’ಬೆಳಿಗ್ಗೆ 5ಕ್ಕೆ ಸರತಿ ಸಾಲಿನಲ್ಲಿ ನಿಂತರೆ ಮಧ್ಯಾಹ್ನ 3ರ ಹೊತ್ತಿಗೆ ಇಂಧನ ಸಿಗುತ್ತದೆ.ಕೆಲವೊಮ್ಮೆ ನಮ್ಮ ಸರದಿ ಬರುವ ವೇಳೆಗೆ ಇಂಧನವೇ ಮುಗಿದು ಹೋಗುತ್ತದೆ. ಸಂಪಾದನೆ ಇಲ್ಲದೆ ಬರಿಗೈಯಲ್ಲಿ ಮನೆಗೆ ಹಿಂದಿರುಗಿದರೆ, ನಮಗೇಕೆ ಊಟ ಕೊಡುತ್ತಿಲ್ಲ ಎಂದು ಮಕ್ಕಳು ಕೇಳುತ್ತಾರೆ. ನಮ್ಮ ಸಮಸ್ಯೆಗಳು ಅವರಿಗೆ ತಿಳಿಯುವುದಿಲ್ಲ’ ಎಂದು ಮೀನುಗಾರ ಅರುಳಾನಂದನ್ ವ್ಯಥೆ ಹೇಳಿಕೊಂಡರು.