70 ವರ್ಷದ ‘ಟಿಕಿರಿ’ ಎಂಬ ಆನೆ ನಿಶ್ಶಕ್ತಗೊಂಡಿತ್ತು. ಆರೋಗ್ಯ ಸರಿಯಿಲ್ಲದಿದ್ದರೂ ಈ ಆನೆಯನ್ನು ಕ್ಯಾಂಡಿ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಬಳಸಲಾಗಿತ್ತು. ಈ ಕುರಿತು ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಆಯಾಸದಿಂದ ಬಳಲಿದ್ದ ಆನೆ ಗುರು
ವಾರ ಮೃತಪಟ್ಟಿದೆ. ಆಯೋಜಕರು ಮೆರವಣಿಗೆಯಲ್ಲಿ ಭಾರದ ವಸ್ತುಗಳಿಂದ ಆನೆಯನ್ನು ಅಲಂಕರಿಸಿದ್ದರು. ಅಲ್ಲದೆ, ಕ್ರೂರವಾಗಿ ನಡೆಸಿಕೊಂಡಿದ್ದರು. ಹೀಗಾಗಿಯೇ ಸಾವು ಸಂಭವಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ವನ್ಯಜೀವಿ ಸಚಿವ ಜಾನ್ ಅಮರತುಂಗ ತಿಳಿಸಿದ್ದಾರೆ.