<p><strong>ಪೇಶಾವರ</strong>: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಖುರ್ರಂ ಜಿಲ್ಲೆಯಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯಗಳ ನಡುವಣ ಸಂಘರ್ಷ ಮುಂದುವರಿದಿದ್ದು, ಶನಿವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.</p><p>ಕಳೆದ 10 ದಿನಗಳಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 124ಕ್ಕೆ ಏರಿಕೆಯಾಗಿದ್ದು, 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಅಲಿಝೈ ಮತ್ತು ಬಗಾನ್ ಬುಡಕಟ್ಟು ಸಮುದಾಯಗಳ ನಡುವಣ ಸಂಘರ್ಷ ನವೆಂಬರ್ 22ರಂದು ಆರಂಭಗೊಂಡಿತ್ತು. ಪ್ರಯಾಣಿಕರ ವಾಹನಗಳ ಮೇಲೆ ಶಸ್ತ್ರಸಜ್ಜಿತ ಗುಂಪೊಂದು ದಾಳಿ ನಡೆಸಿದ್ದು ಹಿಂಸಾಚಾರ ಆರಂಭವಾಗಲು ಕಾರಣ. ಈ ಘಟನೆಯಲ್ಲಿ 57 ಮಂದಿ ಮೃತಪಟ್ಟಿದ್ದರು. </p><p>ಬಗಾನ್ ಬಜಾರ್ ಪ್ರದೇಶದಲ್ಲಿ ಆರಂಭವಾದ ಹಿಂಸಾಚಾರ ಆ ಬಳಿಕ ಬಾಲಿಶ್ಕೆಲ್, ಖಾರ್, ಕಾಲಿ, ಜುಂಜ್ ಅಲಿಝೈ ಮತ್ತು ಮಕ್ಬಲ್ ಪ್ರದೇಶಗಳಿಗೆ ಹರಡಿದ್ದು, ಕಳೆದ ಎರಡು ದಿನಗಳಲ್ಲಿ 37 ಮಂದಿ ಮೃತಪಟ್ಟಿದ್ದಾರೆ. </p><p>ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಎರಡೂ ಪಂಗಡಗಳ ನಡುವೆ 10 ದಿನಗಳ ‘ಕದನ ವಿರಾಮ’ ಒಪ್ಪಂದವನ್ನು ಮಾಡಲಾಗಿದೆಯಾದರೂ, ಹಿಂಸಾಚಾರ ಮುಂದುವರಿದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೇಶಾವರ</strong>: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಖುರ್ರಂ ಜಿಲ್ಲೆಯಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯಗಳ ನಡುವಣ ಸಂಘರ್ಷ ಮುಂದುವರಿದಿದ್ದು, ಶನಿವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.</p><p>ಕಳೆದ 10 ದಿನಗಳಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 124ಕ್ಕೆ ಏರಿಕೆಯಾಗಿದ್ದು, 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಅಲಿಝೈ ಮತ್ತು ಬಗಾನ್ ಬುಡಕಟ್ಟು ಸಮುದಾಯಗಳ ನಡುವಣ ಸಂಘರ್ಷ ನವೆಂಬರ್ 22ರಂದು ಆರಂಭಗೊಂಡಿತ್ತು. ಪ್ರಯಾಣಿಕರ ವಾಹನಗಳ ಮೇಲೆ ಶಸ್ತ್ರಸಜ್ಜಿತ ಗುಂಪೊಂದು ದಾಳಿ ನಡೆಸಿದ್ದು ಹಿಂಸಾಚಾರ ಆರಂಭವಾಗಲು ಕಾರಣ. ಈ ಘಟನೆಯಲ್ಲಿ 57 ಮಂದಿ ಮೃತಪಟ್ಟಿದ್ದರು. </p><p>ಬಗಾನ್ ಬಜಾರ್ ಪ್ರದೇಶದಲ್ಲಿ ಆರಂಭವಾದ ಹಿಂಸಾಚಾರ ಆ ಬಳಿಕ ಬಾಲಿಶ್ಕೆಲ್, ಖಾರ್, ಕಾಲಿ, ಜುಂಜ್ ಅಲಿಝೈ ಮತ್ತು ಮಕ್ಬಲ್ ಪ್ರದೇಶಗಳಿಗೆ ಹರಡಿದ್ದು, ಕಳೆದ ಎರಡು ದಿನಗಳಲ್ಲಿ 37 ಮಂದಿ ಮೃತಪಟ್ಟಿದ್ದಾರೆ. </p><p>ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಎರಡೂ ಪಂಗಡಗಳ ನಡುವೆ 10 ದಿನಗಳ ‘ಕದನ ವಿರಾಮ’ ಒಪ್ಪಂದವನ್ನು ಮಾಡಲಾಗಿದೆಯಾದರೂ, ಹಿಂಸಾಚಾರ ಮುಂದುವರಿದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>