<p><strong>ನವದೆಹಲಿ:</strong> ಥಾಯ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ದೊರೆ ಮಹಾ ವಾಜಿರಲೊಂಗ್ಕೋರ್ನ್ ಅವರನ್ನು ಶುಕ್ರವಾರ ಭೇಟಿಯಾದರು. ಧ್ಯಾನಮುದ್ರದ ಸಾರನಾಥ ಬುದ್ಧನ ಮೂರ್ತಿಯನ್ನು ಹಾಗೂ ಥಾಯ್ ರಾಣಿಗೆ ರೇಷ್ಮೆ ಶಾಲನ್ನು ಉಡೊಗುರೆಯಾಗಿ ನೀಡಿದರು.</p><p>ಭಾರತೀಯ ಕಲಾಕೃತಿ ಶೈಲಿಯಲ್ಲಿರುವ ಸಾರನಾಥ ಮೂರ್ತಿಯು ಬೌದ್ಧ ಧಾರ್ಮಿಕದ ಪ್ರತೀಕದಂತಿದೆ. ಬಿಹಾರ ಮೂಲದ ಈ ಕಲಾಕೃತಿಯು ಗುಪ್ತಾ ಮತ್ತು ಪಾಲ ಕಲಾ ಸಂಪ್ರದಾಯದ ಮಿಶ್ರಣವಾಗಿದೆ. ಬುದ್ಧನ ಮೈಮೇಲಿನ ವಸ್ತ್ರ ಮತ್ತು ಕಮಲದ ದಳಗಳು ಮೂರ್ತಿಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿವೆ. ಪದ್ಮಾಸನದಲ್ಲಿ ಧ್ಯಾನಮುದ್ರನಾಗಿ ಕುಳಿತಿರುವ ಬುದ್ಧನ ಮೂರ್ತಿ ಜ್ಞಾನ ಮತ್ತು ಸಹಾನುಭೂತಿಯನ್ನು ಸಾರುವಂತಿದೆ.</p><p>ಉತ್ತರ ಪ್ರದೇಶದ ವಾರಾಣಸಿಯ ರೇಷ್ಮೆ ಶಾಲಿನಲ್ಲಿ ಭಾರತೀಯ ಶೈಲಿಯ ಸೂಕ್ಷ್ಮ ನೇಯ್ಗೆಯ ಕಲಾಕೃತಿಗಳಿವೆ. ನಿಸರ್ಗದ ಚಿತ್ರಣ, ಗ್ರಾಮೀಣ ಜೀವನದ ಚಿತ್ರಗಳನ್ನು ಬಿಂಬಿಸುವ ಪಿಚವಾಯಿ ಕಲಾಕೃತಿಯನ್ನು ಹೊಂದಿದೆ.</p><p>ಥಾಯ್ ಪ್ರಧಾನಿ ಪೆಟೊಂತಾರ್ನ್ ಶಿನೊವಾರ್ಥ್ ಅವರಿಗೆ ಡೋಕ್ರಾ ಕಲಾಕೃತಿಯ ಕಂಚಿನ ನವಿಲು ಮಾದರಿಯ ದೋಣಿಯ ಪ್ರತಿಕೃತಿಯನ್ನು ನೀಡಿದರು. ಅವರ ಪತಿಗೆ ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಕಫ್ಲಿಂಕ್ ಅನ್ನು ಉಡುಗೊರೆಯಾಗಿ ನೀಡಿದರು. ಛತ್ರೀಸಘಡದ ಡೋಕ್ರಾ ಕಲಾಕೃತಿ ಇದಾಗಿದೆ. </p><p>ಮಾಜಿ ಪ್ರಧಾನಿ ಥಾಕ್ಸಿನ್ ಶಿನೊವಾರ್ಥ್ ಅವರಿಗೆ ನವಿಲಿನ ಕಲಾಕೃತಿಯ ಕಂಚಿನ ಉರ್ಲಿ ಮತ್ತು ದೀಪವನ್ನು ಉಡುಗೊರೆಯಾಗಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಥಾಯ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ದೊರೆ ಮಹಾ ವಾಜಿರಲೊಂಗ್ಕೋರ್ನ್ ಅವರನ್ನು ಶುಕ್ರವಾರ ಭೇಟಿಯಾದರು. ಧ್ಯಾನಮುದ್ರದ ಸಾರನಾಥ ಬುದ್ಧನ ಮೂರ್ತಿಯನ್ನು ಹಾಗೂ ಥಾಯ್ ರಾಣಿಗೆ ರೇಷ್ಮೆ ಶಾಲನ್ನು ಉಡೊಗುರೆಯಾಗಿ ನೀಡಿದರು.</p><p>ಭಾರತೀಯ ಕಲಾಕೃತಿ ಶೈಲಿಯಲ್ಲಿರುವ ಸಾರನಾಥ ಮೂರ್ತಿಯು ಬೌದ್ಧ ಧಾರ್ಮಿಕದ ಪ್ರತೀಕದಂತಿದೆ. ಬಿಹಾರ ಮೂಲದ ಈ ಕಲಾಕೃತಿಯು ಗುಪ್ತಾ ಮತ್ತು ಪಾಲ ಕಲಾ ಸಂಪ್ರದಾಯದ ಮಿಶ್ರಣವಾಗಿದೆ. ಬುದ್ಧನ ಮೈಮೇಲಿನ ವಸ್ತ್ರ ಮತ್ತು ಕಮಲದ ದಳಗಳು ಮೂರ್ತಿಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿವೆ. ಪದ್ಮಾಸನದಲ್ಲಿ ಧ್ಯಾನಮುದ್ರನಾಗಿ ಕುಳಿತಿರುವ ಬುದ್ಧನ ಮೂರ್ತಿ ಜ್ಞಾನ ಮತ್ತು ಸಹಾನುಭೂತಿಯನ್ನು ಸಾರುವಂತಿದೆ.</p><p>ಉತ್ತರ ಪ್ರದೇಶದ ವಾರಾಣಸಿಯ ರೇಷ್ಮೆ ಶಾಲಿನಲ್ಲಿ ಭಾರತೀಯ ಶೈಲಿಯ ಸೂಕ್ಷ್ಮ ನೇಯ್ಗೆಯ ಕಲಾಕೃತಿಗಳಿವೆ. ನಿಸರ್ಗದ ಚಿತ್ರಣ, ಗ್ರಾಮೀಣ ಜೀವನದ ಚಿತ್ರಗಳನ್ನು ಬಿಂಬಿಸುವ ಪಿಚವಾಯಿ ಕಲಾಕೃತಿಯನ್ನು ಹೊಂದಿದೆ.</p><p>ಥಾಯ್ ಪ್ರಧಾನಿ ಪೆಟೊಂತಾರ್ನ್ ಶಿನೊವಾರ್ಥ್ ಅವರಿಗೆ ಡೋಕ್ರಾ ಕಲಾಕೃತಿಯ ಕಂಚಿನ ನವಿಲು ಮಾದರಿಯ ದೋಣಿಯ ಪ್ರತಿಕೃತಿಯನ್ನು ನೀಡಿದರು. ಅವರ ಪತಿಗೆ ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಕಫ್ಲಿಂಕ್ ಅನ್ನು ಉಡುಗೊರೆಯಾಗಿ ನೀಡಿದರು. ಛತ್ರೀಸಘಡದ ಡೋಕ್ರಾ ಕಲಾಕೃತಿ ಇದಾಗಿದೆ. </p><p>ಮಾಜಿ ಪ್ರಧಾನಿ ಥಾಕ್ಸಿನ್ ಶಿನೊವಾರ್ಥ್ ಅವರಿಗೆ ನವಿಲಿನ ಕಲಾಕೃತಿಯ ಕಂಚಿನ ಉರ್ಲಿ ಮತ್ತು ದೀಪವನ್ನು ಉಡುಗೊರೆಯಾಗಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>