<p><strong>ಬಂಡ ಆಚೆ (ಇಂಡೋನೇಷ್ಯಾ):</strong> 2.30 ಲಕ್ಷ ಮಂದಿಯ ಸಾವಿಗೆ ಕಾರಣವಾಗಿದ್ದ ಇಂಡೋನೇಷ್ಯಾದ ಭೀಕರ ಸುನಾಮಿಗೆ ಗುರುವಾರ 20 ವರ್ಷ ತುಂಬಿದ್ದು, ಆಚೆ ಪ್ರಾಂತ್ಯದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಸೇರಿದ ನೂರಾರು ಮಂದಿ ಶೋಕಾಚರಣೆ ನಡೆಸಿದರು. ತಮ್ಮವರ ನೆನೆದು ಕಣ್ಣೀರು ಸುರಿಸಿದರು.</p>.ಇಂಡೋನೇಷ್ಯಾ | ಹಡಗಿನಲ್ಲಿ ಬೆಂಕಿ: ಐವರು ಸಜೀವ ದಹನ.<p>ಸುನಾಮಿಯಲ್ಲಿ ಮೃತಪಟ್ಟ 14 ಸಾವಿರಕ್ಕೂ ಅಧಿಕ ಗುರುತು ಹಿಡಿಯಲಾಗದ ಜನರನ್ನು ಹೂಳಲಾದ ಲೀ ಲೇಹೆ ಗ್ರಾಮದ ಸ್ಮಶಾನದಲ್ಲಿಯೂ ಜನ ತಮ್ಮನವರ ನೆನಪಿನಲ್ಲಿ ಕಣ್ಣೀರಾದರು. ಬಂಡ ಆಚೆಯಲ್ಲಿರುವ ಹಲವಾರು ಸ್ಮಶಾನಗಳಲ್ಲಿ ಶೋಕಾಚರಣೆ ನಡೆಯಿತು. ಸುನಾಮಿಯಲ್ಲಿ ಈ ಪ್ರಾಂತ್ಯ ಹೆಚ್ಚು ಹಾನಿಗೀಡಾಗಿತ್ತು.</p><p>2004ರ ಡಿ.26ರಂದು ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಸಂಭವಿಸಿದ 9.1 ತೀವ್ರತೆಯ ಭೂಕಂಪನ ಸೃಷ್ಠಿಸಿದ್ದ ಸುನಾಮಿಯು 12ಕ್ಕೂ ಅಧಿಕ ದೇಶಗಳಲ್ಲಿ 2.30 ಲಕ್ಷ ಮಂದಿಯ ಪ್ರಾಣವನ್ನು ಆಹುತಿ ಪಡೆದುಕೊಂಡಿತ್ತು. ಪಶ್ಚಿಮ ಆಫ್ರಿಕಾವರೆಗೂ ಈ ಸುನಾಮಿಯ ವ್ಯಾಪ್ತಿ ಆವರಿಸಿತ್ತು. ಆಕಾಶಚುಂಬಿ ಕಟ್ಟಡಗಳು ನೆಲಸಮವಾಗಿದ್ದವು.</p>.ಜ್ವಾಲಾಮುಖಿ ಸ್ಫೋಟ: 10,000 ಜನರ ಶಾಶ್ವತ ಸ್ಥಳಾಂತರಕ್ಕೆ ಇಂಡೋನೇಷ್ಯಾ ಕ್ರಮ.<p>ಅಂದು ಮುನಿಸಿಕೊಂಡಿದ್ದ ಹಿಂದೂ ಮಹಾಸಾಗರ ಇಂಡೋನೇಷ್ಯಾವನ್ನು ಸ್ಮಶಾನಭೂಮಿಯನ್ನಾಗಿ ಪರಿವರ್ತನೆ ಮಾಡಿತ್ತು. ಈ ಘಟನೆ ಆಧುನಿಕ ಜಗತ್ತಿನ ಅತಿ ಭೀಕರ ಪ್ರಾಕೃತಿಕ ವಿಕೋಪ ಎಂದು ಗುರುತಿಸಲ್ಪಟ್ಟಿದೆ.</p><p>ಸುನಾಮಿಯಿಂದ 17 ಲಕ್ಷ ಮಂದಿ ನಿರಾಶ್ರಿತರಾದರು. ಇಂಡೋನೇಷ್ಯಾ, ಶ್ರೀಲಂಕಾ, ಭಾರತ ಹಾಗೂ ಥಾಯ್ಲೆಂಡ್ ಸುನಾಮಿಯ ಹೊಡೆತಕ್ಕೆ ನಲುಗಿದ್ದವು. ಇಂಡೋನೇಷ್ಯಾ ಒಂದರಲ್ಲೆ 1.7 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.</p><p>ಘಟನೆ ನಡೆದು 20 ವರ್ಷ ಕಳೆದರೂ ತಮ್ಮವವನ್ನು ಕಳೆದುಕೊಂಡವರ ದುಃಖ ಜನರಲ್ಲಿ ಹಾಗೇ ಇದೆ. ಗುರುವಾರ ಸ್ಮಶಾನಗಳಲ್ಲಿ ನಡೆದ ಶೋಕಾಚರಣೆ ಅದರ ಪ್ರತಿಬಿಂಬದಂತೆ ಕಂಡವು.</p>.ಇಂಡೋನೇಷ್ಯಾ: ಸುನಾಮಿ, ಭೂಕಂಪಕ್ಕೆ ಕನಿಷ್ಠ 384 ಮಂದಿ ಬಲಿ; 540 ಜನರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಡ ಆಚೆ (ಇಂಡೋನೇಷ್ಯಾ):</strong> 2.30 ಲಕ್ಷ ಮಂದಿಯ ಸಾವಿಗೆ ಕಾರಣವಾಗಿದ್ದ ಇಂಡೋನೇಷ್ಯಾದ ಭೀಕರ ಸುನಾಮಿಗೆ ಗುರುವಾರ 20 ವರ್ಷ ತುಂಬಿದ್ದು, ಆಚೆ ಪ್ರಾಂತ್ಯದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಸೇರಿದ ನೂರಾರು ಮಂದಿ ಶೋಕಾಚರಣೆ ನಡೆಸಿದರು. ತಮ್ಮವರ ನೆನೆದು ಕಣ್ಣೀರು ಸುರಿಸಿದರು.</p>.ಇಂಡೋನೇಷ್ಯಾ | ಹಡಗಿನಲ್ಲಿ ಬೆಂಕಿ: ಐವರು ಸಜೀವ ದಹನ.<p>ಸುನಾಮಿಯಲ್ಲಿ ಮೃತಪಟ್ಟ 14 ಸಾವಿರಕ್ಕೂ ಅಧಿಕ ಗುರುತು ಹಿಡಿಯಲಾಗದ ಜನರನ್ನು ಹೂಳಲಾದ ಲೀ ಲೇಹೆ ಗ್ರಾಮದ ಸ್ಮಶಾನದಲ್ಲಿಯೂ ಜನ ತಮ್ಮನವರ ನೆನಪಿನಲ್ಲಿ ಕಣ್ಣೀರಾದರು. ಬಂಡ ಆಚೆಯಲ್ಲಿರುವ ಹಲವಾರು ಸ್ಮಶಾನಗಳಲ್ಲಿ ಶೋಕಾಚರಣೆ ನಡೆಯಿತು. ಸುನಾಮಿಯಲ್ಲಿ ಈ ಪ್ರಾಂತ್ಯ ಹೆಚ್ಚು ಹಾನಿಗೀಡಾಗಿತ್ತು.</p><p>2004ರ ಡಿ.26ರಂದು ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಸಂಭವಿಸಿದ 9.1 ತೀವ್ರತೆಯ ಭೂಕಂಪನ ಸೃಷ್ಠಿಸಿದ್ದ ಸುನಾಮಿಯು 12ಕ್ಕೂ ಅಧಿಕ ದೇಶಗಳಲ್ಲಿ 2.30 ಲಕ್ಷ ಮಂದಿಯ ಪ್ರಾಣವನ್ನು ಆಹುತಿ ಪಡೆದುಕೊಂಡಿತ್ತು. ಪಶ್ಚಿಮ ಆಫ್ರಿಕಾವರೆಗೂ ಈ ಸುನಾಮಿಯ ವ್ಯಾಪ್ತಿ ಆವರಿಸಿತ್ತು. ಆಕಾಶಚುಂಬಿ ಕಟ್ಟಡಗಳು ನೆಲಸಮವಾಗಿದ್ದವು.</p>.ಜ್ವಾಲಾಮುಖಿ ಸ್ಫೋಟ: 10,000 ಜನರ ಶಾಶ್ವತ ಸ್ಥಳಾಂತರಕ್ಕೆ ಇಂಡೋನೇಷ್ಯಾ ಕ್ರಮ.<p>ಅಂದು ಮುನಿಸಿಕೊಂಡಿದ್ದ ಹಿಂದೂ ಮಹಾಸಾಗರ ಇಂಡೋನೇಷ್ಯಾವನ್ನು ಸ್ಮಶಾನಭೂಮಿಯನ್ನಾಗಿ ಪರಿವರ್ತನೆ ಮಾಡಿತ್ತು. ಈ ಘಟನೆ ಆಧುನಿಕ ಜಗತ್ತಿನ ಅತಿ ಭೀಕರ ಪ್ರಾಕೃತಿಕ ವಿಕೋಪ ಎಂದು ಗುರುತಿಸಲ್ಪಟ್ಟಿದೆ.</p><p>ಸುನಾಮಿಯಿಂದ 17 ಲಕ್ಷ ಮಂದಿ ನಿರಾಶ್ರಿತರಾದರು. ಇಂಡೋನೇಷ್ಯಾ, ಶ್ರೀಲಂಕಾ, ಭಾರತ ಹಾಗೂ ಥಾಯ್ಲೆಂಡ್ ಸುನಾಮಿಯ ಹೊಡೆತಕ್ಕೆ ನಲುಗಿದ್ದವು. ಇಂಡೋನೇಷ್ಯಾ ಒಂದರಲ್ಲೆ 1.7 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.</p><p>ಘಟನೆ ನಡೆದು 20 ವರ್ಷ ಕಳೆದರೂ ತಮ್ಮವವನ್ನು ಕಳೆದುಕೊಂಡವರ ದುಃಖ ಜನರಲ್ಲಿ ಹಾಗೇ ಇದೆ. ಗುರುವಾರ ಸ್ಮಶಾನಗಳಲ್ಲಿ ನಡೆದ ಶೋಕಾಚರಣೆ ಅದರ ಪ್ರತಿಬಿಂಬದಂತೆ ಕಂಡವು.</p>.ಇಂಡೋನೇಷ್ಯಾ: ಸುನಾಮಿ, ಭೂಕಂಪಕ್ಕೆ ಕನಿಷ್ಠ 384 ಮಂದಿ ಬಲಿ; 540 ಜನರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>