ಆಂಪರ ನಗರದಲ್ಲಿ ಮಾತನಾಡಿದ ಶ್ರೀಲಂಕಾದ ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ, ‘ಭಾರತದಲ್ಲಿ ಬಂಧಿತರಾದವರ ಹಿನ್ನೆಲೆಯ ಕುರಿತು ತನಿಖೆ ನಡೆಸುತ್ತಿದ್ದೇವೆ. ಅವರೆಲ್ಲ ಮಾದಕದ್ರವ್ಯ ವ್ಯಸನಿಗಳು ಎನ್ನುವುದು ದೃಢಪಟ್ಟಿದೆ. ಅವರ ಕೆಲವು ಆಪ್ತರನ್ನೂ ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿದ್ದೇವೆ. ಅವರಿಂದ ಕಲೆಹಾಕಿರುವ ಮಾಹಿತಿಯನ್ನು ಈಗಲೇ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.