ಬರಲಿರುವ ಈದ್–ಅಲ್–ಆಧಾ ನಿಮಿತ್ತ ಮಾಡಿದ ತಮ್ಮ ಭಾಷಣದಲ್ಲಿ ಅಖುಂದ್ಝಾದ ಅವರು ‘ಇತರ ದೇಶಗಳ ಭದ್ರತೆಗೆ ಆತಂಕವೊಡ್ಡಲು ನಮ್ಮ ನೆಲವನ್ನು ಯಾವುದೇ ರಾಷ್ಟ್ರಬಳಸಿಕೊಳ್ಳುವುದಕ್ಕೆ ಆಸ್ಪದ ನೀಡುವುದಿಲ್ಲವೆಂದು ನಮ್ಮ ನೆರೆಯ ದೇಶಗಳಿಗೆ ಭರವಸೆ ಕೊಡುತ್ತೇವೆ. ಹಾಗೆಯೇ ನಾವು ಕೂಡ, ನಮ್ಮ ಆಂತರಿಕ ವ್ಯವಹಾರಗಳಲ್ಲಿ ಇತರ ದೇಶಗಳು ಹಸ್ತಕ್ಷೇಪ ಮಾಡಬಾರದೆಂದು ಬಯಸುತ್ತೇವೆ’ ಎಂದು ಹೇಳಿದರು.