<p class="title"><strong>ಅಮ್ಸ್ಟರ್ ಡ್ಯಾಂ (ಪಿಟಿಐ): ‘</strong>ಪ್ರಜಾಪ್ರಭುತ್ವ, ಆರ್ಥಿಕತೆಯ ದೃಷ್ಟಿಯಿಂದ ಪ್ರವರ್ಧಮಾನದಲ್ಲಿರುವ ಭಾರತ– ನೆದರ್ಲೆಂಡ್ ಜಾಗತಿಕ ಸವಾಲು ಎದುರಿಸುವಲ್ಲಿ ‘ಸಹಜ ಪಾಲುದಾರರು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದ್ದಾರೆ.</p>.<p class="bodytext">‘ಶಾಂತಿ, ಭದ್ರತೆ ಮತ್ತು ಅಭ್ಯುದಯದ ದೃಷ್ಟಿಯಿಂದ ಉಭಯ ದೇಶಗಳು ಏಕರೂಪದ ಬದ್ಧತೆ ಹೊಂದಿವೆ’ ಎಂದೂ ಹೇಳಿದರು. ನೆದರ್ಲೆಂಡ್ ಭೇಟಿ ಅವಧಿಯಲ್ಲಿ ರಾಷ್ಟ್ರಪತಿ ಅವರು ನೆದರ್ಲೆಂಡ್ನ ಉನ್ನತ ನಾಯಕರ ಜೊತೆಗೆ ಚರ್ಚಿಸುವರು.</p>.<p class="bodytext">1988ರಲ್ಲಿ ಆಗ ರಾಷ್ಟ್ರಪತಿಯಾಗಿದ್ದ ಆರ್.ವೆಂಕಟರಾಮನ್ ಅವರು ನೆದರ್ಲೆಂಡ್ಗೆ ಭೇಟಿ ನೀಡಿದ್ದರು. ಈಗ, 34 ವರ್ಷದ ನಂತರ ಭೇಟಿ ನೀಡುತ್ತಿರುವ ಭಾರತದ ಎರಡನೇ ರಾಷ್ಟ್ರಪತಿ ಕೋವಿಂದ್ ಆಗಿದ್ದಾರೆ.</p>.<p class="bodytext">ರಾಜ ವಿಲಿಯಂ ಅಲೆಕ್ಸಾಂಡರ್ ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿ, ‘ಉಭಯ ದೇಶಗಳು ಸ್ವಾತಂತ್ರ ಪಡೆದ 75ನೇ ವರ್ಷಾಚರಣೆಯಲ್ಲಿವೆ. ಹೀಗಾಗಿ, ಉಭಯ ದೇಶಗಳ ದ್ವಿಪಕ್ಷೀಯ ಚರ್ಚೆ ಒಂದು ಮೈಲುಗಲ್ಲು’ ಎಂದು ಬಣ್ಣಿಸಿದರು.</p>.<p>ಇಂಡೊ–ಪ್ಯಾಸಿಫಿಕ್ ವಲಯ ಮತ್ತು ಯೂರೋಪ್ ಒಕ್ಕೂಟದಲ್ಲಿ ನೆದರ್ಲೆಂಡ್ನ ಪಾತ್ರ ನಿರ್ಣಾಯಕವಾದುದು. ಭಾರತ ಮತ್ತು ಯುರೋಪ್ ಒಕ್ಕೂಟದ ಬಾಂಧವ್ಯ ವೃದ್ಧಿಯಲ್ಲಿ ನೆದರ್ಲೆಂಡ್ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು.</p>.<p>ಪಶ್ಚಿಮ ಯುರೋಪ್ ರಾಷ್ಟ್ರಗಳಿಂದ ಭಾರತಕ್ಕೆ ಹೂಡಿಕೆ ಪ್ರಮಾಣ ಹೆಚ್ಚಾಗಬೇಕಾಗಿದೆ. ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಮಾರ್ಟ್ ಸಿಟಿ ಅಭಿವೃದ್ಧಿ ಸೇರಿ ವಿವಿಧ ಸುಧಾರಣಾ ಕ್ರಮಗಳು ಹೂಡಿಕೆ ಸ್ನೇಹಿಯಾಗಿವೆ ಎಂದು ಹೇಳಿದರು.</p>.<p>ನೆದರ್ಲೆಂಡ್ನ ರಾಜ ಮತ್ತು ರಾಣಿ ಈ ಹಿಂದೆ 2019ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ರಾಷ್ಟ್ರಪತಿ ಭೇಟಿ ನೀಡಿದ್ದಾರೆ. ಕೋವಿಡ್ ಅವಧಿಯಲ್ಲಿ ನೀಡಿದ ನೆರವಿಗಾಗಿ ಇದೇ ಸಂದರ್ಭದಲ್ಲಿ ನೆದರ್ಲೆಂಡ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಅಮ್ಸ್ಟರ್ ಡ್ಯಾಂ (ಪಿಟಿಐ): ‘</strong>ಪ್ರಜಾಪ್ರಭುತ್ವ, ಆರ್ಥಿಕತೆಯ ದೃಷ್ಟಿಯಿಂದ ಪ್ರವರ್ಧಮಾನದಲ್ಲಿರುವ ಭಾರತ– ನೆದರ್ಲೆಂಡ್ ಜಾಗತಿಕ ಸವಾಲು ಎದುರಿಸುವಲ್ಲಿ ‘ಸಹಜ ಪಾಲುದಾರರು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದ್ದಾರೆ.</p>.<p class="bodytext">‘ಶಾಂತಿ, ಭದ್ರತೆ ಮತ್ತು ಅಭ್ಯುದಯದ ದೃಷ್ಟಿಯಿಂದ ಉಭಯ ದೇಶಗಳು ಏಕರೂಪದ ಬದ್ಧತೆ ಹೊಂದಿವೆ’ ಎಂದೂ ಹೇಳಿದರು. ನೆದರ್ಲೆಂಡ್ ಭೇಟಿ ಅವಧಿಯಲ್ಲಿ ರಾಷ್ಟ್ರಪತಿ ಅವರು ನೆದರ್ಲೆಂಡ್ನ ಉನ್ನತ ನಾಯಕರ ಜೊತೆಗೆ ಚರ್ಚಿಸುವರು.</p>.<p class="bodytext">1988ರಲ್ಲಿ ಆಗ ರಾಷ್ಟ್ರಪತಿಯಾಗಿದ್ದ ಆರ್.ವೆಂಕಟರಾಮನ್ ಅವರು ನೆದರ್ಲೆಂಡ್ಗೆ ಭೇಟಿ ನೀಡಿದ್ದರು. ಈಗ, 34 ವರ್ಷದ ನಂತರ ಭೇಟಿ ನೀಡುತ್ತಿರುವ ಭಾರತದ ಎರಡನೇ ರಾಷ್ಟ್ರಪತಿ ಕೋವಿಂದ್ ಆಗಿದ್ದಾರೆ.</p>.<p class="bodytext">ರಾಜ ವಿಲಿಯಂ ಅಲೆಕ್ಸಾಂಡರ್ ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿ, ‘ಉಭಯ ದೇಶಗಳು ಸ್ವಾತಂತ್ರ ಪಡೆದ 75ನೇ ವರ್ಷಾಚರಣೆಯಲ್ಲಿವೆ. ಹೀಗಾಗಿ, ಉಭಯ ದೇಶಗಳ ದ್ವಿಪಕ್ಷೀಯ ಚರ್ಚೆ ಒಂದು ಮೈಲುಗಲ್ಲು’ ಎಂದು ಬಣ್ಣಿಸಿದರು.</p>.<p>ಇಂಡೊ–ಪ್ಯಾಸಿಫಿಕ್ ವಲಯ ಮತ್ತು ಯೂರೋಪ್ ಒಕ್ಕೂಟದಲ್ಲಿ ನೆದರ್ಲೆಂಡ್ನ ಪಾತ್ರ ನಿರ್ಣಾಯಕವಾದುದು. ಭಾರತ ಮತ್ತು ಯುರೋಪ್ ಒಕ್ಕೂಟದ ಬಾಂಧವ್ಯ ವೃದ್ಧಿಯಲ್ಲಿ ನೆದರ್ಲೆಂಡ್ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು.</p>.<p>ಪಶ್ಚಿಮ ಯುರೋಪ್ ರಾಷ್ಟ್ರಗಳಿಂದ ಭಾರತಕ್ಕೆ ಹೂಡಿಕೆ ಪ್ರಮಾಣ ಹೆಚ್ಚಾಗಬೇಕಾಗಿದೆ. ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಮಾರ್ಟ್ ಸಿಟಿ ಅಭಿವೃದ್ಧಿ ಸೇರಿ ವಿವಿಧ ಸುಧಾರಣಾ ಕ್ರಮಗಳು ಹೂಡಿಕೆ ಸ್ನೇಹಿಯಾಗಿವೆ ಎಂದು ಹೇಳಿದರು.</p>.<p>ನೆದರ್ಲೆಂಡ್ನ ರಾಜ ಮತ್ತು ರಾಣಿ ಈ ಹಿಂದೆ 2019ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ರಾಷ್ಟ್ರಪತಿ ಭೇಟಿ ನೀಡಿದ್ದಾರೆ. ಕೋವಿಡ್ ಅವಧಿಯಲ್ಲಿ ನೀಡಿದ ನೆರವಿಗಾಗಿ ಇದೇ ಸಂದರ್ಭದಲ್ಲಿ ನೆದರ್ಲೆಂಡ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>