<p class="title"><strong>ನ್ಯೂಯಾರ್ಕ್:</strong> ಭಾರತದ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ. ದೇಶೀಯ ಬಳಕೆಯ ಪ್ರಮಾಣವು ಹೆಚ್ಚುತ್ತಿದೆ. ಕೈಗಾರಿಕಾ ಉತ್ಪಾದನೆಯೂ ಕೋವಿಡ್ ಪೂರ್ವದ ಹಂತದಲ್ಲಿ ಇದ್ದ ಸ್ಥಿತಿಗೇ ಮರಳುತ್ತಿದೆ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸುಧಾರಣೆ ಕ್ರಮಗಳು ದೇಶದಲ್ಲಿನ ವ್ಯಾಪಾರ ವ್ಯವಸ್ಥೆಗೆ ಪೂರಕವಾಗಿದೆ ಎಂದೂ ಹೇಳಿದರು. ಇಲ್ಲಿ ಜೈಪುರ ಫೂಟ್ ಅಮೆರಿಕ ಮತ್ತು ಗ್ರೇಷಿಯಸ್ ಗಿವರ್ಸ್ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕಳೆದ ವಾರದ ಆರಂಭದಲ್ಲಿ ಕೀನ್ಯಾದ ಅಧ್ಯಕ್ಷತೆಯಲ್ಲಿ ನಡೆದಿದ್ದ ಶಾಂತಿ ಸ್ಥಾಪನೆ ಮತ್ತು ಶಾಂತಿ ವ್ಯವಸ್ಥೆಯ ರಕ್ಷಣೆ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಚರ್ಚೆಯಲ್ಲಿ ಭಾಗವಹಿಸಲು ಎರಡು ದಿನದ ಭೇಟಿಗಾಗಿ ಸಚಿವ ಮುರುಳೀಧರನ್ ನಗರಕ್ಕೆ ಬಂದಿದ್ದರು.</p>.<p>ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸುಧಾರಣೆ ಕ್ರಮಗಳು ವ್ಯಾಪಾರ ವ್ಯವಸ್ಥೆಗೆ ಪೂರಕವಾಗಿದೆ. ಹೂಡಿಕೆಗಳು, ತಂತ್ರಜ್ಞಾನ ಮತ್ತು ಕೌಶಲಗಳನ್ನು ದೇಶಕ್ಕೆ ತರುವ ಮೂಲಕ ವಲಸಿಗರು ಈ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದೂ ಅಭಿಪ್ರಾಯಪಟ್ಟರು.</p>.<p>ಡಿಜಿಟಲ್ ವಹಿವಾಟುಗಳ ಮೂಲಕ ಬ್ಯಾಂಕಿಂಗ್ ಸುಧಾರಣೆ, ಭ್ರಷ್ಟಾಚಾರ ತಡೆ, ಹಣದುಬ್ಬರ ತಡೆ ಈ ಸುಧಾರಣಾ ಕ್ರಮಗಳಲ್ಲಿ ಸೇರಿವೆ. ಶೇ 90ರಷ್ಟು ವಿದೇಶಿ ನೇರ ಹೂಡಿಕೆ ಪ್ರಕ್ರಿಯೆಯು ಸ್ವಯಂಚಾಲಿಯ ಅನುಮೋದನೆ ಮೂಲಕ ಆಗಿದೆ. ಪ್ರತಿಕ್ಷೇತ್ರಕ್ಕೂ ಅನ್ವಯವಾಗುವಂತೆ ಸೃಜನಶೀಲತೆ,ಅನ್ವೇಷಣೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.</p>.<p class="title">ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಸುಧಾರಣೆ, ನಿರ್ವಹಣೆ ಮತ್ತು ಬದಲಾವಣೆ’ ಎಂಬ ಧ್ಯೇಯವಾಕ್ಯದೊಂದಿಗೆ ದೂರಗಾಮಿ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.</p>.<p class="bodytext">‘ಆತ್ಮನಿರ್ಭರ ಭಾರತ ಎಂದರೆ ಒಳಮುಖವಾಗಿ ಕಾಣುವ ನೀತಿಯೆಂಬ ಅರ್ಥವಲ್ಲ. ಇದು ಜಾಗತಿಕ ಪೂರೈಕೆ ಸರಪಳಿಗಳನ್ನು ಜೋಡಿಸುವ ಮೂಲಕ ನಮ್ಮನ್ನು ಒಂದು ಬಲವಾದ ಸ್ವಾವಲಂಬಿ ಭಾರತದ ಕಡೆಗೆ ಸಕ್ರಿಯಗೊಳಿಸುವ ಮತ್ತು ಮುನ್ನಡೆಸುವ ತಂತ್ರವಾಗಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನ್ಯೂಯಾರ್ಕ್:</strong> ಭಾರತದ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ. ದೇಶೀಯ ಬಳಕೆಯ ಪ್ರಮಾಣವು ಹೆಚ್ಚುತ್ತಿದೆ. ಕೈಗಾರಿಕಾ ಉತ್ಪಾದನೆಯೂ ಕೋವಿಡ್ ಪೂರ್ವದ ಹಂತದಲ್ಲಿ ಇದ್ದ ಸ್ಥಿತಿಗೇ ಮರಳುತ್ತಿದೆ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸುಧಾರಣೆ ಕ್ರಮಗಳು ದೇಶದಲ್ಲಿನ ವ್ಯಾಪಾರ ವ್ಯವಸ್ಥೆಗೆ ಪೂರಕವಾಗಿದೆ ಎಂದೂ ಹೇಳಿದರು. ಇಲ್ಲಿ ಜೈಪುರ ಫೂಟ್ ಅಮೆರಿಕ ಮತ್ತು ಗ್ರೇಷಿಯಸ್ ಗಿವರ್ಸ್ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕಳೆದ ವಾರದ ಆರಂಭದಲ್ಲಿ ಕೀನ್ಯಾದ ಅಧ್ಯಕ್ಷತೆಯಲ್ಲಿ ನಡೆದಿದ್ದ ಶಾಂತಿ ಸ್ಥಾಪನೆ ಮತ್ತು ಶಾಂತಿ ವ್ಯವಸ್ಥೆಯ ರಕ್ಷಣೆ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಚರ್ಚೆಯಲ್ಲಿ ಭಾಗವಹಿಸಲು ಎರಡು ದಿನದ ಭೇಟಿಗಾಗಿ ಸಚಿವ ಮುರುಳೀಧರನ್ ನಗರಕ್ಕೆ ಬಂದಿದ್ದರು.</p>.<p>ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸುಧಾರಣೆ ಕ್ರಮಗಳು ವ್ಯಾಪಾರ ವ್ಯವಸ್ಥೆಗೆ ಪೂರಕವಾಗಿದೆ. ಹೂಡಿಕೆಗಳು, ತಂತ್ರಜ್ಞಾನ ಮತ್ತು ಕೌಶಲಗಳನ್ನು ದೇಶಕ್ಕೆ ತರುವ ಮೂಲಕ ವಲಸಿಗರು ಈ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದೂ ಅಭಿಪ್ರಾಯಪಟ್ಟರು.</p>.<p>ಡಿಜಿಟಲ್ ವಹಿವಾಟುಗಳ ಮೂಲಕ ಬ್ಯಾಂಕಿಂಗ್ ಸುಧಾರಣೆ, ಭ್ರಷ್ಟಾಚಾರ ತಡೆ, ಹಣದುಬ್ಬರ ತಡೆ ಈ ಸುಧಾರಣಾ ಕ್ರಮಗಳಲ್ಲಿ ಸೇರಿವೆ. ಶೇ 90ರಷ್ಟು ವಿದೇಶಿ ನೇರ ಹೂಡಿಕೆ ಪ್ರಕ್ರಿಯೆಯು ಸ್ವಯಂಚಾಲಿಯ ಅನುಮೋದನೆ ಮೂಲಕ ಆಗಿದೆ. ಪ್ರತಿಕ್ಷೇತ್ರಕ್ಕೂ ಅನ್ವಯವಾಗುವಂತೆ ಸೃಜನಶೀಲತೆ,ಅನ್ವೇಷಣೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.</p>.<p class="title">ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಸುಧಾರಣೆ, ನಿರ್ವಹಣೆ ಮತ್ತು ಬದಲಾವಣೆ’ ಎಂಬ ಧ್ಯೇಯವಾಕ್ಯದೊಂದಿಗೆ ದೂರಗಾಮಿ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.</p>.<p class="bodytext">‘ಆತ್ಮನಿರ್ಭರ ಭಾರತ ಎಂದರೆ ಒಳಮುಖವಾಗಿ ಕಾಣುವ ನೀತಿಯೆಂಬ ಅರ್ಥವಲ್ಲ. ಇದು ಜಾಗತಿಕ ಪೂರೈಕೆ ಸರಪಳಿಗಳನ್ನು ಜೋಡಿಸುವ ಮೂಲಕ ನಮ್ಮನ್ನು ಒಂದು ಬಲವಾದ ಸ್ವಾವಲಂಬಿ ಭಾರತದ ಕಡೆಗೆ ಸಕ್ರಿಯಗೊಳಿಸುವ ಮತ್ತು ಮುನ್ನಡೆಸುವ ತಂತ್ರವಾಗಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>