<p><strong>ಮಾಲೆ</strong>: ‘ದೇಶದಲ್ಲಿ ಆರ್ಥಿಕ ಅಸ್ಥಿರತೆ ಸೃಷ್ಟಿಸಲು ಉದ್ದೇಶಿಸಿರುವವರನ್ನು ಪತ್ತೆಮಾಡಲು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಮಾಲ್ಡೀವ್ಸ್ ಪೊಲೀಸರು ಬುಧವಾರ ತಿಳಿಸಿದ್ದಾರೆ.</p>.<p>ಸರ್ಕಾರವನ್ನು ಕೆಡವಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ ಎಂದು ಎರಡು ದಿನಗಳ ಹಿಂದಷ್ಟೇ ಅಧ್ಯಕ್ಷ ಮೊಹಮ್ಮದ್ ಮೊಯಿಜು ಅವರು ಹೇಳಿದ್ದರು.</p>.<p>ಮಾಲ್ದೀವ್ಸ್ನ ಜನರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳಿಂದ ವಿದೇಶಿ ವಹಿವಾಟು ನಡೆಸದಂತೆ ದೇಶದ ಕೇಂದ್ರೀಯ ಬ್ಯಾಂಕ್ ‘ಬ್ಯಾಂಕ್ ಆಫ್ ಮಾಲ್ದೀವ್ಸ್’ ಭಾನುವಾರ ನಿರ್ಬಂಧ ಹೇರಿತ್ತು. ಹೊಸದಾಗಿ ನೀಡುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳಿಗೂ ವಿದೇಶಿ ವಹಿವಾಟು ನಿರ್ಬಂಧಿಸಲಾಗಿತ್ತು.</p>.<p>ನಿರ್ಬಂಧ ಹೇರಿದ ಕೆಲವೇ ಗಂಟೆಗಳಲ್ಲಿಯೇ ಕೇಂದ್ರೀಯ ಬ್ಯಾಂಕ್ ನಿರ್ಬಂಧವನ್ನು ತೆರವು ಮಾಡಿತು. ಮಾಲ್ದೀವ್ಸ್ ಹಣಕಾಸು ಪ್ರಾಧಿಕಾರದ (ಎಂಎಂಎ) ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಹೇಳಿತ್ತು. </p>.<p>‘ವಿದೇಶಿ ವಹಿವಾಟು ನಿರ್ಬಂಧದಿಂದ ದೇಶದಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಲಿದೆ ಎಂದು ಭಯ ಹುಟ್ಟಿಸಿ, ಜನರು ಬೀದಿಗಿಳಿಯುವಂತೆ ಮಾಡಿ, ಸರ್ಕಾರವನ್ನು ಬೀಳಿಸಲು ಕೆಲವು ಉದ್ದೇಶಿಸಿದ್ದಾರೆ. ಇವರನ್ನು ಪತ್ತೆ ಮಾಡಲಾಗುವುದು’ ಎಂದು ಪೊಲೀಸರು ಸೋಮವಾರ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೆ</strong>: ‘ದೇಶದಲ್ಲಿ ಆರ್ಥಿಕ ಅಸ್ಥಿರತೆ ಸೃಷ್ಟಿಸಲು ಉದ್ದೇಶಿಸಿರುವವರನ್ನು ಪತ್ತೆಮಾಡಲು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಮಾಲ್ಡೀವ್ಸ್ ಪೊಲೀಸರು ಬುಧವಾರ ತಿಳಿಸಿದ್ದಾರೆ.</p>.<p>ಸರ್ಕಾರವನ್ನು ಕೆಡವಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ ಎಂದು ಎರಡು ದಿನಗಳ ಹಿಂದಷ್ಟೇ ಅಧ್ಯಕ್ಷ ಮೊಹಮ್ಮದ್ ಮೊಯಿಜು ಅವರು ಹೇಳಿದ್ದರು.</p>.<p>ಮಾಲ್ದೀವ್ಸ್ನ ಜನರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳಿಂದ ವಿದೇಶಿ ವಹಿವಾಟು ನಡೆಸದಂತೆ ದೇಶದ ಕೇಂದ್ರೀಯ ಬ್ಯಾಂಕ್ ‘ಬ್ಯಾಂಕ್ ಆಫ್ ಮಾಲ್ದೀವ್ಸ್’ ಭಾನುವಾರ ನಿರ್ಬಂಧ ಹೇರಿತ್ತು. ಹೊಸದಾಗಿ ನೀಡುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳಿಗೂ ವಿದೇಶಿ ವಹಿವಾಟು ನಿರ್ಬಂಧಿಸಲಾಗಿತ್ತು.</p>.<p>ನಿರ್ಬಂಧ ಹೇರಿದ ಕೆಲವೇ ಗಂಟೆಗಳಲ್ಲಿಯೇ ಕೇಂದ್ರೀಯ ಬ್ಯಾಂಕ್ ನಿರ್ಬಂಧವನ್ನು ತೆರವು ಮಾಡಿತು. ಮಾಲ್ದೀವ್ಸ್ ಹಣಕಾಸು ಪ್ರಾಧಿಕಾರದ (ಎಂಎಂಎ) ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಹೇಳಿತ್ತು. </p>.<p>‘ವಿದೇಶಿ ವಹಿವಾಟು ನಿರ್ಬಂಧದಿಂದ ದೇಶದಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಲಿದೆ ಎಂದು ಭಯ ಹುಟ್ಟಿಸಿ, ಜನರು ಬೀದಿಗಿಳಿಯುವಂತೆ ಮಾಡಿ, ಸರ್ಕಾರವನ್ನು ಬೀಳಿಸಲು ಕೆಲವು ಉದ್ದೇಶಿಸಿದ್ದಾರೆ. ಇವರನ್ನು ಪತ್ತೆ ಮಾಡಲಾಗುವುದು’ ಎಂದು ಪೊಲೀಸರು ಸೋಮವಾರ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>