ದ್ವೀಪ ರಾಷ್ಟ್ರ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಅಧ್ಯಕ್ಷ ಗೋಟಬಯಾ ರಾಜಪಕ್ಸ ಅವರು ಈ ಹಿಂದಿನ ಹಣಕಾಸು ಸಚಿವ, ತಮ್ಮನೂ ಆದ ಬೇಸಿಲ್ ರಾಜಪಕ್ಸ ಅವರನ್ನು ಸೋಮವಾರ ವಜಾಗೊಳಿಸಿದ್ದರು. ಬೇಸಿಲ್ ಅವರಿಂದ ತೆರವಾಗಿದ್ದ ಹಣಕಾಸು ಮಂತ್ರಿ ಸ್ಥಾನವನ್ನು ವಹಿಸಿಕೊಂಡಿದ್ದ ಅಲಿ ಸಬ್ರಿ ಅವರೂ ಈಗ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.