<p><strong>ದುಬೈ</strong>: ಸತ್ಯಶೋಧನಾ ಅಭಿಯಾನದ ಅಂಗವಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ನಿಯೋಗದಲ್ಲಿದ್ದ ಯಹೂದಿ ಪಂಡಿತರೊಬ್ಬರಿಗೆ ಸಾರ್ವಜನಿಕವಾಗಿ ಟೋಪಿ (ಕಿಪ್ಪಾ) ಧರಿಸದಂತೆ ಅಧಿಕಾರಿಗಳು ಆದೇಶಿಸಿದ ಕಾರಣ ನಿಯೋಗವು ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದೆ. </p>.<p>ಅಧಿಕಾರಿಗಳ ಈ ಕ್ರಮವು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ತಮ್ಮ ಆಡಳಿತದಲ್ಲಿ ಸಾಧಿಸಿರುವ ಪ್ರಗತಿಯನ್ನು ಸೂಚಿಸುತ್ತಿದೆಯೇ ಎಂದು ಯಹೂದಿ ಪಂಡಿತ ಅಬ್ರಹಾಂ ಕೂಪರ್ ಪ್ರಶ್ನಿಸಿದ್ದಾರೆ.</p>.<p>ಸೌದಿ ಅರೇಬಿಯಾದ ಪರಿಸ್ಥಿತಿ ಸಂಕೀರ್ಣವಾಗಿದೆ ಎಂದು ನಿಯೋಗದಲ್ಲಿದ್ದ ನ್ಯೂಯಾರ್ಕ್ ಸಿಟಿಯ ರೆವರೆಂಡ್ ಫ್ರೆಡೆರಿಕ್ ಡೇವಿ ಹೇಳಿದರು.</p>.<p>ಟೋಪಿ ತೆಗೆಯಲು ಆದೇಶಿಸಿರುವುದು ದುರದೃಷ್ಟಕರ. ತಪ್ಪುಗ್ರಹಿಕೆಯಿಂದ ಈ ರೀತಿ ಮಾಡಲಾಗಿದೆ ಎಂದು ಸೌದಿ ಅರೇಬಿಯಾದ ರಾಯಭಾರ ಕಚೇರಿಯು ಆನ್ಲೈನ್ ಪ್ರಕಟಣೆಯಲ್ಲಿ ಹೇಳಿದೆ</p>.<p>ಸೌದಿ ಅರೇಬಿಯಾದ ಮಣ್ಣಿನ ಗೋಡೆಗಳ ಗ್ರಾಮ ದಿರಿಯಾಕ್ಕೆ ನಿಯೋಗವು ಭೇಟಿ ನೀಡಿದ್ದ ವೇಳೆ ಅಧಿಕಾರಿಗಳು ಟೋಪಿ ತೆಗೆಯುವಂತೆ ಅಬ್ರಹಾಂ ಕೂಪರ್ಗೆ ಸೂಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ</strong>: ಸತ್ಯಶೋಧನಾ ಅಭಿಯಾನದ ಅಂಗವಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ನಿಯೋಗದಲ್ಲಿದ್ದ ಯಹೂದಿ ಪಂಡಿತರೊಬ್ಬರಿಗೆ ಸಾರ್ವಜನಿಕವಾಗಿ ಟೋಪಿ (ಕಿಪ್ಪಾ) ಧರಿಸದಂತೆ ಅಧಿಕಾರಿಗಳು ಆದೇಶಿಸಿದ ಕಾರಣ ನಿಯೋಗವು ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದೆ. </p>.<p>ಅಧಿಕಾರಿಗಳ ಈ ಕ್ರಮವು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ತಮ್ಮ ಆಡಳಿತದಲ್ಲಿ ಸಾಧಿಸಿರುವ ಪ್ರಗತಿಯನ್ನು ಸೂಚಿಸುತ್ತಿದೆಯೇ ಎಂದು ಯಹೂದಿ ಪಂಡಿತ ಅಬ್ರಹಾಂ ಕೂಪರ್ ಪ್ರಶ್ನಿಸಿದ್ದಾರೆ.</p>.<p>ಸೌದಿ ಅರೇಬಿಯಾದ ಪರಿಸ್ಥಿತಿ ಸಂಕೀರ್ಣವಾಗಿದೆ ಎಂದು ನಿಯೋಗದಲ್ಲಿದ್ದ ನ್ಯೂಯಾರ್ಕ್ ಸಿಟಿಯ ರೆವರೆಂಡ್ ಫ್ರೆಡೆರಿಕ್ ಡೇವಿ ಹೇಳಿದರು.</p>.<p>ಟೋಪಿ ತೆಗೆಯಲು ಆದೇಶಿಸಿರುವುದು ದುರದೃಷ್ಟಕರ. ತಪ್ಪುಗ್ರಹಿಕೆಯಿಂದ ಈ ರೀತಿ ಮಾಡಲಾಗಿದೆ ಎಂದು ಸೌದಿ ಅರೇಬಿಯಾದ ರಾಯಭಾರ ಕಚೇರಿಯು ಆನ್ಲೈನ್ ಪ್ರಕಟಣೆಯಲ್ಲಿ ಹೇಳಿದೆ</p>.<p>ಸೌದಿ ಅರೇಬಿಯಾದ ಮಣ್ಣಿನ ಗೋಡೆಗಳ ಗ್ರಾಮ ದಿರಿಯಾಕ್ಕೆ ನಿಯೋಗವು ಭೇಟಿ ನೀಡಿದ್ದ ವೇಳೆ ಅಧಿಕಾರಿಗಳು ಟೋಪಿ ತೆಗೆಯುವಂತೆ ಅಬ್ರಹಾಂ ಕೂಪರ್ಗೆ ಸೂಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>