<p><strong>ಇಸ್ಲಾಮಾಬಾದ್</strong>: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿ ಪಾಕಿಸ್ತಾನದ ವಿಪಕ್ಷಗಳ ಮೈತ್ರಿಕೂಟವು ಹಮ್ಮಿಕೊಂಡಿದ್ದ ಧರಣಿ ಹೋರಾಟವನ್ನು ಬುಧವಾರ ಕೊನೆಗೊಳಿಸಿತು. </p>.<p>ಇಮ್ರಾನ್ ಆರೋಗ್ಯ ಸಮಸ್ಯೆಯನ್ನು ಎತ್ತಿ ಹಿಡಿಯುವ ತಮ್ಮ ಉದ್ದೇಶ ಈಡೇರಿದೆ. ಹೀಗಾಗಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಪಕ್ಷಗಳ ನಾಯಕರು ತಿಳಿಸಿದರು. </p>.<p>ಇಮ್ರಾನ್ ಖಾನ್ ಅವರ ತಹ್ರೀಕ್–ಎ– ಇನ್ಸಾಫ್ (ಪಿಟಿಐ) ಹಾಗೂ ಟಿಟಿಎಪಿ ಮೈತ್ರಿ ಪಕ್ಷಗಳು, ಇಸ್ಲಾಮಾಬಾದ್, ಸಂಸತ್ ಆವರಣ ಹಾಗೂ ಖೈಬರ್ ಪಖ್ತುಂಕ್ವಾದಲ್ಲಿ ಶುಕ್ರವಾರ ಧರಣಿ ಆರಂಭಿಸಿದವು. </p>.<p>ಇಮ್ರಾನ್ ಅವರ ಬಲಗಣ್ಣಿನ ಗೋಚರತೆಯು ಸ್ವಲ್ಪ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕ ಅಲ್ಲಮಾ ರಾಜಾ ನಾಸಿರ್ ಅಬ್ಬಾಸ್ ಅವರು ಹೇಳಿದರು.</p>.<p>ಇಮ್ರಾನ್ ಅವರು ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅವರ ಕುಟುಂಬದವರು ಹಾಗೂ ವಕೀಲರು ಈ ಹಿಂದೆ ತಿಳಿಸಿದ್ದರು. </p>.<p>ಇಮ್ರಾನ್ ಅವರ ವೈದ್ಯರು ಅವರನ್ನು ಭೇಟಿಯಾಗಲು ಅನುಮತಿ ನೀಡಬೇಕು. ಇಸ್ಲಾಮಾಬಾದ್ನಲ್ಲಿರುವ ಖಾಸಗಿ ಶಿಫಾ ಅಂತರರಾಷ್ಟ್ರೀಯ ಆಸ್ಪತ್ರೆಯಲ್ಲಿ ಇಮ್ರಾನ್ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಅಬ್ಬಾಸ್ ಆಗ್ರಹಿಸಿದರು. </p>.<p>ಗುರುವಾರ ರಂಜಾನ್ ಆಚರಣೆ ಆರಂಭವಾಗಲಿರುವುದನ್ನು ಗಮನದಲ್ಲಿಟ್ಟುಕೊಂಡು ಧರಣಿಯನ್ನು ನಿಲ್ಲಿಸಲಾಯಿತು ಎಂದೂ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್</strong>: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿ ಪಾಕಿಸ್ತಾನದ ವಿಪಕ್ಷಗಳ ಮೈತ್ರಿಕೂಟವು ಹಮ್ಮಿಕೊಂಡಿದ್ದ ಧರಣಿ ಹೋರಾಟವನ್ನು ಬುಧವಾರ ಕೊನೆಗೊಳಿಸಿತು. </p>.<p>ಇಮ್ರಾನ್ ಆರೋಗ್ಯ ಸಮಸ್ಯೆಯನ್ನು ಎತ್ತಿ ಹಿಡಿಯುವ ತಮ್ಮ ಉದ್ದೇಶ ಈಡೇರಿದೆ. ಹೀಗಾಗಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಪಕ್ಷಗಳ ನಾಯಕರು ತಿಳಿಸಿದರು. </p>.<p>ಇಮ್ರಾನ್ ಖಾನ್ ಅವರ ತಹ್ರೀಕ್–ಎ– ಇನ್ಸಾಫ್ (ಪಿಟಿಐ) ಹಾಗೂ ಟಿಟಿಎಪಿ ಮೈತ್ರಿ ಪಕ್ಷಗಳು, ಇಸ್ಲಾಮಾಬಾದ್, ಸಂಸತ್ ಆವರಣ ಹಾಗೂ ಖೈಬರ್ ಪಖ್ತುಂಕ್ವಾದಲ್ಲಿ ಶುಕ್ರವಾರ ಧರಣಿ ಆರಂಭಿಸಿದವು. </p>.<p>ಇಮ್ರಾನ್ ಅವರ ಬಲಗಣ್ಣಿನ ಗೋಚರತೆಯು ಸ್ವಲ್ಪ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕ ಅಲ್ಲಮಾ ರಾಜಾ ನಾಸಿರ್ ಅಬ್ಬಾಸ್ ಅವರು ಹೇಳಿದರು.</p>.<p>ಇಮ್ರಾನ್ ಅವರು ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅವರ ಕುಟುಂಬದವರು ಹಾಗೂ ವಕೀಲರು ಈ ಹಿಂದೆ ತಿಳಿಸಿದ್ದರು. </p>.<p>ಇಮ್ರಾನ್ ಅವರ ವೈದ್ಯರು ಅವರನ್ನು ಭೇಟಿಯಾಗಲು ಅನುಮತಿ ನೀಡಬೇಕು. ಇಸ್ಲಾಮಾಬಾದ್ನಲ್ಲಿರುವ ಖಾಸಗಿ ಶಿಫಾ ಅಂತರರಾಷ್ಟ್ರೀಯ ಆಸ್ಪತ್ರೆಯಲ್ಲಿ ಇಮ್ರಾನ್ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಅಬ್ಬಾಸ್ ಆಗ್ರಹಿಸಿದರು. </p>.<p>ಗುರುವಾರ ರಂಜಾನ್ ಆಚರಣೆ ಆರಂಭವಾಗಲಿರುವುದನ್ನು ಗಮನದಲ್ಲಿಟ್ಟುಕೊಂಡು ಧರಣಿಯನ್ನು ನಿಲ್ಲಿಸಲಾಯಿತು ಎಂದೂ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>