ಕಠ್ಮಂಡು:ಸೈನಿಕ ಸೇರಿದಂತೆ ಇಬ್ಬರು ಭಾರತೀಯ ಪರ್ವತರೋಹಿಗಳು ನೇಪಾಳದಲ್ಲಿ ಮೃತಪಟ್ಟಿದ್ದಾರೆ.
ಮೌಂಟ್ ಎವರೆಸ್ಟ್ನಲ್ಲಿ ಸೈನಿಕ ರವಿ ಠಾಕೂರ್(28), ಮಕಲು ಪರ್ವತದಲ್ಲಿ ನಾರಾಯಣ ಸಿಂಗ್ ಮೃತಪಟ್ಟಿದ್ದಾರೆ. ಕೋಲ್ಕತ್ತದ ದೀಪಾಂಕರ್ ಘೋಷ್ (52) ಕಾಣೆಯಾಗಿದ್ದಾರೆ.
‘ಶಿಬಿರ 4ರಲ್ಲಿದ್ದ ನಾರಾಯಣ ಸಿಂಗ್, 8,485 ಮೀಟರ್ ಎತ್ತರದ ಪರ್ವತದಿಂದ ಇಳಿಯುವಾಗ ಮೃತಪಟ್ಟಿದ್ದಾರೆ’ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮೀರಾ ಆಚಾರ್ಯ ತಿಳಿಸಿದ್ದಾರೆ.
ವಿಶ್ವದ ಮೂರನೇ ಅತಿ ಎತ್ತರದ ಕಾಂಚನ ಜುಂಗಾ ಪರ್ವತದಲ್ಲಿ ಭಾರತೀಯ ಮೂಲದ ಇಬ್ಬರು ಪ್ರರ್ವತಾರೋಹಿಗಳು ಮೃತಪಟ್ಟ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.ಬುಧವಾರ ಮಧ್ಯಾಹ್ನದಿಂದ ಚೀಲಿ ಮೂಲದ ಪರ್ವತಾರೋಹಿಯೊಬ್ಬರು ಕಾಂಚನ ಜುಂಗಾದಲ್ಲಿಕಾಣೆಯಾಗಿದ್ದಾರೆ.