<p><strong>ಮ್ಯೂನಿಕ್:</strong> ಇಲ್ಲಿನ ಸಿರಿಗನ್ನಡಕೂಟದ ಎರಡನೇ ಆವೃತ್ತಿಯ ‘ಕನ್ನಡ ಕಹಳೆ-ಸಾಹಿತ್ಯ ಸಂಜೆ‘ ಕಾರ್ಯಕ್ರಮ ನಡೆಯಿತು.</p>.<p>ಕಾರ್ಯಕ್ರಮಕ್ಕೆ ಜರ್ಮನಿಯ ನಾನಾ ರಾಜ್ಯಗಳಲ್ಲಿನ ಕನ್ನಡಿಗರು ಮಾತ್ರವಲ್ಲದೇನೆದರ್ಲ್ಯಾಂಡ್ ಮತ್ತು ಇಂಗ್ಲೆಂಡ್ ದೇಶದಿಂದಲೂ ನೂರಾರು ಜನರು ಆನ್ಲೈನ್ ಮೂಲಕ ಭಾಗವಹಿಸಿದ್ದರು. ಯೂಟ್ಯೂಬ್ನಲ್ಲಿಈ ಕಾರ್ಯಕ್ರಮ ನೇರ ಪ್ರಸಾರವಾಯಿತು.</p>.<p>ಚೈತ್ರಾ ಅವರು ‘ಗರ್ಭ‘,ವಿದ್ಯಾ ಯೋಗೀಶ ಅವರು ‘ಹುಡುಗರ ಪಾಡು‘, ರೇಶ್ಮಾ ಮೋರ್ಟು ಅವರು ‘ವಲಸೆ‘, ಕಮಲಾಕ್ಷ ಎಚ್.ಎ ಅವರು ‘ಪ್ರೀತಿಯ ಹೊನಲು‘, ಶಾಲಿನಿ ಶಿವಕುಮಾರ್ ರವರು ‘ಮುಖವಾಡ‘, ಸುನೀಲ್ ದೇಶಪಾಂಡೆ ಅವರು ‘ನೀನ್ಯಾರು, ನಾನ್ಯಾರು‘ ಮತ್ತು ‘ಬಂಧನ‘ ಎಂಬ ಕವನಗಳನ್ನು ವಾಚಿಸಿದರು.</p>.<p>ಫ್ರಾಂಕ್ಫರ್ಟ್ ನಿಂದ ಶೋಭಾ ಚೌಹಾಣ್ ಅವರು ‘ವಿದಾಯ‘, ಇಂಗ್ಲೆಂಡ್ನಿಂದ ಹನೀಫ್ ಅವರು ‘ಬದುಕುವ ಕಲಿಯಿರಿ‘ ಎಂಬ<br />ಕವನವಗಳನ್ನು ವಾಚಿಸಿದರು.</p>.<p>ನೆದರ್ಲ್ಯಾಂಡ್ ನಿಂದ ಶ್ರೀನಾಥ ಗರದೂರು ಚಿದಂಬರ ಅವರು ‘ರಹಸ್ಯ ರಾತ್ರಿಗಳು‘ ಎಂಬ ಸಣ್ಣ ಕಥೆಯನ್ನು ಹಾಗೂ ಅರವಿಂದ ಸುಬ್ರಮಣ್ಯ ಅವರು ‘ನಮಸ್ಕಾರ, ನಮಸ್ಕಾರ, ನಮಸ್ಕಾರ‘ ಎಂಬ ಲಲಿತ ಪ್ರಬಂಧವನ್ನು ವಾಚಿಸಿದರು.</p>.<p><strong>ತ್ರೈಮಾಸಿಕ ಪತ್ರಿಕೆ ‘ಹೊನ್ನುಡಿ‘ ಬಿಡುಗಡೆ</strong></p>.<p>ಇದೇ ಕಾರ್ಯಕ್ರಮದಲ್ಲಿ ಸಿರಿಗನ್ನಡ ಕೂಟ ಮಂಡಳಿಯ ಸದಸ್ಯರಾದ ಅರವಿಂದ ಸುಬ್ರಮಣ್ಯರವರು ಸಿರಿಗನ್ನಡಕೂಟದ<br />ಬಹುವರ್ಷದ ಕನಸಾದ ತ್ರೈಮಾಸಿಕ ಪತ್ರಿಕೆ ‘ಹೊನ್ನುಡಿ‘ಯನ್ನು ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷರಾದ ಕಾರ್ತಿಕ್<br />ಮಂಜುನಾಥ ಅವರು ‘ಹೊನ್ನುಡಿ‘ಯನ್ನು ಉದ್ದೇಶಿಸಿ ಮಾತನಾಡಿದರು.</p>.<p>ಈ ತ್ರೈಮಾಸಿಕ ಪತ್ರಿಕೆಯು ಅನಿವಾಸಿ ಕನ್ನಡಿಗರ ನುಡಿ. ಇದು ಬರಿ ಸಿರಿಗನ್ನಡ ಕೂಟಕ್ಕಾಗಲಿ, ಮ್ಯೂನಿಕ್ ಅಥವಾ ಜರ್ಮನಿಗೆ ಸೀಮಿತವಲ್ಲ. ಎಲ್ಲಾ ಅನಿವಾಸಿ ಕನ್ನಡಿಗರ ಕಲಾತ್ಮಕ ಹವ್ಯಾಸಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುವಂತಹದ್ದು ಎಂದರು.</p>.<p>ಹವ್ಯಾಸಿ ಬರಹಗಾರರ ಪ್ರವಾಸ ಕಥನಗಳು,ದಾರಾವಾಹಿಗಳು, ಕತೆ, ಕವನಗಳು, ಅಂಕಣಗಳು, ವ್ಯಂಗ್ಯ ಚಿತ್ರಗಳು, ಚಿತ್ರಕಲೆ, ಛಾಯಚಿತ್ರ, ಪದಬಂಧ ಸೇರಿದಂತೆ ಇತರೆ ಸಾಹಿತ್ಯ ಪ್ರಕಾರಗಳನ್ನು ಓದಿ ಮತ್ತು ಬರೆಯುವ ಮೂಲಕ ಎಲ್ಲರೂ ಸದುಪಯೋಗ ಪಡಿಸಿಕೊಳ್ಳುಬೇಕೆಂದು ಕಾರ್ತಿಕ್ ಮಂಜುನಾಥ್ ಹೇಳಿದರು.</p>.<p>ಅರವಿಂದ ಸುಬ್ರಮಣ್ಯ ಅವರು ಸಿರಿಗನ್ನಡಕೂಟದ ‘ಮನನ ಮಥನ ನಮನ‘ ವೇದಿಕೆಯ ‘ನಮನ‘ ವಿಭಾಗಕೆ ಚಾಲನೆ ನೀಡಿ ಮಾತನಾಡಿದರು. ಯುರೋಪಿನ ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಕತೆ, ಕಾದಂಬರಿ ಓದುವುದನ್ನು ಮತ್ತಷ್ಚು ಜಾಗೃತಗೊಳಿಸಲು<br />ಮತ್ತು ಸಾಹಿತ್ಯಾಸಕ್ತ ಓದುಗರಿಗೆ ಕತೆ ಕಾದಂಬರಿಗಳ ವಿಮರ್ಶೆಗೆ ನಮನ ಒಂದು ವೇದಿಕೆಯಾಗಿದೆ ಎಂದು ತಿಳಿಸಿದರು.</p>.<p><strong>2023ರ ಕನ್ನಡ ರಾಜ್ಯೋತ್ಸವಕ್ಕೆ ಕತೆ ಮತ್ತು ಕವನ ಸಂಕಲನಗಳ ಬಿಡುಗಡೆ</strong></p>.<p>2023ನೇ ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ಸಿರಿಗನ್ನಡ ಕೂಟದ ವತಿಯಿಂದ ಕವನ ಮತ್ತು ಕಥಾ ಸಂಕಲನ ಬಿಡುಗಡೆ ಮಾಡುವುದಾಗಿಸಿರಿಗನ್ನಡ ಕೂಟ ಘೋಷಣೆ ಮಾಡಿತು. ಈ ನಿಟ್ಟಿನಲ್ಲಿ ಆಸಕ್ತರುಬರವಣಿಗೆಯನ್ನು ಶುರುಮಾಡಿ ನಿಗದಿತ ಸಮಯಕ್ಕೆ ಸ್ವರಚಿತ ಕತೆ ಮತ್ತು ಕವನಗಳನ್ನು ಹಂಚಿಕೊಳ್ಳಬೇಕಾಗಿ ಕಾರ್ತಿಕ್ ಮಂಜುನಾಥ್,ಅರವಿಂದ ಸುಬ್ರಮಣ್ಯ ಹಾಗೂಕಮಲಾಕ್ಷ ಎಚ್.ಎ ಮನವಿ ಮಾಡಿದರು.</p>.<p><strong>ವರದಿ: ಕಮಲಾಕ್ಷ ಎಚ್.ಎ</strong><br /><strong>ಸಿರಿಗನ್ನಡಕೂಟ, ಮ್ಯೂನಿಕ್, ಜರ್ಮನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮ್ಯೂನಿಕ್:</strong> ಇಲ್ಲಿನ ಸಿರಿಗನ್ನಡಕೂಟದ ಎರಡನೇ ಆವೃತ್ತಿಯ ‘ಕನ್ನಡ ಕಹಳೆ-ಸಾಹಿತ್ಯ ಸಂಜೆ‘ ಕಾರ್ಯಕ್ರಮ ನಡೆಯಿತು.</p>.<p>ಕಾರ್ಯಕ್ರಮಕ್ಕೆ ಜರ್ಮನಿಯ ನಾನಾ ರಾಜ್ಯಗಳಲ್ಲಿನ ಕನ್ನಡಿಗರು ಮಾತ್ರವಲ್ಲದೇನೆದರ್ಲ್ಯಾಂಡ್ ಮತ್ತು ಇಂಗ್ಲೆಂಡ್ ದೇಶದಿಂದಲೂ ನೂರಾರು ಜನರು ಆನ್ಲೈನ್ ಮೂಲಕ ಭಾಗವಹಿಸಿದ್ದರು. ಯೂಟ್ಯೂಬ್ನಲ್ಲಿಈ ಕಾರ್ಯಕ್ರಮ ನೇರ ಪ್ರಸಾರವಾಯಿತು.</p>.<p>ಚೈತ್ರಾ ಅವರು ‘ಗರ್ಭ‘,ವಿದ್ಯಾ ಯೋಗೀಶ ಅವರು ‘ಹುಡುಗರ ಪಾಡು‘, ರೇಶ್ಮಾ ಮೋರ್ಟು ಅವರು ‘ವಲಸೆ‘, ಕಮಲಾಕ್ಷ ಎಚ್.ಎ ಅವರು ‘ಪ್ರೀತಿಯ ಹೊನಲು‘, ಶಾಲಿನಿ ಶಿವಕುಮಾರ್ ರವರು ‘ಮುಖವಾಡ‘, ಸುನೀಲ್ ದೇಶಪಾಂಡೆ ಅವರು ‘ನೀನ್ಯಾರು, ನಾನ್ಯಾರು‘ ಮತ್ತು ‘ಬಂಧನ‘ ಎಂಬ ಕವನಗಳನ್ನು ವಾಚಿಸಿದರು.</p>.<p>ಫ್ರಾಂಕ್ಫರ್ಟ್ ನಿಂದ ಶೋಭಾ ಚೌಹಾಣ್ ಅವರು ‘ವಿದಾಯ‘, ಇಂಗ್ಲೆಂಡ್ನಿಂದ ಹನೀಫ್ ಅವರು ‘ಬದುಕುವ ಕಲಿಯಿರಿ‘ ಎಂಬ<br />ಕವನವಗಳನ್ನು ವಾಚಿಸಿದರು.</p>.<p>ನೆದರ್ಲ್ಯಾಂಡ್ ನಿಂದ ಶ್ರೀನಾಥ ಗರದೂರು ಚಿದಂಬರ ಅವರು ‘ರಹಸ್ಯ ರಾತ್ರಿಗಳು‘ ಎಂಬ ಸಣ್ಣ ಕಥೆಯನ್ನು ಹಾಗೂ ಅರವಿಂದ ಸುಬ್ರಮಣ್ಯ ಅವರು ‘ನಮಸ್ಕಾರ, ನಮಸ್ಕಾರ, ನಮಸ್ಕಾರ‘ ಎಂಬ ಲಲಿತ ಪ್ರಬಂಧವನ್ನು ವಾಚಿಸಿದರು.</p>.<p><strong>ತ್ರೈಮಾಸಿಕ ಪತ್ರಿಕೆ ‘ಹೊನ್ನುಡಿ‘ ಬಿಡುಗಡೆ</strong></p>.<p>ಇದೇ ಕಾರ್ಯಕ್ರಮದಲ್ಲಿ ಸಿರಿಗನ್ನಡ ಕೂಟ ಮಂಡಳಿಯ ಸದಸ್ಯರಾದ ಅರವಿಂದ ಸುಬ್ರಮಣ್ಯರವರು ಸಿರಿಗನ್ನಡಕೂಟದ<br />ಬಹುವರ್ಷದ ಕನಸಾದ ತ್ರೈಮಾಸಿಕ ಪತ್ರಿಕೆ ‘ಹೊನ್ನುಡಿ‘ಯನ್ನು ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷರಾದ ಕಾರ್ತಿಕ್<br />ಮಂಜುನಾಥ ಅವರು ‘ಹೊನ್ನುಡಿ‘ಯನ್ನು ಉದ್ದೇಶಿಸಿ ಮಾತನಾಡಿದರು.</p>.<p>ಈ ತ್ರೈಮಾಸಿಕ ಪತ್ರಿಕೆಯು ಅನಿವಾಸಿ ಕನ್ನಡಿಗರ ನುಡಿ. ಇದು ಬರಿ ಸಿರಿಗನ್ನಡ ಕೂಟಕ್ಕಾಗಲಿ, ಮ್ಯೂನಿಕ್ ಅಥವಾ ಜರ್ಮನಿಗೆ ಸೀಮಿತವಲ್ಲ. ಎಲ್ಲಾ ಅನಿವಾಸಿ ಕನ್ನಡಿಗರ ಕಲಾತ್ಮಕ ಹವ್ಯಾಸಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುವಂತಹದ್ದು ಎಂದರು.</p>.<p>ಹವ್ಯಾಸಿ ಬರಹಗಾರರ ಪ್ರವಾಸ ಕಥನಗಳು,ದಾರಾವಾಹಿಗಳು, ಕತೆ, ಕವನಗಳು, ಅಂಕಣಗಳು, ವ್ಯಂಗ್ಯ ಚಿತ್ರಗಳು, ಚಿತ್ರಕಲೆ, ಛಾಯಚಿತ್ರ, ಪದಬಂಧ ಸೇರಿದಂತೆ ಇತರೆ ಸಾಹಿತ್ಯ ಪ್ರಕಾರಗಳನ್ನು ಓದಿ ಮತ್ತು ಬರೆಯುವ ಮೂಲಕ ಎಲ್ಲರೂ ಸದುಪಯೋಗ ಪಡಿಸಿಕೊಳ್ಳುಬೇಕೆಂದು ಕಾರ್ತಿಕ್ ಮಂಜುನಾಥ್ ಹೇಳಿದರು.</p>.<p>ಅರವಿಂದ ಸುಬ್ರಮಣ್ಯ ಅವರು ಸಿರಿಗನ್ನಡಕೂಟದ ‘ಮನನ ಮಥನ ನಮನ‘ ವೇದಿಕೆಯ ‘ನಮನ‘ ವಿಭಾಗಕೆ ಚಾಲನೆ ನೀಡಿ ಮಾತನಾಡಿದರು. ಯುರೋಪಿನ ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಕತೆ, ಕಾದಂಬರಿ ಓದುವುದನ್ನು ಮತ್ತಷ್ಚು ಜಾಗೃತಗೊಳಿಸಲು<br />ಮತ್ತು ಸಾಹಿತ್ಯಾಸಕ್ತ ಓದುಗರಿಗೆ ಕತೆ ಕಾದಂಬರಿಗಳ ವಿಮರ್ಶೆಗೆ ನಮನ ಒಂದು ವೇದಿಕೆಯಾಗಿದೆ ಎಂದು ತಿಳಿಸಿದರು.</p>.<p><strong>2023ರ ಕನ್ನಡ ರಾಜ್ಯೋತ್ಸವಕ್ಕೆ ಕತೆ ಮತ್ತು ಕವನ ಸಂಕಲನಗಳ ಬಿಡುಗಡೆ</strong></p>.<p>2023ನೇ ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ಸಿರಿಗನ್ನಡ ಕೂಟದ ವತಿಯಿಂದ ಕವನ ಮತ್ತು ಕಥಾ ಸಂಕಲನ ಬಿಡುಗಡೆ ಮಾಡುವುದಾಗಿಸಿರಿಗನ್ನಡ ಕೂಟ ಘೋಷಣೆ ಮಾಡಿತು. ಈ ನಿಟ್ಟಿನಲ್ಲಿ ಆಸಕ್ತರುಬರವಣಿಗೆಯನ್ನು ಶುರುಮಾಡಿ ನಿಗದಿತ ಸಮಯಕ್ಕೆ ಸ್ವರಚಿತ ಕತೆ ಮತ್ತು ಕವನಗಳನ್ನು ಹಂಚಿಕೊಳ್ಳಬೇಕಾಗಿ ಕಾರ್ತಿಕ್ ಮಂಜುನಾಥ್,ಅರವಿಂದ ಸುಬ್ರಮಣ್ಯ ಹಾಗೂಕಮಲಾಕ್ಷ ಎಚ್.ಎ ಮನವಿ ಮಾಡಿದರು.</p>.<p><strong>ವರದಿ: ಕಮಲಾಕ್ಷ ಎಚ್.ಎ</strong><br /><strong>ಸಿರಿಗನ್ನಡಕೂಟ, ಮ್ಯೂನಿಕ್, ಜರ್ಮನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>