<p class="title"><strong>ಟೊಕಿಯೊ (ರಾಯಿಟರ್ಸ್): </strong>ಚುನಾವಣಾ ಗೆಲುವಿನ ಹಿಂದೆಯೇ ಜಪಾನ್ನ ಪ್ರಧಾನಿ ಫುಮಿಯೊ ಕಿಶಿಡಾ ಅವರು, ಚೀನಾದ ಬೆದರಿಕೆ ತಡೆಗೆ ರಕ್ಷಣಾ ನೀತಿಗಳ ಪರಿಷ್ಕರಣೆ ಸೇರಿದಂತೆ ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.</p>.<p class="title">ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ಕಿಶಿಡಾ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಕ್ಷವು (ಎಲ್ಡಿಪಿ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಂಸತ್ತಿನಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.</p>.<p class="title">ಕೋವಿಡ್ ಹಿನ್ನೆಲೆಯಲ್ಲಿ ಸೊರಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಹೆಚ್ಚುವರಿ ಬಜೆಟ್ ನಿಗದಿ ಹಾಗೂ ಜಾಗತಿಕ ತಾಪಮಾನ ತಡೆಗೆ ಕ್ರಮಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ವರು ಹೇಳಿದ್ದಾರೆ.</p>.<p>ಕಿಶಿಡಾ ಅವರು ಇನ್ನೊಂದು ತಿಂಗಳಷ್ಟೇ ಅಧಿಕಾರದಲ್ಲಿ ಇರಲಿದ್ದು, ಅಲ್ಪಾವಧಿಗೆ ಅಧಿಕಾರದಲ್ಲಿದ್ದ ಮತ್ತೊಬ್ಬ ಪ್ರಧಾನಿ ಎಂಬ ಪಟ್ಟಿಗೆ ಸೇರುವಂತೆ ಎಂಬ ಅಭಿಪ್ರಾಯವಿತ್ತು. ಆದರೆ, ಚುನಾವಣಾ ಫಲಿತಾಂಶಗಳು ಇದನ್ನು ಸುಳ್ಳಾಗಿಸಿವೆ. ಜನರ ಧ್ವನಿಗೆ ಅನುಗುಣವಾಗಿ ನೀತಿಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲಿದ್ದೇವೆ ಎಂದು ಕಿಶಿಡಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ರಕ್ಷಣಾ ನೀತಿಗೆ ಪರಿಷ್ಕರಣೆ, ಜಿಡಿಪಿಯ ಶೇ 2ರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸಲಾಗುವುದು ಎಂದು ಎಲ್ಡಿಪಿ ಹೇಳಿತ್ತು. ಜನರ ಜೀವ, ಜೀವನದ ರಕ್ಷಣೆಯೇ ಮೊದಲ ಆದ್ಯತೆ. ಇದಕ್ಕೆ ಬಜೆಟ್ ತೊಡಕಾಗದು ಎಂದು ಕಿಶಿಡಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಟೊಕಿಯೊ (ರಾಯಿಟರ್ಸ್): </strong>ಚುನಾವಣಾ ಗೆಲುವಿನ ಹಿಂದೆಯೇ ಜಪಾನ್ನ ಪ್ರಧಾನಿ ಫುಮಿಯೊ ಕಿಶಿಡಾ ಅವರು, ಚೀನಾದ ಬೆದರಿಕೆ ತಡೆಗೆ ರಕ್ಷಣಾ ನೀತಿಗಳ ಪರಿಷ್ಕರಣೆ ಸೇರಿದಂತೆ ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.</p>.<p class="title">ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ಕಿಶಿಡಾ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಕ್ಷವು (ಎಲ್ಡಿಪಿ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಂಸತ್ತಿನಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.</p>.<p class="title">ಕೋವಿಡ್ ಹಿನ್ನೆಲೆಯಲ್ಲಿ ಸೊರಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಹೆಚ್ಚುವರಿ ಬಜೆಟ್ ನಿಗದಿ ಹಾಗೂ ಜಾಗತಿಕ ತಾಪಮಾನ ತಡೆಗೆ ಕ್ರಮಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ವರು ಹೇಳಿದ್ದಾರೆ.</p>.<p>ಕಿಶಿಡಾ ಅವರು ಇನ್ನೊಂದು ತಿಂಗಳಷ್ಟೇ ಅಧಿಕಾರದಲ್ಲಿ ಇರಲಿದ್ದು, ಅಲ್ಪಾವಧಿಗೆ ಅಧಿಕಾರದಲ್ಲಿದ್ದ ಮತ್ತೊಬ್ಬ ಪ್ರಧಾನಿ ಎಂಬ ಪಟ್ಟಿಗೆ ಸೇರುವಂತೆ ಎಂಬ ಅಭಿಪ್ರಾಯವಿತ್ತು. ಆದರೆ, ಚುನಾವಣಾ ಫಲಿತಾಂಶಗಳು ಇದನ್ನು ಸುಳ್ಳಾಗಿಸಿವೆ. ಜನರ ಧ್ವನಿಗೆ ಅನುಗುಣವಾಗಿ ನೀತಿಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲಿದ್ದೇವೆ ಎಂದು ಕಿಶಿಡಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ರಕ್ಷಣಾ ನೀತಿಗೆ ಪರಿಷ್ಕರಣೆ, ಜಿಡಿಪಿಯ ಶೇ 2ರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸಲಾಗುವುದು ಎಂದು ಎಲ್ಡಿಪಿ ಹೇಳಿತ್ತು. ಜನರ ಜೀವ, ಜೀವನದ ರಕ್ಷಣೆಯೇ ಮೊದಲ ಆದ್ಯತೆ. ಇದಕ್ಕೆ ಬಜೆಟ್ ತೊಡಕಾಗದು ಎಂದು ಕಿಶಿಡಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>