<p><strong>ಮಾಸ್ಕೊ</strong>: ರಷ್ಯಾದ ಪ್ರವಾಹಬಾಧಿತ ಓರಿಯನ್ಬರ್ಗ್ ವಲಯದಲ್ಲಿ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸಿದೆ. ಉರಲ್ ನದಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚುತ್ತಿದೆ. ಪ್ರವಾಹದಿಂದಾಗಿ 885 ಮಕ್ಕಳು ಸೇರಿದಂತೆ ಸುಮಾರು 4000 ಜನರು ಅತಂತ್ರರಾಗಿದ್ದು, ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ. </p>.<p>ಸ್ಥಳೀಯ ಮಾಧ್ಯಮ ಸಂಸ್ಥೆ ‘ಟಾಸ್’ ಪ್ರಕಾರ, ಈ ವಲಯದಲ್ಲಿ ಪ್ರವಾಹದಿಂದಾಗಿ ಸುಮಾರು 6,300 ಮನೆಗಳು ಜಲಾವೃತವಾಗಿವೆ. ಸಚಿವ ಅಲೆಕ್ಸಾಂಡರ್ ಕುರೆನ್ಕೊವ್ ಅವರು ಖುದ್ದು ಪರಿಹಾರದ ಉಸ್ತುವಾರಿ ವಹಿಸಿದ್ದಾರೆ.</p>.<p>ಕಜಕಿಸ್ತಾನದಿಂದ 20 ಕಿ.ಮೀ. ದೂರದಲ್ಲಿರುವ ಗಡಿ ಭಾಗದಲ್ಲಿ ಪ್ರವಾಹದ ಪರಿಣಾಮ ತೀವ್ರವಾಗಿದೆ. ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿದೆ. ಬಾಧಿತ ಸ್ಥಳಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಒತ್ತು ನೀಡಲಾಗಿದೆ.</p>.<p>ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಲು ನಿರ್ಮಾಣದಲ್ಲಿನ ಲೋಪ ಕಾರಣವೇ ಎಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಅಣೆಕಟ್ಟೆ ಸಾಮರ್ಥ್ಯ 18 ಅಡಿ. ಶನಿವಾರ ಬೆಳಿಗ್ಗೆ 30 ಅಡಿವರೆಗೂ ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಓಸ್ಕ್ ನಗರದ ಅಧಿಕಾರಿಗಳು, ಭಾನುವಾರ ನಾಲ್ವರು ಮೃತಪಟ್ಟಿದ್ದಾರೆ. ಆದರೆ, ಸಾವಿಗೂ ಪ್ರವಾಹಕ್ಕೂ ಸಂಬಂಧವಿಲ್ಲ. ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. 1300ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ ಎಂದು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಸ್ಕೊ</strong>: ರಷ್ಯಾದ ಪ್ರವಾಹಬಾಧಿತ ಓರಿಯನ್ಬರ್ಗ್ ವಲಯದಲ್ಲಿ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸಿದೆ. ಉರಲ್ ನದಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚುತ್ತಿದೆ. ಪ್ರವಾಹದಿಂದಾಗಿ 885 ಮಕ್ಕಳು ಸೇರಿದಂತೆ ಸುಮಾರು 4000 ಜನರು ಅತಂತ್ರರಾಗಿದ್ದು, ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ. </p>.<p>ಸ್ಥಳೀಯ ಮಾಧ್ಯಮ ಸಂಸ್ಥೆ ‘ಟಾಸ್’ ಪ್ರಕಾರ, ಈ ವಲಯದಲ್ಲಿ ಪ್ರವಾಹದಿಂದಾಗಿ ಸುಮಾರು 6,300 ಮನೆಗಳು ಜಲಾವೃತವಾಗಿವೆ. ಸಚಿವ ಅಲೆಕ್ಸಾಂಡರ್ ಕುರೆನ್ಕೊವ್ ಅವರು ಖುದ್ದು ಪರಿಹಾರದ ಉಸ್ತುವಾರಿ ವಹಿಸಿದ್ದಾರೆ.</p>.<p>ಕಜಕಿಸ್ತಾನದಿಂದ 20 ಕಿ.ಮೀ. ದೂರದಲ್ಲಿರುವ ಗಡಿ ಭಾಗದಲ್ಲಿ ಪ್ರವಾಹದ ಪರಿಣಾಮ ತೀವ್ರವಾಗಿದೆ. ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿದೆ. ಬಾಧಿತ ಸ್ಥಳಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಒತ್ತು ನೀಡಲಾಗಿದೆ.</p>.<p>ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಲು ನಿರ್ಮಾಣದಲ್ಲಿನ ಲೋಪ ಕಾರಣವೇ ಎಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಅಣೆಕಟ್ಟೆ ಸಾಮರ್ಥ್ಯ 18 ಅಡಿ. ಶನಿವಾರ ಬೆಳಿಗ್ಗೆ 30 ಅಡಿವರೆಗೂ ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಓಸ್ಕ್ ನಗರದ ಅಧಿಕಾರಿಗಳು, ಭಾನುವಾರ ನಾಲ್ವರು ಮೃತಪಟ್ಟಿದ್ದಾರೆ. ಆದರೆ, ಸಾವಿಗೂ ಪ್ರವಾಹಕ್ಕೂ ಸಂಬಂಧವಿಲ್ಲ. ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. 1300ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ ಎಂದು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>