ಟೊರೊಂಟೊ: ಕೆನಡಾದ ವಿವಿಧೆಡೆ ಹಿಂದೂ ದೇಗುಲಗಳಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಜಗದೀಶ್ ಪಂಢೇರ್ (41) ಎಂದು ಗುರುತಿಸಲಾಗಿದೆ.
‘ಇದು ದ್ವೇಷದಿಂದ ಮಾಡಿದ ಕೃತ್ಯಗಳಂತೆ ಕಾಣಿಸುತ್ತಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪಂಢೇರ್, ದೇಗುಲಗಳ ಬಾಗಿಲುಗಳನ್ನು ಒಡೆದು ಒಳನುಗ್ಗಿ, ಕಾಣಿಕೆ ಡಬ್ಬಗಳಿಂದ ಅಪಾರ ಪ್ರಮಾಣದ ನಗದನ್ನು ಹೊತ್ತೊಯ್ದಿರುವುದು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇತರೆ ದೇಗುಲಗಳಲ್ಲಿ ನಡೆದ ಕಳ್ಳತನಕ್ಕೂ ಈತನಿಗೂ ಸಂಬಂಧ ಇದೆ ಎಂದು ಶಂಕಿಸಲಾಗಿದೆ’ ಎಂದೂ ತಿಳಿಸಿದ್ದಾರೆ.