<p><strong>ಸಿಂಗಪುರ:</strong> ಭಾರತೀಯ ಮೂಲದ ಪ್ರೀತಂ ಸಿಂಗ್ ಅವರು ಸಿಂಗಪುರ ಸಂಸತ್ತಿನ ಮೊದಲ ವಿರೋಧ ಪಕ್ಷದ ನಾಯಕರಾಗಿ ಸೋಮವಾರ ಅಧಿಕಾರ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.</p>.<p>ಜುಲೈ 10ರಂದು ಸಿಂಗಪುರದ ಒಟ್ಟು 93 ಸಂಸತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರೀತಂ ಸಿಂಗ್ ಅವರ ವರ್ಕರ್ಸ್ ಪಕ್ಷವು 10 ಸ್ಥಾನಗಳನ್ನು ಪಡೆದಿತ್ತು. ಆಡಳಿತಾರೂಢ ಆ್ಯಕ್ಷನ್ ಪಕ್ಷ 83 ಸ್ಥಾನಗಳಿಸಿದೆ.</p>.<p>ಇದೇ ಮೊದಲ ಬಾರಿಗೆ ವಿರೋಧ ಪಕ್ಷ 10 ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವರ್ಕರ್ಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂ ಸಿಂಗ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ.</p>.<p>ಆಡಳಿತಾರೂಢ ಆ್ಯಕ್ಷನ್ ಪಕ್ಷದದಿಂದ (ಪಿಎಪಿ) ಸಂಸತ್ತಿನ ನಾಯಕರಾಗಿರುವ ಇಂದ್ರಾಣಿ ರಾಜನ್ ಕೂಡಾ ಭಾರತೀಯ ಮೂಲದವರು. ಸೋಮವಾರ ಸದನ ಆರಂಭವಾಗುತ್ತಿದ್ದಂತೆಯೇ 43 ವರ್ಷದ ಪ್ರೀತಂ ಸಿಂಗ್ ಅವರನ್ನು ಸಂಸತ್ತಿನ ಮೊದಲ ವಿರೋಧ ಪಕ್ಷದ ನಾಯಕನೆಂದು ಘೋಷಿಸಲಾಯಿತು.</p>.<p>ಪ್ರೀತಂ ಅವರು ತಮಗೆ ಬರುವ ಭತ್ಯೆಯಲ್ಲಿ ಅರ್ಧದಷ್ಟನ್ನು ತಮ್ಮ ಕ್ಷೇತ್ರದ ಬಡ ನಿವಾಸಿಗಳಿಗೆ ಮೀಸಲಿಡಲು ತೀರ್ಮಾನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಪುರ:</strong> ಭಾರತೀಯ ಮೂಲದ ಪ್ರೀತಂ ಸಿಂಗ್ ಅವರು ಸಿಂಗಪುರ ಸಂಸತ್ತಿನ ಮೊದಲ ವಿರೋಧ ಪಕ್ಷದ ನಾಯಕರಾಗಿ ಸೋಮವಾರ ಅಧಿಕಾರ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.</p>.<p>ಜುಲೈ 10ರಂದು ಸಿಂಗಪುರದ ಒಟ್ಟು 93 ಸಂಸತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರೀತಂ ಸಿಂಗ್ ಅವರ ವರ್ಕರ್ಸ್ ಪಕ್ಷವು 10 ಸ್ಥಾನಗಳನ್ನು ಪಡೆದಿತ್ತು. ಆಡಳಿತಾರೂಢ ಆ್ಯಕ್ಷನ್ ಪಕ್ಷ 83 ಸ್ಥಾನಗಳಿಸಿದೆ.</p>.<p>ಇದೇ ಮೊದಲ ಬಾರಿಗೆ ವಿರೋಧ ಪಕ್ಷ 10 ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವರ್ಕರ್ಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂ ಸಿಂಗ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ.</p>.<p>ಆಡಳಿತಾರೂಢ ಆ್ಯಕ್ಷನ್ ಪಕ್ಷದದಿಂದ (ಪಿಎಪಿ) ಸಂಸತ್ತಿನ ನಾಯಕರಾಗಿರುವ ಇಂದ್ರಾಣಿ ರಾಜನ್ ಕೂಡಾ ಭಾರತೀಯ ಮೂಲದವರು. ಸೋಮವಾರ ಸದನ ಆರಂಭವಾಗುತ್ತಿದ್ದಂತೆಯೇ 43 ವರ್ಷದ ಪ್ರೀತಂ ಸಿಂಗ್ ಅವರನ್ನು ಸಂಸತ್ತಿನ ಮೊದಲ ವಿರೋಧ ಪಕ್ಷದ ನಾಯಕನೆಂದು ಘೋಷಿಸಲಾಯಿತು.</p>.<p>ಪ್ರೀತಂ ಅವರು ತಮಗೆ ಬರುವ ಭತ್ಯೆಯಲ್ಲಿ ಅರ್ಧದಷ್ಟನ್ನು ತಮ್ಮ ಕ್ಷೇತ್ರದ ಬಡ ನಿವಾಸಿಗಳಿಗೆ ಮೀಸಲಿಡಲು ತೀರ್ಮಾನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>