’ಭಾರತದಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಸೇನಾ ಪಡೆಗಳು ಸೇರಿದಂತೆ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಸರ್ಕಾರ ಮೇಕ್ಶಿಫ್ಟ್ ಆಸ್ಪತ್ರೆಗಳನ್ನು ಬಯಲು ಪ್ರದೇಶದಲ್ಲಿ ನಿರ್ಮಿಸಬೇಕು. ಇತರ ರಾಷ್ಟ್ರಗಳು ಸಹ ವೈದ್ಯಕೀಯ ಸಿಬ್ಬಂದಿ ಮತ್ತು ಔಷಧಗಳನ್ನು ಪೂರೈಸಲು ನೆರವಾಗಬೇಕು’ ಎಂದು ಫೌಸಿ ಅವರು ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆ ನೀಡಿದ ಬಳಿಕ ಸಂಧು ಅವರು ಚರ್ಚೆ ನಡೆಸಿದ್ದಾರೆ.