<p><strong>ಸೋಲ್:</strong> ಜಾಗತಿಕ ವ್ಯವಸ್ಥೆಗೆ ಹೊಸ ರೂಪ ನೀಡುವ ಪ್ರಕ್ರಿಯೆಯಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ಹೆಚ್ಚಿನ ಹೊಣೆ ಹೊತ್ತಿದ್ದು, ಸಕ್ರಿಯವಾಗಿ ಕೊಡುಗೆ ನೀಡುತ್ತಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.</p>.<p>ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡುತ್ತಾ, ‘ಕೊರಿಯಾ ಗಣರಾಜ್ಯದ ಜೊತೆಗಿನ ಭಾರತದ ಪಾಲುದಾರಿಕೆಯು ಅನಿಶ್ಚಿತ ಜಾಗತಿಕ ವ್ಯವಸ್ಥೆಯಲ್ಲಿ ಹೆಚ್ಚು ಪ್ರಾಮುಖ್ಯ ಪಡೆದಿದೆ’ ಎಂದರು.</p>.<p>ಭಯೋತ್ಪಾದನೆ ನಿಗ್ರಹ ಹಾಗೂ ಜನಸಮೂಹ ನಾಶ ಮಾಡುವಂತಹ ಶಸ್ತ್ರಾಸ್ತ್ರಗಳ ತಡೆಗೆ ಕೈಗೊಳ್ಳುವ ಕ್ರಮಗಳು ಜಲಮಾರ್ಗದಲ್ಲಿ ಸುರಕ್ಷತೆಯ ಖಾತರಿ ನೀಡಲಿವೆ. ಇದು, ಉಭಯ ದೇಶಗಳಿಗೆ ಮೂಲಭೂತ ಭದ್ರತಾ ವಿಷಯವಾಗಿದೆ ಎಂದು ಹೇಳಿದರು. </p>.<p>‘ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ಮತ್ತು ಜನಸಮೂಹ ನಾಶ ಮಾಡುವ ಶಸ್ತ್ರಾಸ್ತ್ರಗಳ ಉತ್ಪಾದನೆಯು ಸವಾಲೊಡ್ಡಿದೆ. ಜಾಗತಿಕ ಹಂತದಲ್ಲಿ ಇವುಗಳನ್ನು ಎದುರಿಸುವ ಸೂಕ್ಷ್ಮವನ್ನು ನಾವು ಅರಿತಿದ್ದೇವೆ. ನಮ್ಮ ಪರಿಹಾರ ಕ್ರಮಗಳು ನಿರ್ದಿಷ್ಟ ರಾಷ್ಟ್ರೀಯ ಸಂದರ್ಭಗಳಿಗೆ ಹೊಂದಿಕೆ ಆಗದಿರಬಹುದು. ಆದರೆ, ಒಟ್ಟಾಗಿ ಜೊತೆಗೂಡಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಸುವುದು ಎಂದಿಗೂ ಸಮಾನವಾದ ಅವಕಾಶವನ್ನು ಕಲ್ಪಿಸಲಿದೆ’ ಎಂದು ಜೈಶಂಕರ್ ಪ್ರತಿಪಾದಿಸಿದರು.</p>.<p><strong>ಪ್ರಧಾನಿ, ಭದ್ರತಾ ಸಲಹೆಗಾರರ ಜೊತೆಗೆ ಜೈಶಂಕರ್ ಭೇಟಿ, ಚರ್ಚೆ</strong></p><p><strong>ಸೋಲ್ (ಪಿಟಿಐ):</strong> ದಕ್ಷಿಣ ಕೊರಿಯಾ ಪ್ರಧಾನಿ ಹ್ಯಾನ್ ಡಕ್ ಸೂ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಂಗಳವಾರ ಇಲ್ಲಿ ಭೇಟಿಯಾಗಿದ್ದು, ಉಭಯ ದೇಶಗಳ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.</p>.<p>ನಾಲ್ಕು ದಿನಗಳ ಭೇಟಿಗೆ ಇಲ್ಲಿಗೆ ಆಗಮಿಸಿರುವ ಜೈಶಂಕರ್ ಅವರು, 10ನೇ ಭಾರತ–ದಕ್ಷಿಣ ಕೊರಿಯಾದ ಜಂಟಿ ಆಯೋಗದ ಸಭೆಯ (ಜೆಸಿಎಂ) ಸಹ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.</p>.<p>‘ಜೆಸಿಎಂ ವಿಸ್ತೃತವಾಗಿ ನಡೆಯುವ ನಿರೀಕ್ಷೆಯಿದೆ. ಪರಸ್ಪರ ಸಹಕಾರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಬಲಪಡಿಸುವ ಕುರಿತು ಚರ್ಚಿಸಲಿದ್ದೇವೆ. ಪರಸ್ಪರ ಆಸಕ್ತಿಯುಳ್ಳ ಪ್ರಾದೇಶಿಕ, ಜಾಗತಿಕ ವಿಷಯಗಳು ಚರ್ಚೆಯಾಗಲಿವೆ’ ಎಂದು ಪ್ರವಾಸ ತೆರಳುವ ಮುನ್ನ ನವದೆಹಲಿಯಲ್ಲಿ ಜೈಶಂಕರ್ ಹೇಳಿದ್ದರು.</p>.<p>ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಚಾಂಗ್ ಹೊ ಜಿನ್ ಅವರನ್ನು ಭೇಟಿಯಾಗಿದ್ದು, ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದ ವಸ್ತುಸ್ಥಿತಿ ಹಾಗೂ ಸಮಕಾಲೀನ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳನ್ನು ಕುರಿತು ಚರ್ಚಿಸಿದರು. ವಾಣಿಜ್ಯ,ಕೈಗಾರಿಕೆ ಮತ್ತು ಇಂಧನ ಸಚಿವ ಅಹ್ನ್ ಡುಕ್ಜೆಯುನ್ ಅವರನ್ನೂ ಭೇಟಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಲ್:</strong> ಜಾಗತಿಕ ವ್ಯವಸ್ಥೆಗೆ ಹೊಸ ರೂಪ ನೀಡುವ ಪ್ರಕ್ರಿಯೆಯಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ಹೆಚ್ಚಿನ ಹೊಣೆ ಹೊತ್ತಿದ್ದು, ಸಕ್ರಿಯವಾಗಿ ಕೊಡುಗೆ ನೀಡುತ್ತಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.</p>.<p>ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡುತ್ತಾ, ‘ಕೊರಿಯಾ ಗಣರಾಜ್ಯದ ಜೊತೆಗಿನ ಭಾರತದ ಪಾಲುದಾರಿಕೆಯು ಅನಿಶ್ಚಿತ ಜಾಗತಿಕ ವ್ಯವಸ್ಥೆಯಲ್ಲಿ ಹೆಚ್ಚು ಪ್ರಾಮುಖ್ಯ ಪಡೆದಿದೆ’ ಎಂದರು.</p>.<p>ಭಯೋತ್ಪಾದನೆ ನಿಗ್ರಹ ಹಾಗೂ ಜನಸಮೂಹ ನಾಶ ಮಾಡುವಂತಹ ಶಸ್ತ್ರಾಸ್ತ್ರಗಳ ತಡೆಗೆ ಕೈಗೊಳ್ಳುವ ಕ್ರಮಗಳು ಜಲಮಾರ್ಗದಲ್ಲಿ ಸುರಕ್ಷತೆಯ ಖಾತರಿ ನೀಡಲಿವೆ. ಇದು, ಉಭಯ ದೇಶಗಳಿಗೆ ಮೂಲಭೂತ ಭದ್ರತಾ ವಿಷಯವಾಗಿದೆ ಎಂದು ಹೇಳಿದರು. </p>.<p>‘ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ಮತ್ತು ಜನಸಮೂಹ ನಾಶ ಮಾಡುವ ಶಸ್ತ್ರಾಸ್ತ್ರಗಳ ಉತ್ಪಾದನೆಯು ಸವಾಲೊಡ್ಡಿದೆ. ಜಾಗತಿಕ ಹಂತದಲ್ಲಿ ಇವುಗಳನ್ನು ಎದುರಿಸುವ ಸೂಕ್ಷ್ಮವನ್ನು ನಾವು ಅರಿತಿದ್ದೇವೆ. ನಮ್ಮ ಪರಿಹಾರ ಕ್ರಮಗಳು ನಿರ್ದಿಷ್ಟ ರಾಷ್ಟ್ರೀಯ ಸಂದರ್ಭಗಳಿಗೆ ಹೊಂದಿಕೆ ಆಗದಿರಬಹುದು. ಆದರೆ, ಒಟ್ಟಾಗಿ ಜೊತೆಗೂಡಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಸುವುದು ಎಂದಿಗೂ ಸಮಾನವಾದ ಅವಕಾಶವನ್ನು ಕಲ್ಪಿಸಲಿದೆ’ ಎಂದು ಜೈಶಂಕರ್ ಪ್ರತಿಪಾದಿಸಿದರು.</p>.<p><strong>ಪ್ರಧಾನಿ, ಭದ್ರತಾ ಸಲಹೆಗಾರರ ಜೊತೆಗೆ ಜೈಶಂಕರ್ ಭೇಟಿ, ಚರ್ಚೆ</strong></p><p><strong>ಸೋಲ್ (ಪಿಟಿಐ):</strong> ದಕ್ಷಿಣ ಕೊರಿಯಾ ಪ್ರಧಾನಿ ಹ್ಯಾನ್ ಡಕ್ ಸೂ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಂಗಳವಾರ ಇಲ್ಲಿ ಭೇಟಿಯಾಗಿದ್ದು, ಉಭಯ ದೇಶಗಳ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.</p>.<p>ನಾಲ್ಕು ದಿನಗಳ ಭೇಟಿಗೆ ಇಲ್ಲಿಗೆ ಆಗಮಿಸಿರುವ ಜೈಶಂಕರ್ ಅವರು, 10ನೇ ಭಾರತ–ದಕ್ಷಿಣ ಕೊರಿಯಾದ ಜಂಟಿ ಆಯೋಗದ ಸಭೆಯ (ಜೆಸಿಎಂ) ಸಹ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.</p>.<p>‘ಜೆಸಿಎಂ ವಿಸ್ತೃತವಾಗಿ ನಡೆಯುವ ನಿರೀಕ್ಷೆಯಿದೆ. ಪರಸ್ಪರ ಸಹಕಾರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಬಲಪಡಿಸುವ ಕುರಿತು ಚರ್ಚಿಸಲಿದ್ದೇವೆ. ಪರಸ್ಪರ ಆಸಕ್ತಿಯುಳ್ಳ ಪ್ರಾದೇಶಿಕ, ಜಾಗತಿಕ ವಿಷಯಗಳು ಚರ್ಚೆಯಾಗಲಿವೆ’ ಎಂದು ಪ್ರವಾಸ ತೆರಳುವ ಮುನ್ನ ನವದೆಹಲಿಯಲ್ಲಿ ಜೈಶಂಕರ್ ಹೇಳಿದ್ದರು.</p>.<p>ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಚಾಂಗ್ ಹೊ ಜಿನ್ ಅವರನ್ನು ಭೇಟಿಯಾಗಿದ್ದು, ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದ ವಸ್ತುಸ್ಥಿತಿ ಹಾಗೂ ಸಮಕಾಲೀನ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳನ್ನು ಕುರಿತು ಚರ್ಚಿಸಿದರು. ವಾಣಿಜ್ಯ,ಕೈಗಾರಿಕೆ ಮತ್ತು ಇಂಧನ ಸಚಿವ ಅಹ್ನ್ ಡುಕ್ಜೆಯುನ್ ಅವರನ್ನೂ ಭೇಟಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>