕೆಲವು ದಿನಗಳಿಂದ ಮೃತ ತಿಮಿಂಗಿಲಗಳು ತೇಲಿ ಬರುತ್ತಿವೆ. ಭೂಕಂಪದ ಪರಿಣಾಮವಾಗಿ ತಿಮಿಂಗಿಲಗಳು ಸಾವಿಗೀಡಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>ಅಪರೂಪದ ಕ್ಯುವಿಯರ್–ಕೊಕ್ಕಿನ ತಿಮಿಂಗಿಲಗಳು ಪೋಲಿಸ್ ಕ್ರಿಸೋಚಸ್ ನಗರದ ಪೂರ್ವ ತೀರಕ್ಕೆ ಬಂದು ಬೀಳುತ್ತಿವೆ ಎಂದು ಸೈಪ್ರಸ್ ಮೀನುಗಾರಿಕೆ ಇಲಾಖೆಯ ಅಧಿಕಾರಿ ಯಿಯಾನೋಸ್ ಐಯೊನೌ ಹೇಳಿದ್ದಾರೆ.</p>.<p>ಗುರುವಾರ ಪತ್ತೆಯಾದ ನಾಲ್ಕು ತಿಮಿಂಗಿಲಗಳಲ್ಲಿ ಎರಡು ಇನ್ನೂ ಜೀವಂತವಾಗಿದ್ದವು. ಅವುಗಳಿಗೆ ಹಾನಿಯೂ ಆಗಿರಲ್ಲಿಲ್ಲ. ಸ್ಥಳೀಯ ಯುವ ಕೇಂದ್ರದ ಸ್ವಯಂಸೇವಕರು ಅವುಗಳನ್ನು ಮತ್ತೆ ಸಮುದ್ರಕ್ಕೆ ತಳ್ಳಿದರು ಎಂದು ಐಯೊನೌ ಹೇಳಿದರು.</p>.<p>ಟರ್ಕಿಯ ಸೇನೆಯಿಂದ ನಿಯಂತ್ರಿಸಲ್ಪಡುವ ಉತ್ತರದ ಕಡಲತೀರಗಳಲ್ಲಿ ಶುಕ್ರವಾರ ಮತ್ತೆ ಮೂರು ತಿಮಿಂಗಿಲಗಳು ಪತ್ತೆಯಾಗಿದ್ದವು ಎಂದು ಸುದ್ದಿ ಮಾಧ್ಯಮ ‘ಕ್ಸಿನ್ಹುವಾ’ ವರದಿ ಮಾಡಿದೆ.</p>.<p>‘ಟರ್ಕಿ ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಸೈಪ್ರಸ್ ಕರಾವಳಿಯಲ್ಲಿ ತಿಮಿಂಗಿಲಗಳು ಹೀಗೆ ಸಾಮೂಹಿಕವಾಗಿ ಬಂದು ಬೀಳುತ್ತಿರುವುದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಅವುಗಳ ಸಾವಿಗೆ ಭೂಕಂಪವೂ ಕಾರಣವಾಗಿರಬಹುದು’ ಎಂದು ರಾಷ್ಟ್ರೀಯ ರೇಡಿಯೊ ಸಿಬಿಸಿಗೆ ಐಯೊನೌ ಹೇಳಿದ್ದಾರೆ.</p>.<p>ತೀರಕ್ಕೆ ಬಂದು ಬಿದ್ದಿದ್ದ ಕೆಲವು ತಿಮಿಂಗಿಲಗಳನ್ನು ಗುರುವಾರ ಮತ್ತೆ ಸಮುದ್ರಕ್ಕೆ ತಳ್ಳಲಾಗಿತ್ತು. ಇದೇ ತಿಮಿಂಗಿಲಗಳು ಶುಕ್ರವಾರವೂ ತೀರಕ್ಕೆ ಬಂದು ಬಿದ್ದಿರುವ ಸಾಧ್ಯತೆಗಳೂ ಇವೆ ಎಂದು ಅವರು ತಿಳಿಸಿದ್ದಾರೆ.</p>.<p>ಈ ಪ್ರದೇಶದ ಪರಿಸರ ವ್ಯವಸ್ಥೆಯ ಮೇಲೆ ಆಗಿರುವ ಭೂಕಂಪದ ಪರಿಣಾಮಗಳಿಂದ ಅವು ಸತ್ತಿವೆಯೇ ಎಂಬುದನ್ನು ಪತ್ತೆಹಚ್ಚಲು ಮೀನುಗಾರಿಕಾ ಇಲಾಖೆಯ ತಜ್ಞರು ಈಗ ತಿಮಿಂಗಿಲಗಳ ಮೃತದೇಹಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಐಯೊನೌ ಹೇಳಿದರು.</p>.<p>ಯುದ್ಧನೌಕೆಗಳ ಸಮರಭ್ಯಾಸ, ಹೈಡ್ರೋಕಾರ್ಬನ್ಗಳ ಪತ್ತೆಗಾಗಿ ನಡೆಯುವ ಕಾರ್ಯಾಚರಣೆಯೂ ತಿಮಿಂಗಿಲಗಳ ಸಾಮೂಹಿಕ ಸಾವಿಗೆ ಕಾರಣವಾಗಬಹುದು. ಆದರೆ, ಇತ್ತೀಚೆಗೆ ಇಂಥ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿದರು.</p>.<p>ಟರ್ಕಿಯಲ್ಲಿ ಫೆ.6ರಂದು ಸಂಭವಿಸಿದ ಎರಡು ಪ್ರಬಲ ಭೂಕಂಪಗಳ ಪರಿಣಾಮವಾಗಿ ಟರ್ಕಿ ಮತ್ತು ಸಿರಿಯಾಗಳಲ್ಲಿ ಹಲವು ಕಟ್ಟಡಗಳು ಕುಸಿದಿದ್ದು, ಈ ವರೆಗೆ 23 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪ್ರಬಲ ಭೂಕಂಪಗಳ ನಂತರವೂ ಅಲ್ಲಿ ನಿರಂತರವಾಗಿ ಭೂಮಿ ಕಂಪಿಸಿದೆ.</p>.<p>ಇದನ್ನೂ ಓದಿ </p>.<p><a href="https://www.prajavani.net/world-news/children-found-alive-as-turkey-syria-quake-toll-tops-22000-1014362.html" itemprop="url">ಭೂಕಂಪ: ಟರ್ಕಿ, ಸಿರಿಯಾದಲ್ಲಿ 23 ಸಾವಿರ ಮಂದಿ ಸಾವು- ಪವಾಡದಂತೆ ಬದುಕಿ ಬಂದವರಿವರು </a></p>.<p><a href="https://www.prajavani.net/cyprus-between-ocean-592037.html" itemprop="url">ಸಾಗರದ ನಡುವಿನ ಸೈಪ್ರಸ್ </a></p>.<p><a href="https://www.prajavani.net/world-news/turkey-earthquake-bengaluru-techie-missing-case-details-1014098.html" itemprop="url">Turkey Earthquake | ಬೆಂಗಳೂರಿನ ಟೆಕಿ ನಾಪತ್ತೆ: ಕುಟುಂಬದವರಲ್ಲಿ ಆತಂಕ </a></p>.<p><a href="https://www.prajavani.net/op-ed/editorial/prajavani-editorial-on-turkey-and-syria-earthquake-1014324.html" itemprop="url">ಸಂಪಾದಕೀಯ: ಭೂಕಂಪ– ಟರ್ಕಿ, ಸಿರಿಯಾಕ್ಕೆ ಎಲ್ಲ ದೇಶಗಳು ನೆರವಾಗಬೇಕು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>