<p><strong>ನ್ಯೂಯಾರ್ಕ್:</strong> ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯ ವಿಚಾರವಾಗಿ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸದಸ್ಯ ರಾಷ್ಟಗಳು ಅಗತ್ಯ ಸಹಕಾರ ನೀಡಬೇಕೆಂದುವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಕೋರಿದ್ದಾರೆ.</p>.<p>ತಜಕಿಸ್ತಾನದಲ್ಲಿ ನಡೆಯುತ್ತಿರುವ ಎಸ್ಸಿಒ ಶೃಂಗಸಭೆಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿರುವಗುಟೆರಸ್, ಅಫ್ಗಾನಿಸ್ತಾನದಲ್ಲಿನ ಆತಂಕಕಾರಿ ಬೆಳವಣಿಗೆಗಳು ರಾಜಕೀಯ, ಆರ್ಥಿಕ, ಭದ್ರತೆ ಮತ್ತು ಮಾನವೀಯ ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ.</p>.<p>ʼಅಫ್ಗಾನಿಸ್ತಾನದ ಜನರಿಗೆ ನೆರವಾಗಲು ವಿಶ್ವಸಂಸ್ಥೆಯು ಬದ್ದವಾಗಿದೆʼ ಎಂದಿರುವ ಅವರು, ʼಅಫ್ಗನ್ನರಿಗೆ ಬೆಂಬಲ ನೀಡಲು ನಿಮ್ಮೆಲ್ಲರೊಂದಿಗೆ ಸೇರಿಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.</p>.<p>ಮುಂದುವರಿದು, ʼಅಫ್ಗಾನಿಸ್ತಾನದಲ್ಲಿನ ಆತಂಕಕಾರಿಪರಿಸ್ಥಿತಿಯು ವೇಗವಾಗಿ ಬೆಳೆಯುತ್ತಿದ್ದು, ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ. ಆದರೆ, ಅಲ್ಲಿನ ಜನರು ತೀವ್ರ ಬಡತನವನ್ನು ತೊಡೆದುಹಾಕಲು, ಉದ್ಯೋಗಗಳನ್ನು ಪಡೆದುಕೊಳ್ಳಲು, ಆರೋಗ್ಯ, ಶಿಕ್ಷಣ ಸೇವೆಗಳ ಪುನಃಸ್ಥಾಪನೆ ಹಾಗೂ ಅವರ ಬದುಕು, ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆʼ ಎಂದು ಹೇಳಿದ್ದಾರೆ.</p>.<p>ಅಫ್ಗಾನಿಸ್ತಾನದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ತಜ್ಞರು ಮತ್ತು ವಿಶ್ವಸಂಸ್ಥೆಯ ವಿವಿಧ ಮಂಡಳಿಗಳು ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಆ ದೇಶಕ್ಕೆ ಅಗತ್ಯ ನೆರವು ನೀಡುವಂತೆಯೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿವೆ.</p>.<p>ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಪಿಲಿಪ್ಪೊ ಗ್ರಾಂಡಿ ಅವರು ಅಫ್ಗಾನಿಸ್ತಾನದಲ್ಲಿನ ಮಾನವೀಯ ಸನ್ನಿವೇಶವು ʼಅತ್ಯಂತ ಹತಾಶೆʼ ಮೂಡಿಸುತ್ತಿದೆ. ಆಹಾರ, ಔಷಧ, ವಸತಿ ಮತ್ತು ಇತರ ಅಗತ್ಯಗಳನ್ನು ತುರ್ತಾಗಿ ಪೂರೈಸಬೇಕಿದೆ ಎಂದು ಕರೆ ನೀಡಿದ್ದರು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/world-news/it-was-mistake-offer-sincere-apology-top-us-military-commander-on-kabul-drone-strike-867679.html" itemprop="url">ಕಾಬೂಲ್ ಡ್ರೋನ್ ದಾಳಿಯಲ್ಲಿ ನಾಗರಿಕರ ಹತ್ಯೆ; ತಪ್ಪೊಪ್ಪಿಕೊಂಡ ಅಮೆರಿಕ </a><br /><strong>*</strong><a href="https://cms.prajavani.net/world-news/three-dead-as-series-of-explosions-hit-afghanistans-nangarhar-province-867734.html" itemprop="url">ಅಫ್ಗಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಸರಣಿ ಸ್ಫೋಟ, 3 ಸಾವು </a><br /><strong>*</strong><a href="https://cms.prajavani.net/world-news/joe-biden-angers-france-eu-with-new-australia-uk-initiative-867400.html" itemprop="url">ಚೀನಾವನ್ನು ಎದುರಿಸಲು ಅಮೆರಿಕ ಹೊಸ ಮೈತ್ರಿಕೂಟ: ಯುರೋಪ್, ಫ್ರಾನ್ಸ್ ಆಕ್ರೋಶ </a><br /><strong>*</strong><a href="https://cms.prajavani.net/world-news/modi-govt-in-touch-with-taliban-govt-in-kabul-after-kidnapping-of-indian-national-in-afghanistan-867380.html" itemprop="url">ಅಫ್ಗನ್ನಲ್ಲಿ ಭಾರತೀಯನ ಅಪಹರಣ; ತಾಲಿಬಾನ್ ಸಂಪರ್ಕದಲ್ಲಿ ಭಾರತ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್:</strong> ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯ ವಿಚಾರವಾಗಿ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸದಸ್ಯ ರಾಷ್ಟಗಳು ಅಗತ್ಯ ಸಹಕಾರ ನೀಡಬೇಕೆಂದುವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಕೋರಿದ್ದಾರೆ.</p>.<p>ತಜಕಿಸ್ತಾನದಲ್ಲಿ ನಡೆಯುತ್ತಿರುವ ಎಸ್ಸಿಒ ಶೃಂಗಸಭೆಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿರುವಗುಟೆರಸ್, ಅಫ್ಗಾನಿಸ್ತಾನದಲ್ಲಿನ ಆತಂಕಕಾರಿ ಬೆಳವಣಿಗೆಗಳು ರಾಜಕೀಯ, ಆರ್ಥಿಕ, ಭದ್ರತೆ ಮತ್ತು ಮಾನವೀಯ ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ.</p>.<p>ʼಅಫ್ಗಾನಿಸ್ತಾನದ ಜನರಿಗೆ ನೆರವಾಗಲು ವಿಶ್ವಸಂಸ್ಥೆಯು ಬದ್ದವಾಗಿದೆʼ ಎಂದಿರುವ ಅವರು, ʼಅಫ್ಗನ್ನರಿಗೆ ಬೆಂಬಲ ನೀಡಲು ನಿಮ್ಮೆಲ್ಲರೊಂದಿಗೆ ಸೇರಿಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.</p>.<p>ಮುಂದುವರಿದು, ʼಅಫ್ಗಾನಿಸ್ತಾನದಲ್ಲಿನ ಆತಂಕಕಾರಿಪರಿಸ್ಥಿತಿಯು ವೇಗವಾಗಿ ಬೆಳೆಯುತ್ತಿದ್ದು, ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ. ಆದರೆ, ಅಲ್ಲಿನ ಜನರು ತೀವ್ರ ಬಡತನವನ್ನು ತೊಡೆದುಹಾಕಲು, ಉದ್ಯೋಗಗಳನ್ನು ಪಡೆದುಕೊಳ್ಳಲು, ಆರೋಗ್ಯ, ಶಿಕ್ಷಣ ಸೇವೆಗಳ ಪುನಃಸ್ಥಾಪನೆ ಹಾಗೂ ಅವರ ಬದುಕು, ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆʼ ಎಂದು ಹೇಳಿದ್ದಾರೆ.</p>.<p>ಅಫ್ಗಾನಿಸ್ತಾನದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ತಜ್ಞರು ಮತ್ತು ವಿಶ್ವಸಂಸ್ಥೆಯ ವಿವಿಧ ಮಂಡಳಿಗಳು ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಆ ದೇಶಕ್ಕೆ ಅಗತ್ಯ ನೆರವು ನೀಡುವಂತೆಯೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿವೆ.</p>.<p>ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಪಿಲಿಪ್ಪೊ ಗ್ರಾಂಡಿ ಅವರು ಅಫ್ಗಾನಿಸ್ತಾನದಲ್ಲಿನ ಮಾನವೀಯ ಸನ್ನಿವೇಶವು ʼಅತ್ಯಂತ ಹತಾಶೆʼ ಮೂಡಿಸುತ್ತಿದೆ. ಆಹಾರ, ಔಷಧ, ವಸತಿ ಮತ್ತು ಇತರ ಅಗತ್ಯಗಳನ್ನು ತುರ್ತಾಗಿ ಪೂರೈಸಬೇಕಿದೆ ಎಂದು ಕರೆ ನೀಡಿದ್ದರು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/world-news/it-was-mistake-offer-sincere-apology-top-us-military-commander-on-kabul-drone-strike-867679.html" itemprop="url">ಕಾಬೂಲ್ ಡ್ರೋನ್ ದಾಳಿಯಲ್ಲಿ ನಾಗರಿಕರ ಹತ್ಯೆ; ತಪ್ಪೊಪ್ಪಿಕೊಂಡ ಅಮೆರಿಕ </a><br /><strong>*</strong><a href="https://cms.prajavani.net/world-news/three-dead-as-series-of-explosions-hit-afghanistans-nangarhar-province-867734.html" itemprop="url">ಅಫ್ಗಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಸರಣಿ ಸ್ಫೋಟ, 3 ಸಾವು </a><br /><strong>*</strong><a href="https://cms.prajavani.net/world-news/joe-biden-angers-france-eu-with-new-australia-uk-initiative-867400.html" itemprop="url">ಚೀನಾವನ್ನು ಎದುರಿಸಲು ಅಮೆರಿಕ ಹೊಸ ಮೈತ್ರಿಕೂಟ: ಯುರೋಪ್, ಫ್ರಾನ್ಸ್ ಆಕ್ರೋಶ </a><br /><strong>*</strong><a href="https://cms.prajavani.net/world-news/modi-govt-in-touch-with-taliban-govt-in-kabul-after-kidnapping-of-indian-national-in-afghanistan-867380.html" itemprop="url">ಅಫ್ಗನ್ನಲ್ಲಿ ಭಾರತೀಯನ ಅಪಹರಣ; ತಾಲಿಬಾನ್ ಸಂಪರ್ಕದಲ್ಲಿ ಭಾರತ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>