ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹಾಗೂ ಇತರೆ ಆರು ಹಿಂದೂ ನಾಯಕರು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ‘ಹಿಂದೂ ಪುನರುಜ್ಜೀವನಕ್ಕಾಗಿ ಸಾಮೂಹಿಕ ಹೊಣೆಗಾರಿಕೆ’ ಕುರಿತು ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎದುರು ಸಾಲಿನಲ್ಲಿ ಕುಳಿತಿದ್ದ ಕೆಲವು ಪ್ರತಿಭಟನಾಕಾರರು ಎದ್ದು ನಿಂತು, ‘ಹಿಂದೂ ಸರ್ವಾಧಿಕಾರತ್ವವನ್ನು ನಿಲ್ಲಿಸಿ’, ‘ಆರ್ಎಸ್ಎಸ್ನವರೇ ಹಿಂದಿರುಗಿ ಹೋಗಿ, ನೀವು ನಗರದಲ್ಲಿರುವುದು ನಮಗಿಷ್ಟವಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು. ಕೆಲವರು ಇದಕ್ಕೆ ಪರ್ಯಾಯವಾಗಿ ವಿರುದ್ಧ ಘೋಷಣೆಗಳನ್ನು ಕೂಗಿದರು.