‘ಕಳೆದ ವರ್ಷ ಭಾರತದ ಏಜೆಂಟ್ ಒಬ್ಬ ಕೆನಡಾಗೆ ಕೊಂಡೊಯ್ಯುವುದಾಗಿ ನನ್ನನ್ನು ನಂಬಿಸಿದ್ದ. ಆತನೇ ನನ್ನನ್ನು ಹಾಗೂ ಮಗನನ್ನು ದುಬೈಗೆ ಕರೆದೊಯ್ದಿದ್ದ. ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಪ್ರಯಾಣ ಮಾಡಿದ್ದೆವು. ಅಲ್ಲಿ ನಮ್ಮ ಪಾಸ್ಪೋರ್ಟ್ಗಳನ್ನು ಕಿತ್ತುಕೊಂಡು, ಹಣವನ್ನೂ ಪಡೆದು ಪರಾರಿಯಾಗಿದ್ದ. ಚಮನ್ ಗಡಿ ದಾಟಿ, ಪಾಕಿಸ್ತಾನ ಪ್ರವೇಶಿಸಿದೆವು. ಅಲ್ಲಿಂದ ಹೇಗಾದರೂ ಮಾಡಿ ಭಾರತ ತಲುಪಬಹುದು ಎಂದುಕೊಂಡಿದ್ದೆವು. ಪೊಲೀಸರು ಅಲ್ಲಿ ಬಂಧಿಸಿದರು’ ಎಂದು ವಹೀದಾ ಪಾಕಿಸ್ತಾನದ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು.