ಲಾಸ್ ಏಂಜಲೀಸ್: ಸ್ಯಾನ್ ಜೋಸ್ನ ರೈಲ್ವೆಯಾರ್ಡ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಸಿಖ್ ವ್ಯಕ್ತಿಯೂ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.
ತಪ್ತೇಜ್ದೀಪ್ ಸಿಂಗ್ ಮೃತಪಟ್ಟವರು. ಇವರು ಕಳೆದ ಒಂಬತ್ತು ವರ್ಷಗಳಿಂದ ಕಣಿವೆ ಸಾರಿಗೆ ಪ್ರಾಧಿಕಾರದ (ವಿಟಿಎ) ಸಿಬ್ಬಂದಿಯಾಗಿದ್ದರು.
ಸಾಯುವ ಸಂದರ್ಭದಲ್ಲಿಯೂ ಇತರರನ್ನು ರಕ್ಷಿಸಲು ತಪ್ತೇಜ್ದೀಪ್ ಪ್ರಯತ್ನಿಸಿದ್ದರು. ಅವರಿಂದ ಕೆಲವರ ಪ್ರಾಣ ಉಳಿದಿದೆ. ಅವರೊಬ್ಬ ಹೀರೊ ಎಂದು ಸ್ಥಳದಲ್ಲಿದ್ದವರು ಬಣ್ಣಿಸಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ.