<p><strong>ಮನಿಲಾ:</strong> ಪ್ರತಿಕೂಲ ಹವಾಮಾನದ ಕಾರಣದಿಂದ ಮನಿಲಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದ್ದ ತೈಲ ಟ್ಯಾಂಕರ್ನಲ್ಲಿ ಸೋರಿಕೆ ಉಂಟಾಗಿದೆ ಎಂದು ಫಿಲಿಪೀನ್ಸ್ ಕರಾವಳಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಫಿಲಿಪೀನ್ಸ್ ಧ್ವಜ ಹೊತ್ತ ಬತಾನ್ ಪ್ರಾಂತ್ಯದ ಕರಾವಳಿ ಬಳಿ ಈ ಹಡಗು ಮುಳುಗಡೆಯಾಗಿದೆ. ಇದು 65 ಮೀಟರ್ ವಿಸ್ತೀರ್ಣದ ಟೆರ್ರಾ ನೋವ ಹಡಗಾಗಿದ್ದು, 14 ಲಕ್ಷ ಲೀಟರ್ ಕೈಗಾರಿಕೆ ಬಳಕೆಯ ತೈಲವನ್ನು ಹೊತ್ತುಸಾಗುತ್ತಿತ್ತು. ಹಡಗಿನಲ್ಲಿದ್ದ 16 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಒಬ್ಬ ಮುಳುಗಿದ್ದಾನೆ ಎಂದು ಸಿಬ್ಬಂದಿ ತಿಳಿಸಿದರು.</p>.<p>ಮುಳುಗಿರುವ ಹಡಗಿನಿಂದ ವಿಷಪೂರಿತ ತೈಲವನ್ನು ಸುರಕ್ಷಿತವಾಗಿ ಹೊರತೆಗೆದು ಉಂಟಾಗಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಡಳಿತಗಳು ಯೋಜನೆ ರೂಪಿಸುತ್ತಿವೆ. </p>.<p>ಮುಳುಗುತಜ್ಞರು ಮುಳುಗಿರುವ ಹಡಗಿನ ಬಳಿ ಸಾಗಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಲಾಗಿದೆ.</p>.<p>ತೈಲ ಸೋರಿಕೆ ಆಗುತ್ತಿರುವುದು ನಿಜ, ಅತ್ಯಲ್ಪ ಪ್ರಮಾಣದಲ್ಲಿ ತೈಲ ಸೋರಿಕೆ ಆಗುತ್ತಿದೆ. ಹೀಗಾಗಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಕರಾವಳಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮನಿಲಾ:</strong> ಪ್ರತಿಕೂಲ ಹವಾಮಾನದ ಕಾರಣದಿಂದ ಮನಿಲಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದ್ದ ತೈಲ ಟ್ಯಾಂಕರ್ನಲ್ಲಿ ಸೋರಿಕೆ ಉಂಟಾಗಿದೆ ಎಂದು ಫಿಲಿಪೀನ್ಸ್ ಕರಾವಳಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಫಿಲಿಪೀನ್ಸ್ ಧ್ವಜ ಹೊತ್ತ ಬತಾನ್ ಪ್ರಾಂತ್ಯದ ಕರಾವಳಿ ಬಳಿ ಈ ಹಡಗು ಮುಳುಗಡೆಯಾಗಿದೆ. ಇದು 65 ಮೀಟರ್ ವಿಸ್ತೀರ್ಣದ ಟೆರ್ರಾ ನೋವ ಹಡಗಾಗಿದ್ದು, 14 ಲಕ್ಷ ಲೀಟರ್ ಕೈಗಾರಿಕೆ ಬಳಕೆಯ ತೈಲವನ್ನು ಹೊತ್ತುಸಾಗುತ್ತಿತ್ತು. ಹಡಗಿನಲ್ಲಿದ್ದ 16 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಒಬ್ಬ ಮುಳುಗಿದ್ದಾನೆ ಎಂದು ಸಿಬ್ಬಂದಿ ತಿಳಿಸಿದರು.</p>.<p>ಮುಳುಗಿರುವ ಹಡಗಿನಿಂದ ವಿಷಪೂರಿತ ತೈಲವನ್ನು ಸುರಕ್ಷಿತವಾಗಿ ಹೊರತೆಗೆದು ಉಂಟಾಗಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಡಳಿತಗಳು ಯೋಜನೆ ರೂಪಿಸುತ್ತಿವೆ. </p>.<p>ಮುಳುಗುತಜ್ಞರು ಮುಳುಗಿರುವ ಹಡಗಿನ ಬಳಿ ಸಾಗಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಲಾಗಿದೆ.</p>.<p>ತೈಲ ಸೋರಿಕೆ ಆಗುತ್ತಿರುವುದು ನಿಜ, ಅತ್ಯಲ್ಪ ಪ್ರಮಾಣದಲ್ಲಿ ತೈಲ ಸೋರಿಕೆ ಆಗುತ್ತಿದೆ. ಹೀಗಾಗಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಕರಾವಳಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>