<p><strong>ಕೈರೊ:</strong> ಸುಡಾನ್ನ ಸಂಘರ್ಷದ ವೇಳೆ ರಾಜಧಾನಿ ಖಾರ್ಟೋಮ್ನ ಅನಾಥಾಶ್ರಮವೊಂದರಲ್ಲಿ ಸಿಲುಕಿದ್ದ ಸುಮಾರು 300 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಯುನಿಸೆಫ್ ನೆರವು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p>.<p>‘ಈ 300 ಮಕ್ಕಳನ್ನು ಈಶಾನ್ಯ ಆಫ್ರಿಕಾದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಏಪ್ರಿಲ್ ಮಧ್ಯಂತರದಿಂದ ಈವರೆಗೆ ಹಸಿವು, ಅನಾರೋಗ್ಯದಿಂದ 71 ಮಕ್ಕಳು ಅಲ್–ಮೆಕೋಮಾ ಅನಾಥಾಶ್ರಮದಲ್ಲಿ ಅಸುನೀಗಿದ್ದಾರೆ. ಮೃತರಲ್ಲಿ 3 ತಿಂಗಳ ಹಸುಳೆಗಳೇ ಹೆಚ್ಚು’ ಎಂದು ಯುನಿಸೆಫ್ನ ಯುನೈಟೆಡ್ ನೇಷನ್ಸ್ ಮಕ್ಕಳ ಸಂಸ್ಥೆಯ ವಕ್ತಾರ ರಿಕಾರ್ಡೊ ಪೈರ್ಸ್ ತಿಳಿಸಿದ್ದಾರೆ.</p>.<p>ಈ ಮಕ್ಕಳ ಜವಾಬ್ದಾರಿಯನ್ನು ಸುಡಾನ್ನ ಸಾಮಾಜಿಕ ಅಭಿವೃದ್ಧಿ ಮತ್ತು ಆರೋಗ್ಯ ಸಚಿವಾಲಯ ವಹಿಸಿಕೊಂಡಿದ್ದು, ಮಕ್ಕಳಿಗೆ ಅಗತ್ಯವಿರುವ ಆರೋಗ್ಯ ತಪಾಸಣೆ, ವೈದ್ಯಕೀಯ ಆರೈಕೆ, ಆಹಾರ, ಶೈಕ್ಷಣಿಕ ಮತ್ತು ಆಟ ಸೇರಿದಂತೆ ಮಾನವೀಯ ಸಹಕಾರದ ಜವಾಬ್ದಾರಿಯನ್ನು ಯುನೆಸೆಫ್ ನೋಡಿಕೊಂಡಿದೆ.</p>.<p>ಒಂದು ತಿಂಗಳ ಹಸುಗಳೆಗಳಿಂದ ಹಿಡಿದು 15 ವರ್ಷದ ಮಕ್ಕಳನ್ನು ರಕ್ಷಿಸಿ, ಖಾರ್ಟೋಮ್ನಿಂದ ಆಗ್ನೇಯಕ್ಕೆ ಸುಮಾರು 135 ಕಿ.ಮೀ ದೂರದಲ್ಲಿರುವ ಜಜಿರಾ ಪ್ರಾಂತ್ಯದ ರಾಜಧಾನಿ ಮದನಿಗೆ ಸ್ಥಳಾಂತರಿಸಲಾಗಿದೆ. ಮಕ್ಕಳೊಂದಿಗೆ 70 ಕೇರ್ಟೇಕರ್ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ರೆಡ್ ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿ ತಿಳಿಸಿದೆ. </p>.<p>ಏತನ್ಮಧ್ಯೆ, ಸ್ಥಳೀಯ ಸ್ವಯಂಸೇವಕರು ಈ ವಾರದ ಆರಂಭದಲ್ಲಿ ಇತರ 77 ಮಕ್ಕಳನ್ನು ಕರಾವಳಿಯ ಪ್ರತ್ಯೇಕ ಮನೆಗಳಿಂದ ಸ್ಥಳಾಂತರಿಸಿ, ಜಜಿರಾ ಪ್ರಾಂತ್ಯದ ಹಸಹಿಸಾ ಪಟ್ಟಣದ ಶಾಲೆಯಲ್ಲಿ 11 ಜನ ವಯಸ್ಕರೊಂದಿಗೆ ಮಕ್ಕಳು ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದಾರೆ ಎಂದು ಹದ್ರೀನ್ನ ಸ್ವಯಂಸೇವಕ ನಜೀಮ್ ಸಿರಾಗ್ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೈರೊ:</strong> ಸುಡಾನ್ನ ಸಂಘರ್ಷದ ವೇಳೆ ರಾಜಧಾನಿ ಖಾರ್ಟೋಮ್ನ ಅನಾಥಾಶ್ರಮವೊಂದರಲ್ಲಿ ಸಿಲುಕಿದ್ದ ಸುಮಾರು 300 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಯುನಿಸೆಫ್ ನೆರವು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p>.<p>‘ಈ 300 ಮಕ್ಕಳನ್ನು ಈಶಾನ್ಯ ಆಫ್ರಿಕಾದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಏಪ್ರಿಲ್ ಮಧ್ಯಂತರದಿಂದ ಈವರೆಗೆ ಹಸಿವು, ಅನಾರೋಗ್ಯದಿಂದ 71 ಮಕ್ಕಳು ಅಲ್–ಮೆಕೋಮಾ ಅನಾಥಾಶ್ರಮದಲ್ಲಿ ಅಸುನೀಗಿದ್ದಾರೆ. ಮೃತರಲ್ಲಿ 3 ತಿಂಗಳ ಹಸುಳೆಗಳೇ ಹೆಚ್ಚು’ ಎಂದು ಯುನಿಸೆಫ್ನ ಯುನೈಟೆಡ್ ನೇಷನ್ಸ್ ಮಕ್ಕಳ ಸಂಸ್ಥೆಯ ವಕ್ತಾರ ರಿಕಾರ್ಡೊ ಪೈರ್ಸ್ ತಿಳಿಸಿದ್ದಾರೆ.</p>.<p>ಈ ಮಕ್ಕಳ ಜವಾಬ್ದಾರಿಯನ್ನು ಸುಡಾನ್ನ ಸಾಮಾಜಿಕ ಅಭಿವೃದ್ಧಿ ಮತ್ತು ಆರೋಗ್ಯ ಸಚಿವಾಲಯ ವಹಿಸಿಕೊಂಡಿದ್ದು, ಮಕ್ಕಳಿಗೆ ಅಗತ್ಯವಿರುವ ಆರೋಗ್ಯ ತಪಾಸಣೆ, ವೈದ್ಯಕೀಯ ಆರೈಕೆ, ಆಹಾರ, ಶೈಕ್ಷಣಿಕ ಮತ್ತು ಆಟ ಸೇರಿದಂತೆ ಮಾನವೀಯ ಸಹಕಾರದ ಜವಾಬ್ದಾರಿಯನ್ನು ಯುನೆಸೆಫ್ ನೋಡಿಕೊಂಡಿದೆ.</p>.<p>ಒಂದು ತಿಂಗಳ ಹಸುಗಳೆಗಳಿಂದ ಹಿಡಿದು 15 ವರ್ಷದ ಮಕ್ಕಳನ್ನು ರಕ್ಷಿಸಿ, ಖಾರ್ಟೋಮ್ನಿಂದ ಆಗ್ನೇಯಕ್ಕೆ ಸುಮಾರು 135 ಕಿ.ಮೀ ದೂರದಲ್ಲಿರುವ ಜಜಿರಾ ಪ್ರಾಂತ್ಯದ ರಾಜಧಾನಿ ಮದನಿಗೆ ಸ್ಥಳಾಂತರಿಸಲಾಗಿದೆ. ಮಕ್ಕಳೊಂದಿಗೆ 70 ಕೇರ್ಟೇಕರ್ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ರೆಡ್ ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿ ತಿಳಿಸಿದೆ. </p>.<p>ಏತನ್ಮಧ್ಯೆ, ಸ್ಥಳೀಯ ಸ್ವಯಂಸೇವಕರು ಈ ವಾರದ ಆರಂಭದಲ್ಲಿ ಇತರ 77 ಮಕ್ಕಳನ್ನು ಕರಾವಳಿಯ ಪ್ರತ್ಯೇಕ ಮನೆಗಳಿಂದ ಸ್ಥಳಾಂತರಿಸಿ, ಜಜಿರಾ ಪ್ರಾಂತ್ಯದ ಹಸಹಿಸಾ ಪಟ್ಟಣದ ಶಾಲೆಯಲ್ಲಿ 11 ಜನ ವಯಸ್ಕರೊಂದಿಗೆ ಮಕ್ಕಳು ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದಾರೆ ಎಂದು ಹದ್ರೀನ್ನ ಸ್ವಯಂಸೇವಕ ನಜೀಮ್ ಸಿರಾಗ್ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>