<p><strong>ಲಾಹೋರ್:</strong> ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಲಾಹೋರ್ನ ಕೋಟೆಯಲ್ಲಿರುವ ಲವ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.</p>.<p>ಲವ ದೇಗುಲದ ಜೊತೆಗೆ ಸ್ಮಾರಕಗಳಾದ ಸಿಖ್ಖರ ಹಮ್ಮಾಮ್ ಹಾಗೂ ಮಹಾರಾಜ ರಂಜಿತ್ ಸಿಂಗ್ ಅವರಿಂದ ನಿರ್ಮಾಣವಾಗಿದ್ದ ಅಷ್ಟದ್ವಾರ ಮಂಟಪವನ್ನು ಆಗಾ ಖಾನ್ ಸಾಂಸ್ಕೃತಿಕ ಸೇವಾ ಕೇಂದ್ರದ ಸಹಯೋಗದಲ್ಲಿ ಪುನರುಜ್ಜೀವನಗೊಳಿಸಲಾಗಿದೆ ಎಂದು ವಾಲ್ಡ್ ಸಿಟಿ ಲಾಹೋರ್ ಪ್ರಾಧಿಕಾರ (ಡಬ್ಲ್ಯುಸಿಎಲ್ಎ) ಮಂಗಳವಾರ ತಿಳಿಸಿದೆ.</p>.<p>ಲಾಹೋರ್ ಕೋಟೆಯ ಒಳಗಿರುವ ಲವ ದೇವಾಲಯವು ಇದೀಗ ಐತಿಹಾಸಿಕ ಸ್ಮಾರಕ. ಭಗವಾನ್ ರಾಮನ ಪುತ್ರರಲ್ಲಿ ಒಬ್ಬರಾದ ಲವನಿಗೆ ಸಮರ್ಪಿತವಾಗಿರುವ ದೇಗುಲ. ಲವನ ದೇಗುಲ ಇಲ್ಲಿರುವುದರಿಂದಲೇ ಲಾಹೋರ್ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಹಿಂದೂಗಳದ್ದು. 2018ರಲ್ಲಿ ಭಾಗಶಃ ಪುನರುಜ್ಜೀವನಗೊಂಡಿತ್ತು.</p>.<p>ಪುನರ್ನಿರ್ಮಾಣ ಕಾರ್ಯದಲ್ಲಿ ತಂತ್ರಜ್ಞಾನ ಬಳಸಲಾಗಿದೆ. ಇದು ಲಾಹೋರ್ ಕೋಟೆಯ ಸಾಂಸ್ಕೃತಿಕ ಸಿರಿಯನ್ನು ಹೆಚ್ಚಿಸಿದೆ ಎಂದು ಡಬ್ಲ್ಯುಸಿಎಲ್ಎ ವಕ್ತಾರರಾದ ತಾನಿಯಾ ಖುರೇಷಿ ತಿಳಿಸಿದ್ದಾರೆ.</p>.<p>ಸಿಖ್ ಆಡಳಿತದಲ್ಲಿ (1799–1849) ನಿರ್ಮಾಣಗೊಂಡಿದ್ದ ನೂರಕ್ಕೂ ಹೆಚ್ಚು ಸ್ಮಾರಕಗಳನ್ನು ಲಾಹೋರ್ ಕೋಟೆಯಲ್ಲಿ ಸಿಖ್ ಸಂಶೋಧಕರು ಕಳೆದ ವರ್ಷ ಪತ್ತೆ ಹಚ್ಚಿದ್ದರು. ಅವುಗಳ ಐತಿಹಾಸಿಕ ಮಹತ್ವವನ್ನು ವಿವರಿಸಿದ್ದರು. ಅವುಗಳಲ್ಲಿ ಅಂದಾಜು 30 ಸ್ಮಾರಕಗಳು ಇಂದು ಅಸ್ತಿತ್ವದಲ್ಲೇ ಇಲ್ಲ ಎಂಬುದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್:</strong> ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಲಾಹೋರ್ನ ಕೋಟೆಯಲ್ಲಿರುವ ಲವ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.</p>.<p>ಲವ ದೇಗುಲದ ಜೊತೆಗೆ ಸ್ಮಾರಕಗಳಾದ ಸಿಖ್ಖರ ಹಮ್ಮಾಮ್ ಹಾಗೂ ಮಹಾರಾಜ ರಂಜಿತ್ ಸಿಂಗ್ ಅವರಿಂದ ನಿರ್ಮಾಣವಾಗಿದ್ದ ಅಷ್ಟದ್ವಾರ ಮಂಟಪವನ್ನು ಆಗಾ ಖಾನ್ ಸಾಂಸ್ಕೃತಿಕ ಸೇವಾ ಕೇಂದ್ರದ ಸಹಯೋಗದಲ್ಲಿ ಪುನರುಜ್ಜೀವನಗೊಳಿಸಲಾಗಿದೆ ಎಂದು ವಾಲ್ಡ್ ಸಿಟಿ ಲಾಹೋರ್ ಪ್ರಾಧಿಕಾರ (ಡಬ್ಲ್ಯುಸಿಎಲ್ಎ) ಮಂಗಳವಾರ ತಿಳಿಸಿದೆ.</p>.<p>ಲಾಹೋರ್ ಕೋಟೆಯ ಒಳಗಿರುವ ಲವ ದೇವಾಲಯವು ಇದೀಗ ಐತಿಹಾಸಿಕ ಸ್ಮಾರಕ. ಭಗವಾನ್ ರಾಮನ ಪುತ್ರರಲ್ಲಿ ಒಬ್ಬರಾದ ಲವನಿಗೆ ಸಮರ್ಪಿತವಾಗಿರುವ ದೇಗುಲ. ಲವನ ದೇಗುಲ ಇಲ್ಲಿರುವುದರಿಂದಲೇ ಲಾಹೋರ್ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಹಿಂದೂಗಳದ್ದು. 2018ರಲ್ಲಿ ಭಾಗಶಃ ಪುನರುಜ್ಜೀವನಗೊಂಡಿತ್ತು.</p>.<p>ಪುನರ್ನಿರ್ಮಾಣ ಕಾರ್ಯದಲ್ಲಿ ತಂತ್ರಜ್ಞಾನ ಬಳಸಲಾಗಿದೆ. ಇದು ಲಾಹೋರ್ ಕೋಟೆಯ ಸಾಂಸ್ಕೃತಿಕ ಸಿರಿಯನ್ನು ಹೆಚ್ಚಿಸಿದೆ ಎಂದು ಡಬ್ಲ್ಯುಸಿಎಲ್ಎ ವಕ್ತಾರರಾದ ತಾನಿಯಾ ಖುರೇಷಿ ತಿಳಿಸಿದ್ದಾರೆ.</p>.<p>ಸಿಖ್ ಆಡಳಿತದಲ್ಲಿ (1799–1849) ನಿರ್ಮಾಣಗೊಂಡಿದ್ದ ನೂರಕ್ಕೂ ಹೆಚ್ಚು ಸ್ಮಾರಕಗಳನ್ನು ಲಾಹೋರ್ ಕೋಟೆಯಲ್ಲಿ ಸಿಖ್ ಸಂಶೋಧಕರು ಕಳೆದ ವರ್ಷ ಪತ್ತೆ ಹಚ್ಚಿದ್ದರು. ಅವುಗಳ ಐತಿಹಾಸಿಕ ಮಹತ್ವವನ್ನು ವಿವರಿಸಿದ್ದರು. ಅವುಗಳಲ್ಲಿ ಅಂದಾಜು 30 ಸ್ಮಾರಕಗಳು ಇಂದು ಅಸ್ತಿತ್ವದಲ್ಲೇ ಇಲ್ಲ ಎಂಬುದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>