ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Oil Leak

ADVERTISEMENT

ಬೆಂಗಳೂರು | ರಸ್ತೆಯಲ್ಲಿ ತೈಲ ಸೋರಿಕೆ: ಉರುಳಿಬಿದ್ದ ಸವಾರರು, ಸಂಚಾರಕ್ಕೆ ಅಡ್ಡಿ

ನಗರದ ಹೆಬ್ಬಾಳ ಮೇಲ್ಸೇತುವೆ, ಡೌನ್‌ ರ‍್ಯಾಂಪ್ ಹಾಗೂ ನೃಪತುಂಗ ರಸ್ತೆಗೆ ಹೊಂದಿಕೊಂಡಿರುವ ಕಾರ್ಪೋರೇಷನ್ ವೃತ್ತದಲ್ಲಿ ತೈಲ ಸೋರಿಕೆಯಾಗಿದ್ದರಿಂದ ಶನಿವಾರ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.
Last Updated 20 ಏಪ್ರಿಲ್ 2024, 15:33 IST
ಬೆಂಗಳೂರು | ರಸ್ತೆಯಲ್ಲಿ ತೈಲ ಸೋರಿಕೆ: ಉರುಳಿಬಿದ್ದ ಸವಾರರು, ಸಂಚಾರಕ್ಕೆ ಅಡ್ಡಿ

ವಿದ್ಯುತ್ ಕೇಂದ್ರದಲ್ಲಿ ಇಂಧನ ಸೋರಿಕೆ; ನದಿಗೆ ಹರಿಯುತ್ತಿರುವ ವಿಡಿಯೊ ಹರಿದಾಟ

ವಿದ್ಯುತ್‌ ಕೇಂದ್ರವೊಂದರಿಂದ ಭಾರೀ ಪ್ರಮಾಣದ ಉಳಿಕೆ ಇಂಧನ (heavy fuel) ಸೋರಿಕೆಯಾಗಿ ನದಿಗೆ ಹರಿದುಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 11 ಜನವರಿ 2024, 9:49 IST
ವಿದ್ಯುತ್ ಕೇಂದ್ರದಲ್ಲಿ ಇಂಧನ ಸೋರಿಕೆ; ನದಿಗೆ ಹರಿಯುತ್ತಿರುವ ವಿಡಿಯೊ ಹರಿದಾಟ

Photos| ಮಾರಿಷಸ್‌ ಕಡಲ ತೀರದಲ್ಲಿ ದುರಂತಕ್ಕೀಡಾಗಿ ತೈಲ ಚೆಲ್ಲುತ್ತಿದ್ದ ಹಡಗು ಎರಡು ತುಂಡು!

ಪೋರ್ಟ್‌ ಲೂಯಿಸ್‌ (ಮಾರಿಷಸ್‌): ಎರಡು ವಾರಗಳ ಹಿಂದೆ ಇಲ್ಲಿನ ಕರಾವಳಿ ತೀರದಲ್ಲಿ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಸಾವಿರ ಟನ್‌ನಷ್ಟು ತೈಲವನ್ನು ಸಮುದ್ರಕ್ಕೆ ಹರಿಸಿದ್ದ ಬೃಹತ್‌ ಹಡಗು ಈಗ ಎರಡು ಭಾಗವಾಗಿದೆ.ಇದನ್ನೂ ನೋಡಿ:Photos| ಮಾರಿಷಸ್‌ ಕಡಲ ತೀರದಲ್ಲಿ ಜಪಾನ್‌ ಹಡಗು ದುರಂತ: ಅಪಾರ ಪ್ರಮಾಣದ ತೈಲ ಸೋರಿಕೆ, ಜಲಚರಗಳಿಗೆ ಅಪಾಯಜಪಾನ್‌ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ಯ ಒಡೆತನದ ‘ಎಂ.ವಿ.ವಾಕಾಶಿಯೊ’ ಜುಲೈ 25 ರಂದು ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ, ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ದುರಂತಕ್ಕೀಡಾಯಿತು. ಅದರಲ್ಲಿದ್ದ ಅಪಾರ ಪ್ರಮಾಣದ ತೈಲ ಸಮುದ್ರಕ್ಕೆ ಸೋರಿಕೆಯಾಯಿತು. ಇದರಿಂದ ಮ್ಯಾಂಗ್ರೋವ್ ಕಾಡುಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಹಾನಿಗೊಳಗಾದವು.ಅಪಘಾತಕ್ಕೀಡಾದ ಸಮಯದಲ್ಲಿ ಹಡಗು ಬಿರುಕು ಬಿಟ್ಟಿದ್ದನ್ನು ಗಮನಿಸಿದ್ದ ಅಧಿಕಾರಿಗಳು, ಹಡಗು ಎರಡು ತುಂಡಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದರು. ಆಗಸ್ಟ್ 15ರಂದು ಹಡಗು ಇಬ್ಬಾಗವಾಗಿರುವುದಾಗಿಹಡಗಿನ ಆಪರೇಟರ್ ಮಿತ್ಸುಯಿ ಒಎಸ್ಕೆ ಲೈನ್ಸ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಅಪಘಾತಕ್ಕೀಡಾದ ಹಡಗಿನಲ್ಲಿ ಮೂರು ಸಾವಿರ ಟನ್‌ನಷ್ಟು ತೈಲವಿತ್ತು. ಹಡಗಿನ ಬೋರ್ಡ್‌ ಮೇಲೆ 90 ಟನ್‌ ತೈಲವಿತ್ತು. ಅಪಘಾತದ ನಂತರ ಮಾರಿಷಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
Last Updated 17 ಆಗಸ್ಟ್ 2020, 10:44 IST
Photos| ಮಾರಿಷಸ್‌ ಕಡಲ ತೀರದಲ್ಲಿ ದುರಂತಕ್ಕೀಡಾಗಿ ತೈಲ ಚೆಲ್ಲುತ್ತಿದ್ದ ಹಡಗು ಎರಡು ತುಂಡು!
err

Photos| ಮಾರಿಷಸ್‌ ಕಡಲ ತೀರದಲ್ಲಿ ಜಪಾನ್‌ ಹಡಗು ದುರಂತ: ಅಪಾರ ಪ್ರಮಾಣದ ತೈಲ ಸೋರಿಕೆ, ಜಲಚರಗಳಿಗೆ ಅಪಾಯ

ಎರಡು ವಾರಗಳ ಹಿಂದೆ ಮಾರಿಷ್‌ನ ಕಡಲ ತೀರಕ್ಕೆ ಬಂದಿದ್ದ ಜಪಾನ್‌ ಸರಕು ಸಾಗಾಣೆಯ ಬೃಹತ್‌ ಹಡಗೊಂದ್ದು ಹಾನಿಗೀಡಾಗಿ ಮುಳುಗಲಾರಂಭಿಸಿದೆ. ಹಡಗಿನಿಂದ ಸೋರಿಕೆಯಾಗುತ್ತಿರುವ ಅಪಾರ ಪ್ರಮಾಣದ ಡೀಸೆಲ್‌ ಸಮುದ್ರದ ಬೃಹತ್‌ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಅಲ್ಲದೆ, ಕಡ ತೀರವನ್ನೂ ಕಪ್ಪಾಗಿಸಿದೆ. ಇದರಿಂದ ಹಿಂದೂ ಮಹಾಸಾಗರದಲ್ಲಿ ಹವಳದ ದಂಡೆಗಳು, ಮೀನುಗಳೂ ಸೇರಿದಂತೆ ಅಪಾರ ಪ್ರಮಾಣದ ಜಲಚರಗಳಿಗೆ ಅಪಾಯ ಎದುರಾಗಿದೆ.ಜಪಾನ್‌ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ಯ ಒಡೆತನದ ‘ಎಂ.ವಿ.ವಾಕಾಶಿಯೊ’ ಜುಲೈ 25 ರಂದು ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ, ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ದುರಂತಕ್ಕೀಡಾಯಿತು. ಅರ್ಧಭಾಗ ಮುಳುಗಿರುವ ಹಡಗಿನಿಂದ ಸಿಬ್ಬಂದಿಯನ್ನೆಲ್ಲ ಯಶಸ್ವಿಯಾಗಿ ರಕ್ಷಿಸಲಾಗಿದೆ. ಸರಕು ಸಾಗಣಿಕ ಹಡಗಿನಲ್ಲಿ ಖಾಲಿ ಇತ್ತಾದರೂ, 200 ಟನ್‌ನಷ್ಟು ಡೀಸೆಲ್‌, 3,800 ಬಂಕರ್‌ ತೈಲವನ್ನು ದಾಸ್ತಾನು ಮಾಡಲಾಗಿತ್ತು. ಅದು ಈಗ ಸೋರಿಕೆಯಾಗುತ್ತಿದೆ. ನೆಲಕಚ್ಚಿರುವ ಹಡಗಿನಲ್ಲಿ ದೊಡ್ಡ ಬಿರುಕು ಕಂಡು ಬಂದಿದ್ದು, ಎರಡು ತುಂಡಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರೊಂದಿಗೆ ಭಾರಿ ಪ್ರಮಾಣದಲ್ಲಿ ಇಂಧನ ಹೊರಚೆಲ್ಲುವ ಅತಂಕ ಎದುರಾಗಿದೆ.ತೈಲ ಸೋರಿಕೆ ತಡೆಯುವ ಪ್ರಯತ್ನಗಳೆಲ್ಲ ವಿಫಲವಾಗಿವೆ. ಹೀಗಾಗಿ ಕಡಲ ತೀರ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.‘ನೀರಿನಲ್ಲಿ ಅಪಾರ ಪ್ರಮಾಣದ ಇಂಧನ ಬೆರೆತಿದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದೇ ನಮಗೆ ತೋಚುತ್ತಿಲ್ಲ. ಹೀಗಾಗಿ ಫ್ರಾನ್ಸ್‌ ಸರ್ಕಾರದ ನೆರವು ಕೋರಿದ್ದೇವೆ. ಆ ದೇಶದ ಅಧ್ಯಕ್ಷ ಎಮ್ಯಾನುವೆಲ್‌‌ ಮ್ಯಾಕ್ರನ್‌ ಅವರಿಗೂ ಮನವಿ ಮಾಡಿದ್ದೇವೆ’ ಎಂದು ಮಾರಿಷಸ್‌ನ ಪ್ರಧಾನ ಮಂತ್ರಿ ಪ್ರವಿಂದ್‌ ಜುಗ್ನಾಥ್‌ ತಿಳಿಸಿದ್ದಾರೆ.‘ಇಂಧನ ಸೋರಿಕೆಯಿಂದ ಬ್ಲೂ ಬೇ ಮರಿನ್‌ ಪಾರ್ಕ್‌ ಹಾಗೂ ಇತರ ಪ್ರದೇಶಗಳ ನೀರು ರಾಸಾಯನಿಕಯುಕ್ತವಾಗಿದೆ. ನಾವೀಗ ಪರಿಸರ ಬಿಕ್ಕಟ್ಟು ಎದುರಿಸುತ್ತಿದ್ದೇವೆ’ ಎಂದು ಮಾರಿಷಸ್‌ನ ಪರಿಸರ ಸಚಿವ ಕ್ಯಾವಿ ರಮಣೊ ಹೇಳಿದ್ದಾರೆ.‘ಈ ಹಡಗು ಜಪಾನ್‌ನ ಒಕಿಯೊ ಮಾರಿಟೈಮ್‌ ಕಾರ್ಪೊರೇಷನ್‌ ಆ್ಯಂಡ್‌ ನಾಗಸಾಕಿ ಶಿಪ್ಪಿಂಗ್‌ ಕಂಪನಿ‌ ಲಿಮಿಟೆಡ್‌ಗೆ ಸೇರಿದ್ದಾಗಿದೆ. ಈ ಕಂಪನಿಯ ವಿರುದ್ಧ ನಿರ್ಲಕ್ಷ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಡಗು ಜುಲೈ 25ರಂದು ನಮ್ಮ ಆಗ್ನೇಯ ಕರಾವಳಿ ಭಾಗದಲ್ಲಿ ಸಂಚರಿಸಿದೆ’ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಫೋಟೊಗಳು: AFP, AP
Last Updated 11 ಆಗಸ್ಟ್ 2020, 3:40 IST
Photos| ಮಾರಿಷಸ್‌ ಕಡಲ ತೀರದಲ್ಲಿ ಜಪಾನ್‌ ಹಡಗು ದುರಂತ: ಅಪಾರ ಪ್ರಮಾಣದ ತೈಲ ಸೋರಿಕೆ, ಜಲಚರಗಳಿಗೆ ಅಪಾಯ
err

ಜಪಾನ್ ಹಡಗಿನಿಂದ ಇಂಧನ ಸೋರಿಕೆ: ಪರಿಸರ ತುರ್ತುಪರಿಸ್ಥಿತಿ ಘೋಷಿಸಿದ ಮಾರಿಷಸ್‌

ಜಪಾನ್‌ನ ಎಂ.ವಿ.ವಕಾಶಿಯೊ ಎಂಬ ಹೆಸರಿನ ಹಡಗಿನಿಂದ ಇಂಧನ ಸೋರಿಕೆಯಾಗಿರುವುದು ಗೊತ್ತಾಗುತ್ತಿದ್ದಂತೆ ಮಾರಿಷಸ್‌ ಸರ್ಕಾರವು ಶುಕ್ರವಾರ ಪರಿಸರ ತುರ್ತು ಪರಿಸ್ಥಿತಿ ಘೋಷಿಸಿದೆ.
Last Updated 8 ಆಗಸ್ಟ್ 2020, 11:37 IST
ಜಪಾನ್ ಹಡಗಿನಿಂದ ಇಂಧನ ಸೋರಿಕೆ: ಪರಿಸರ ತುರ್ತುಪರಿಸ್ಥಿತಿ ಘೋಷಿಸಿದ ಮಾರಿಷಸ್‌

ಟಿ.ಆರ್.ಅನಂತರಾಮು ಲೇಖನ | ಸಾಗರಕ್ಕಂಟಿದ ತೈಲ ಕಂಟಕ

ತೈಲ ಸೋರಿಕೆಯಿಂದ ಆಗುವ ಸಾಗರ ಮಾಲಿನ್ಯ ತಡೆಗೆ ಕಾನೂನಿನ ಲಗಾಮಿಲ್ಲವೇ?
Last Updated 3 ಆಗಸ್ಟ್ 2020, 19:45 IST
ಟಿ.ಆರ್.ಅನಂತರಾಮು ಲೇಖನ | ಸಾಗರಕ್ಕಂಟಿದ ತೈಲ ಕಂಟಕ

ಮಂಗಳೂರು: ಹೆದ್ದಾರಿ ಮೇಲೆ ಉರುಳಿದ ಅನಿಲ‌ ತುಂಬಿದ ಟ್ಯಾಂಕರ್

ನಂತೂರು ವೃತ್ತದ ಬಳಿ ಪಡೀಲ್ ಕಡೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಬುಧವಾರ ನಸುಕಿನ ಜಾವ ಎಲ್ ಪಿಜಿ ಅನಿಲ ತುಂಬಿದ ಟ್ಯಾಂಕರ್ ಉರುಳಿ ಬಿದ್ದಿದೆ.
Last Updated 21 ನವೆಂಬರ್ 2018, 4:04 IST
ಮಂಗಳೂರು: ಹೆದ್ದಾರಿ ಮೇಲೆ ಉರುಳಿದ ಅನಿಲ‌ ತುಂಬಿದ ಟ್ಯಾಂಕರ್
ADVERTISEMENT

ಲಂಗರು ಕಟ್ಟೆಗೆ ಡಿಕ್ಕಿಯಾದ ಹಡಗು: ತೈಲ ಸೋರಿಕೆಯ ಭೀತಿ

ಸಿಂಗಪುರಕ್ಕೆ ತೈಲ‌ ತುಂಬಿಸಿಕೊಂಡು ಹೊರಟಿದ್ದ ಹಡಗೊಂದು ಇಲ್ಲಿನ ನವ ಮಂಗಳೂರು ಬಂದರು ಮಂಡಳಿ (ಎನ್ಎಂಪಿಟಿ) ಆವರಣದಲ್ಲಿ ಲಂಗರು ಕಟ್ಟೆಗೆ ಶನಿವಾರ ಸಂಜೆ ಡಿಕ್ಕಿ ಹೊಡೆದಿದ್ದು, ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಸಮುದ್ರದಲ್ಲಿ ತೈಲ ಸೋರಿಕೆಯ ಭೀತಿ ಉಂಟಾಗಿದೆ.
Last Updated 3 ನವೆಂಬರ್ 2018, 17:50 IST
ಲಂಗರು ಕಟ್ಟೆಗೆ ಡಿಕ್ಕಿಯಾದ ಹಡಗು: ತೈಲ ಸೋರಿಕೆಯ ಭೀತಿ
ADVERTISEMENT
ADVERTISEMENT
ADVERTISEMENT