<p><strong>ಇಂಫಾಲ(ಮಣಿಪುರ)</strong>: ವಿದ್ಯುತ್ ಕೇಂದ್ರವೊಂದರಿಂದ ಭಾರೀ ಪ್ರಮಾಣದ ಉಳಿಕೆ ಇಂಧನ (heavy fuel) ಸೋರಿಕೆಯಾಗಿ ನದಿಗೆ ಹರಿದುಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p><p>ಕಾಂಗ್ಪೋಕ್ಪಿ ಜಿಲ್ಲೆಯ ಲೀಮಾಖೋಂಗ್ ವಿದ್ಯುತ್ ಕೇಂದ್ರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕಾಂಟೊ ಸಬಲ್ ಮತ್ತು ಸೆಕ್ಮಾಯಿ ಮುಂತಾದ ಗ್ರಾಮಗಳ ಮೂಲಕ ಹಾದುಹೋಗುವ ನದಿಗಳಿಗೆ ಇಂಧನ ಸೋರಿಕೆಯಿಂದ ಅಪಾಯ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p><p>‘ನದಿಗಳು ಗ್ರಾಮಗಳ ಜೀವನಾಡಿಯಾಗಿವೆ. ದಿನ ನಿತ್ಯದ ಕೆಲಸಗಳಿಗೆ ನದಿಯ ನೀರನ್ನೇ ಬಳಸುತ್ತಿದ್ದೇವೆ. ಇಂಧನ ಸೋರಿಕೆಯಾದಾಗಿನಿಂದ ಗ್ರಾಮಸ್ಥರಲ್ಲಿ ಭಯ ಮೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಕೊಡಬೇಕಿದೆ’ ಎಂದು ಕಾಂಟೊ ಸಬಲ್ ನಿವಾಸಿ ನೊಂಗ್ಮಾಯಿ ತಿಳಿಸಿದ್ದಾರೆ.</p><p>ಇಂಧನ ನದಿಗಳಿಗೆ ಹರಿಯದಂತೆ ತಡೆಯಲು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಮುಖ್ಯಮಂತ್ರಿ ಕಚೇರಿ ನಿರ್ದೇಶನ ನೀಡಿದೆ. </p><p>ಘಟನೆಯ ಹಿಂದೆ ಕಿಡಿಗೇಡಿಗಳ ಕೈವಾಡವಿದೆಯೇ? ಅಥವಾ ಆಕಸ್ಮಿಕವಾಗಿ ನಡೆದಿದೆಯೇ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ(ಮಣಿಪುರ)</strong>: ವಿದ್ಯುತ್ ಕೇಂದ್ರವೊಂದರಿಂದ ಭಾರೀ ಪ್ರಮಾಣದ ಉಳಿಕೆ ಇಂಧನ (heavy fuel) ಸೋರಿಕೆಯಾಗಿ ನದಿಗೆ ಹರಿದುಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p><p>ಕಾಂಗ್ಪೋಕ್ಪಿ ಜಿಲ್ಲೆಯ ಲೀಮಾಖೋಂಗ್ ವಿದ್ಯುತ್ ಕೇಂದ್ರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕಾಂಟೊ ಸಬಲ್ ಮತ್ತು ಸೆಕ್ಮಾಯಿ ಮುಂತಾದ ಗ್ರಾಮಗಳ ಮೂಲಕ ಹಾದುಹೋಗುವ ನದಿಗಳಿಗೆ ಇಂಧನ ಸೋರಿಕೆಯಿಂದ ಅಪಾಯ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p><p>‘ನದಿಗಳು ಗ್ರಾಮಗಳ ಜೀವನಾಡಿಯಾಗಿವೆ. ದಿನ ನಿತ್ಯದ ಕೆಲಸಗಳಿಗೆ ನದಿಯ ನೀರನ್ನೇ ಬಳಸುತ್ತಿದ್ದೇವೆ. ಇಂಧನ ಸೋರಿಕೆಯಾದಾಗಿನಿಂದ ಗ್ರಾಮಸ್ಥರಲ್ಲಿ ಭಯ ಮೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಕೊಡಬೇಕಿದೆ’ ಎಂದು ಕಾಂಟೊ ಸಬಲ್ ನಿವಾಸಿ ನೊಂಗ್ಮಾಯಿ ತಿಳಿಸಿದ್ದಾರೆ.</p><p>ಇಂಧನ ನದಿಗಳಿಗೆ ಹರಿಯದಂತೆ ತಡೆಯಲು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಮುಖ್ಯಮಂತ್ರಿ ಕಚೇರಿ ನಿರ್ದೇಶನ ನೀಡಿದೆ. </p><p>ಘಟನೆಯ ಹಿಂದೆ ಕಿಡಿಗೇಡಿಗಳ ಕೈವಾಡವಿದೆಯೇ? ಅಥವಾ ಆಕಸ್ಮಿಕವಾಗಿ ನಡೆದಿದೆಯೇ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>