<p><strong>ವಿಶ್ವಸಂಸ್ಥೆ:</strong> ವಿಶ್ವ ಪರಂಪರೆ ಸಮಿತಿಯು ಆಫ್ರಿಕಾ ಖಂಡದ ಮಡಗಾಸ್ಕರ್, ಈಜಿಪ್ಟ್ ಮತ್ತು ಲಿಬಿಯಾದಲ್ಲಿರುವ ಮೂರು ಪರಂಪರಾ ಸ್ಥಳಗಳನ್ನು ಅಪಾಯದಲ್ಲಿರುವ ತಾಣಗಳ ಪಟ್ಟಿಯಿಂದ ತೆಗೆದುಹಾಕಿದೆ.</p><p>ವಿಶ್ವಸಂಸ್ಥೆಯ ಯುನೆಸ್ಕೊ ಈ ಬಗ್ಗೆ ಮಾಹಿತಿ ನೀಡಿದೆ.</p><p>ಫ್ರಾನ್ಸ್ ದೇಶದ ಪ್ಯಾರಿಸ್ನಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆ ಸಮಿತಿ (WHC)ಯ 47ನೇ ಅಧಿವೇಶನದಲ್ಲಿ ಬುಧವಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಯುನೆಸ್ಕೊ ಹೇಳಿದೆ.</p><p>ಮಡಗಾಸ್ಕರ್ನ ಮಳೆಕಾಡುಗಳು, ಈಜಿಪ್ಟ್ನ ಅಬು ಮೆನಾ ನಗರ ಮತ್ತು ಲಿಬಿಯಾದ ಘಡಾಮಸ್ನ ಹಳೆಯ ಪಟ್ಟಣವನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.</p><p>ನಾವು ಆಫ್ರಿಕಾದಲ್ಲಿರುವ ಪರಂಪರಾ ಸ್ಥಳಗಳ ರಕ್ಷಣೆಗೆ ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ. ಸ್ಥಳೀಯರಿಗೆ ತರಬೇತಿ ನೀಡಿ ಸಂರಕ್ಷಣೆಗೆ ಮುಂದಾಗಿದ್ದೇವೆ. ಕೆಲವು ತಾಣಗಳನ್ನು ಅಪಾಯದ ಪಟ್ಟಿಯಿಂದ ಹೊರತರಲು ನಾನಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ. ಈ ಪ್ರಯತ್ನಗಳು ಫಲ ನೀಡುತ್ತಿವೆ ಎಂದು ಯುನೆಸ್ಕೊ ನಿರ್ದೇಶಕಿ ಆ್ಯಡ್ರೆ ಅಜೌಲೆ ಹೇಳಿದ್ದಾರೆ.</p>.ಭಗವದ್ಗೀತೆ, ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ.ಒಡಿಶಾದ 24 ಹಳ್ಳಿಗಳು ಸುನಾಮಿ ಎದುರಿಸಲು ಸನ್ನದ್ಧ: ಯುನೆಸ್ಕೊ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ:</strong> ವಿಶ್ವ ಪರಂಪರೆ ಸಮಿತಿಯು ಆಫ್ರಿಕಾ ಖಂಡದ ಮಡಗಾಸ್ಕರ್, ಈಜಿಪ್ಟ್ ಮತ್ತು ಲಿಬಿಯಾದಲ್ಲಿರುವ ಮೂರು ಪರಂಪರಾ ಸ್ಥಳಗಳನ್ನು ಅಪಾಯದಲ್ಲಿರುವ ತಾಣಗಳ ಪಟ್ಟಿಯಿಂದ ತೆಗೆದುಹಾಕಿದೆ.</p><p>ವಿಶ್ವಸಂಸ್ಥೆಯ ಯುನೆಸ್ಕೊ ಈ ಬಗ್ಗೆ ಮಾಹಿತಿ ನೀಡಿದೆ.</p><p>ಫ್ರಾನ್ಸ್ ದೇಶದ ಪ್ಯಾರಿಸ್ನಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆ ಸಮಿತಿ (WHC)ಯ 47ನೇ ಅಧಿವೇಶನದಲ್ಲಿ ಬುಧವಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಯುನೆಸ್ಕೊ ಹೇಳಿದೆ.</p><p>ಮಡಗಾಸ್ಕರ್ನ ಮಳೆಕಾಡುಗಳು, ಈಜಿಪ್ಟ್ನ ಅಬು ಮೆನಾ ನಗರ ಮತ್ತು ಲಿಬಿಯಾದ ಘಡಾಮಸ್ನ ಹಳೆಯ ಪಟ್ಟಣವನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.</p><p>ನಾವು ಆಫ್ರಿಕಾದಲ್ಲಿರುವ ಪರಂಪರಾ ಸ್ಥಳಗಳ ರಕ್ಷಣೆಗೆ ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ. ಸ್ಥಳೀಯರಿಗೆ ತರಬೇತಿ ನೀಡಿ ಸಂರಕ್ಷಣೆಗೆ ಮುಂದಾಗಿದ್ದೇವೆ. ಕೆಲವು ತಾಣಗಳನ್ನು ಅಪಾಯದ ಪಟ್ಟಿಯಿಂದ ಹೊರತರಲು ನಾನಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ. ಈ ಪ್ರಯತ್ನಗಳು ಫಲ ನೀಡುತ್ತಿವೆ ಎಂದು ಯುನೆಸ್ಕೊ ನಿರ್ದೇಶಕಿ ಆ್ಯಡ್ರೆ ಅಜೌಲೆ ಹೇಳಿದ್ದಾರೆ.</p>.ಭಗವದ್ಗೀತೆ, ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ.ಒಡಿಶಾದ 24 ಹಳ್ಳಿಗಳು ಸುನಾಮಿ ಎದುರಿಸಲು ಸನ್ನದ್ಧ: ಯುನೆಸ್ಕೊ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>