<p><strong>ಮಾಲೆ:</strong> ‘ಉಪ ಸಚಿವರ ಹೇಳಿಕೆ ಕುರಿತು ಮಾಲ್ದೀವ್ಸ್ ಸರ್ಕಾರವು ಕ್ಷಮೆ ಕೇಳಬೇಕಿತ್ತು, ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕಿತ್ತು’ ಎಂದು ಮಾಲ್ದೀವ್ಸ್ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಹೇಳಿದ್ದಾರೆ.</p>.<p>ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ದೇಶದ ಉಪ ಸಚಿವರು ಭಾರತದ ಪ್ರಧಾನಿ ಕುರಿತು ಆಡಿರುವ ಮಾತುಗಳು ಸ್ವೀಕಾರ್ಹವಲ್ಲ’ ಎಂದಿದ್ದಾರೆ.</p>.<p>‘ಈ ರೀತಿಯ ಘಟನೆ ಎಂದಿಗೂ ಆಗಬಾರದಿತ್ತು. ಈ ಕುರಿತು ಮಾಲ್ದೀವ್ಸ್ ಸರ್ಕಾರವು ಇದಕ್ಕೂ ಮುಂಚೆಯೇ ಪ್ರತಿಕ್ರಿಯಿಸಬೇಕಿತ್ತು ಮತ್ತು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈ ವಿಚಾರದಿಂದ ರಾಜತಾಂತ್ರಿಕ ಬಿಟ್ಟಕ್ಕನ್ನು ಸೃಷ್ಟಿಯಾಗಲು ಬಿಡಬಾರದಿತ್ತು’ ಎಂದಿದ್ದಾರೆ.</p>.<p>ಆಡಳಿತಾರೂಢ ಪಕ್ಷದಲ್ಲಿರುವ ಕೆಲ ತೀವ್ರಗಾಮಿಗಳು ‘ಭಾರತ ಹೊರಹೋಗಲಿ’ ಎಂದು ಕರೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ನಡೆಸುವವರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಏಕೆಂದರೆ ಮಾಲ್ದೀವ್ಸ್ ಜನಜೀವನವು ಅವರದ್ದೇ ಜವಾಬ್ದಾರಿಯಾಗಿದೆ. ಈ ರೀತಿಯ ವಿಚಾರಗಳಲ್ಲಿ ಎಚ್ಚರಿಕೆ ಕಾಯ್ದುಕೊಳ್ಳಬೇಕು ಎಂದು ಅದೀಬ್ ಹೇಳಿದ್ದಾರೆ.</p>.<p>ಮೂವರು ಉಪ ಸಚಿವರ ಅಮಾನತಿನ ಕುರಿತು ಕೇಳಿದ ಪ್ರಶ್ನೆಗೆ, ‘ಅವರು ರಾಜೀನಾಮೆ ನೀಡಬೇಕಿತ್ತು. ಭಾನುವಾರ ಬೆಳಿಗ್ಗೆಯೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೆ:</strong> ‘ಉಪ ಸಚಿವರ ಹೇಳಿಕೆ ಕುರಿತು ಮಾಲ್ದೀವ್ಸ್ ಸರ್ಕಾರವು ಕ್ಷಮೆ ಕೇಳಬೇಕಿತ್ತು, ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕಿತ್ತು’ ಎಂದು ಮಾಲ್ದೀವ್ಸ್ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಹೇಳಿದ್ದಾರೆ.</p>.<p>ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ದೇಶದ ಉಪ ಸಚಿವರು ಭಾರತದ ಪ್ರಧಾನಿ ಕುರಿತು ಆಡಿರುವ ಮಾತುಗಳು ಸ್ವೀಕಾರ್ಹವಲ್ಲ’ ಎಂದಿದ್ದಾರೆ.</p>.<p>‘ಈ ರೀತಿಯ ಘಟನೆ ಎಂದಿಗೂ ಆಗಬಾರದಿತ್ತು. ಈ ಕುರಿತು ಮಾಲ್ದೀವ್ಸ್ ಸರ್ಕಾರವು ಇದಕ್ಕೂ ಮುಂಚೆಯೇ ಪ್ರತಿಕ್ರಿಯಿಸಬೇಕಿತ್ತು ಮತ್ತು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈ ವಿಚಾರದಿಂದ ರಾಜತಾಂತ್ರಿಕ ಬಿಟ್ಟಕ್ಕನ್ನು ಸೃಷ್ಟಿಯಾಗಲು ಬಿಡಬಾರದಿತ್ತು’ ಎಂದಿದ್ದಾರೆ.</p>.<p>ಆಡಳಿತಾರೂಢ ಪಕ್ಷದಲ್ಲಿರುವ ಕೆಲ ತೀವ್ರಗಾಮಿಗಳು ‘ಭಾರತ ಹೊರಹೋಗಲಿ’ ಎಂದು ಕರೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ನಡೆಸುವವರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಏಕೆಂದರೆ ಮಾಲ್ದೀವ್ಸ್ ಜನಜೀವನವು ಅವರದ್ದೇ ಜವಾಬ್ದಾರಿಯಾಗಿದೆ. ಈ ರೀತಿಯ ವಿಚಾರಗಳಲ್ಲಿ ಎಚ್ಚರಿಕೆ ಕಾಯ್ದುಕೊಳ್ಳಬೇಕು ಎಂದು ಅದೀಬ್ ಹೇಳಿದ್ದಾರೆ.</p>.<p>ಮೂವರು ಉಪ ಸಚಿವರ ಅಮಾನತಿನ ಕುರಿತು ಕೇಳಿದ ಪ್ರಶ್ನೆಗೆ, ‘ಅವರು ರಾಜೀನಾಮೆ ನೀಡಬೇಕಿತ್ತು. ಭಾನುವಾರ ಬೆಳಿಗ್ಗೆಯೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>